Advertisement
ಅನುಕ್ರಮ

ಚಿಲಿಪಿಲಿ | ಹೊನ್ನ ಹಣೆಯ ಎಲೆಹಕ್ಕಿ

Share

ಹೊನ್ನ ಹಣೆಯ ಎಲೆಹಕ್ಕಿ(golden fronted leaf bird ) ( Gold Fronted Chloropsis)
ಈ ಎಲೆಹಕ್ಕಿಯ ಗಾತ್ರ( 19 cm) ಬುಲ್ ಬುಲ್ ಹಕ್ಕಿಯಷ್ಟಿರುತ್ತದೆ. ‌ಸಂಸ್ಕೃತದಲ್ಲಿ ಪಕ್ಷಗುಪ್ತ ,ಪತ್ರಗುಪ್ತ, ಎಂದೂ, ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.

ತಲೆ, ಬೆನ್ನು , ಬಾಲ, ರೆಕ್ಕೆಗಳೆಲ್ಲವೂ ಎಲೆ ಹಸಿರು ಹಸಿರು ಇರುವುದರಿಂದ ಹಸಿರು ಹಕ್ಕಿ ಎಂಬುದು ರೂಡಿಯಲ್ಲಿರುವ ಹೆಸರು.‌
ಕೊಕ್ಕು, ಕುತ್ತಿಗೆ , ಕೆನ್ನೆ ಕಪ್ಪು ಬಣ್ಣದಲ್ಲಿದ್ದು, ಹಣೆಯ ಮದ್ಯದಲ್ಲಿ ಹೊಂಬಣ್ಣವಿದೆ . ಆದುದರಿಂದ ಹೊನ್ನ ಹಣೆಯ ಹಕ್ಕಿ ಎಂಬ ಹೆಸರಿದೆ. ರೆಕ್ಕೆಯ ಬುಡ, ಕೊಕ್ಕಿನ ಬುಡ ನೀಲಿಮಚ್ಚೆ ಇದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಜೋಡಿಯಾಗಿ ಇರುತ್ತವೆ, ಗುಂಪಿನಲ್ಲಿಯೂ ಇರುತ್ತವೆ. ಹೂ ಹಣ್ಣಿನ ಮರಗಳು ನೆಚ್ಚಿನ ತಾಣ. ಕಾಡುಗಳಲ್ಲಿ, ಉದ್ಯಾನವನ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ.ಹೂವಿನ ಮಕರಂದ, ಹಣ್ಣುಗಳು, ಕೀಟಗಳು ಇವುಗಳ ಆಹಾರ.

ಭಾರತ, ಬಾಂಗ್ಲಾ, ದೇಶ, ಮಾಯನ್ಮಾರ್, ಶ್ರೀ ಲಂಕಾ ಮೊದಲಾದೆಡೆಗಳಲ್ಲಿ ಕಂಡು ಬರುತ್ತದೆ. ವಲಸೆ ಹಕ್ಕಿಯಾಗಿದೆ.
ತನ್ನ ಆಕರ್ಷಕ ಬಣ್ಣ, ಮಧುರ ಧ್ವನಿಯಿಂದಾಗಿ ಮನುಷ್ಯನ ಇಷ್ಟದ ಹಕ್ಕಿಯಾಗಿದೆ. ಈ ಹಕ್ಕಿಯ ವಿಭಿನ್ನ , ವಿಶಿಷ್ಟ ಚರ್ಯೆಯಿಂದಾಗಿ ಜನರು ಪಂಜರದಲ್ಲಿಟ್ಟು ಸಾಕುತ್ತಾರೆ. ಇದು ಬಹು ಬೇಡಿಕೆಯಲ್ಲಿರುವ ಹಕ್ಕಿಯಾಗಿದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!

ಹಲಸಿನ ಹಣ್ಣಿನಿಂದ ಸುಲಭವಾಗಿ ತಯಾರಿಸಬಹುದಾದ ಕಸ್ಟರ್ಡ್ ಬೇಸಿಗೆಯಲ್ಲಿ ಉತ್ತಮ ಡೆಸರ್ಟ್ ಆಯ್ಕೆಯಾಗಿದೆ. ಕಡಿಮೆ…

8 hours ago

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

14 hours ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

21 hours ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

21 hours ago

ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌

ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

21 hours ago

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

1 day ago