Advertisement
ಅನುಕ್ರಮ

ಚಿಲಿಪಿಲಿ | ಹಕ್ಕಿಗಳ ಕೂಗನ್ನು ಅನುಕರಣೆ ಮಾಡಬಲ್ಲ ಕಾಜಾಣ ಹಕ್ಕಿ..! |

Share

ನಮ್ಮ ಸುತ್ತಲೂ ಹಲವು ಹಕ್ಕಿಗಳ ಕಲರವ ಕೇಳುತ್ತಿರುತ್ತವೆ. ಒಂದೊಂದು ಹಕ್ಕಿಯ ದನಿಯೂ ಬೇರೆ ಬೇರೆ. ಕೆಲವೊಮ್ಮೆ ಹೋಲಿಕೆ ಇದ್ದು ನಮ್ಮನ್ನು ಬೆಸ್ತು ಬೀಳಿಸುವ ಹಕ್ಕಿಗಳೂ ಇವೆ. ಹೊಸ ಹಕ್ಕಿಯ ದನಿಯೆಂದು ಬೆಂಬತ್ತಿ ಹೋದರೆ ಹೊಸ ದನಿಯೊಡೆಯನನ್ನು ಕಾಣದೆ ವಾಪಾಸ್ ಆಗ ಬೇಕಾದೀತು. ಕೆಲವು ಹಕ್ಕಿಗಳು ಹಲವು ರೀತಿಯಲ್ಲಿ ಕೂಗ ಬಲ್ಲವು. ಅಂತಹ ವಿಶಿಷ್ಟ ಹಕ್ಕಿಗಳ ಸಾಲಿನಲ್ಲಿ ಈ ಕಾಜಾಣ ಹಕ್ಕಿಯೂ ನಿಲ್ಲುತ್ತದೆ. ಹತ್ತಕ್ಕೂ ಮಿಕ್ಕಿ ಇತರ ಹಕ್ಕಿಗಳ ಕೂಗನ್ನು ಅನುಕರಣೆ ಮಾಡ ಬಲ್ಲುದು.

ಮೈನಾ ಗಾತ್ರದ (31 cm-35 ಛcm) ಈ ಹಕ್ಕಿ ನೀಲಿಗಪ್ಪಿನ ಬಣ್ಣದ್ದಾಗಿದೆ. ತಲೆಯಲ್ಲಿ ಪುಟ್ಟ ಜುಟ್ಟಿನಂತ ರಚನೆಯಿದೆ. ಗಟ್ಟಿಗಂಟಲಿನ ಹಕ್ಕಿಯಾಗಿದೆ. ಭಾರತ , ಬಾಂಗ್ಲಾ, ಬರ್ಮಾ ಮೊದಲಾದ ಕಡೆಗಳಲ್ಲಿ ಕಂಡು ಬರುತ್ತವೆ. ಹತ್ತಾರು ಉಪಜಾತಿಗಳು ಕಾಜಾಣದಲ್ಲಿವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಗಳಿಲ್ಲ. ಆಕ್ರಮಣಕಾರಿ ಹಕ್ಕಿಯಾಗಿದ್ದು ರಾಜ ಕಾಗೆ ಎಂಬ ಹೆಸರೂ ಇದೆ. ವೈರಿ ಎಷ್ಟೇ ಪ್ರಬಲವಾಗಿದ್ದರೂ ಅದರ ಮೇಲೆ ಎಗರಿ ಬೀಳುವ ಧೈರ್ಯಶಾಲಿ ಹಕ್ಕಿಯಾಗಿದೆ. ಒಂಟಿ ಅಥವಾ ಜೋಡಿಯಾಗಿರುತ್ತದೆ. ಗುಂಪಿನಲ್ಲಿರುವುದು ಅಪರೂಪ. ಒಮ್ಮೆಗೆ 3-5 ಮೊಟ್ಟೆಗಳನ್ನಿಡುತ್ತವೆ. ಮರಿಗಳ ಜವಾಬ್ದಾರಿಯನ್ನು ಎರಡೂ ಹಕ್ಕಿಗಳು ಹಂಚಿಕೊಳ್ಳುತ್ತವೆ. ಕೀಟಗಳು, ಹಣ್ಣುಗಳು, ಇವುಗಳ ಆಹಾರವಾಗಿದೆ.
ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

8 minutes ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

8 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

15 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

2 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

2 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

2 days ago