Advertisement
ಅನುಕ್ರಮ

ಚಿಲಿಪಿಲಿ | ಹೊನ್ನ ಹಣೆಯ ಎಲೆಹಕ್ಕಿ

Share

ಹೊನ್ನ ಹಣೆಯ ಎಲೆಹಕ್ಕಿ(golden fronted leaf bird ) ( Gold Fronted Chloropsis)
ಈ ಎಲೆಹಕ್ಕಿಯ ಗಾತ್ರ( 19 cm) ಬುಲ್ ಬುಲ್ ಹಕ್ಕಿಯಷ್ಟಿರುತ್ತದೆ. ‌ಸಂಸ್ಕೃತದಲ್ಲಿ ಪಕ್ಷಗುಪ್ತ ,ಪತ್ರಗುಪ್ತ, ಎಂದೂ, ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.

Advertisement

ತಲೆ, ಬೆನ್ನು , ಬಾಲ, ರೆಕ್ಕೆಗಳೆಲ್ಲವೂ ಎಲೆ ಹಸಿರು ಹಸಿರು ಇರುವುದರಿಂದ ಹಸಿರು ಹಕ್ಕಿ ಎಂಬುದು ರೂಡಿಯಲ್ಲಿರುವ ಹೆಸರು.‌
ಕೊಕ್ಕು, ಕುತ್ತಿಗೆ , ಕೆನ್ನೆ ಕಪ್ಪು ಬಣ್ಣದಲ್ಲಿದ್ದು, ಹಣೆಯ ಮದ್ಯದಲ್ಲಿ ಹೊಂಬಣ್ಣವಿದೆ . ಆದುದರಿಂದ ಹೊನ್ನ ಹಣೆಯ ಹಕ್ಕಿ ಎಂಬ ಹೆಸರಿದೆ. ರೆಕ್ಕೆಯ ಬುಡ, ಕೊಕ್ಕಿನ ಬುಡ ನೀಲಿಮಚ್ಚೆ ಇದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಜೋಡಿಯಾಗಿ ಇರುತ್ತವೆ, ಗುಂಪಿನಲ್ಲಿಯೂ ಇರುತ್ತವೆ. ಹೂ ಹಣ್ಣಿನ ಮರಗಳು ನೆಚ್ಚಿನ ತಾಣ. ಕಾಡುಗಳಲ್ಲಿ, ಉದ್ಯಾನವನ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ.ಹೂವಿನ ಮಕರಂದ, ಹಣ್ಣುಗಳು, ಕೀಟಗಳು ಇವುಗಳ ಆಹಾರ.

ಭಾರತ, ಬಾಂಗ್ಲಾ, ದೇಶ, ಮಾಯನ್ಮಾರ್, ಶ್ರೀ ಲಂಕಾ ಮೊದಲಾದೆಡೆಗಳಲ್ಲಿ ಕಂಡು ಬರುತ್ತದೆ. ವಲಸೆ ಹಕ್ಕಿಯಾಗಿದೆ.
ತನ್ನ ಆಕರ್ಷಕ ಬಣ್ಣ, ಮಧುರ ಧ್ವನಿಯಿಂದಾಗಿ ಮನುಷ್ಯನ ಇಷ್ಟದ ಹಕ್ಕಿಯಾಗಿದೆ. ಈ ಹಕ್ಕಿಯ ವಿಭಿನ್ನ , ವಿಶಿಷ್ಟ ಚರ್ಯೆಯಿಂದಾಗಿ ಜನರು ಪಂಜರದಲ್ಲಿಟ್ಟು ಸಾಕುತ್ತಾರೆ. ಇದು ಬಹು ಬೇಡಿಕೆಯಲ್ಲಿರುವ ಹಕ್ಕಿಯಾಗಿದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

11 hours ago

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

1 day ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

1 day ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

1 day ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

1 day ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

1 day ago