Advertisement
ಅನುಕ್ರಮ

ಚಿಲಿಪಿಲಿ | ಹಕ್ಕಿಗಳ ಕೂಗನ್ನು ಅನುಕರಣೆ ಮಾಡಬಲ್ಲ ಕಾಜಾಣ ಹಕ್ಕಿ..! |

Share

ನಮ್ಮ ಸುತ್ತಲೂ ಹಲವು ಹಕ್ಕಿಗಳ ಕಲರವ ಕೇಳುತ್ತಿರುತ್ತವೆ. ಒಂದೊಂದು ಹಕ್ಕಿಯ ದನಿಯೂ ಬೇರೆ ಬೇರೆ. ಕೆಲವೊಮ್ಮೆ ಹೋಲಿಕೆ ಇದ್ದು ನಮ್ಮನ್ನು ಬೆಸ್ತು ಬೀಳಿಸುವ ಹಕ್ಕಿಗಳೂ ಇವೆ. ಹೊಸ ಹಕ್ಕಿಯ ದನಿಯೆಂದು ಬೆಂಬತ್ತಿ ಹೋದರೆ ಹೊಸ ದನಿಯೊಡೆಯನನ್ನು ಕಾಣದೆ ವಾಪಾಸ್ ಆಗ ಬೇಕಾದೀತು. ಕೆಲವು ಹಕ್ಕಿಗಳು ಹಲವು ರೀತಿಯಲ್ಲಿ ಕೂಗ ಬಲ್ಲವು. ಅಂತಹ ವಿಶಿಷ್ಟ ಹಕ್ಕಿಗಳ ಸಾಲಿನಲ್ಲಿ ಈ ಕಾಜಾಣ ಹಕ್ಕಿಯೂ ನಿಲ್ಲುತ್ತದೆ. ಹತ್ತಕ್ಕೂ ಮಿಕ್ಕಿ ಇತರ ಹಕ್ಕಿಗಳ ಕೂಗನ್ನು ಅನುಕರಣೆ ಮಾಡ ಬಲ್ಲುದು.

ಮೈನಾ ಗಾತ್ರದ (31 cm-35 ಛcm) ಈ ಹಕ್ಕಿ ನೀಲಿಗಪ್ಪಿನ ಬಣ್ಣದ್ದಾಗಿದೆ. ತಲೆಯಲ್ಲಿ ಪುಟ್ಟ ಜುಟ್ಟಿನಂತ ರಚನೆಯಿದೆ. ಗಟ್ಟಿಗಂಟಲಿನ ಹಕ್ಕಿಯಾಗಿದೆ. ಭಾರತ , ಬಾಂಗ್ಲಾ, ಬರ್ಮಾ ಮೊದಲಾದ ಕಡೆಗಳಲ್ಲಿ ಕಂಡು ಬರುತ್ತವೆ. ಹತ್ತಾರು ಉಪಜಾತಿಗಳು ಕಾಜಾಣದಲ್ಲಿವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಗಳಿಲ್ಲ. ಆಕ್ರಮಣಕಾರಿ ಹಕ್ಕಿಯಾಗಿದ್ದು ರಾಜ ಕಾಗೆ ಎಂಬ ಹೆಸರೂ ಇದೆ. ವೈರಿ ಎಷ್ಟೇ ಪ್ರಬಲವಾಗಿದ್ದರೂ ಅದರ ಮೇಲೆ ಎಗರಿ ಬೀಳುವ ಧೈರ್ಯಶಾಲಿ ಹಕ್ಕಿಯಾಗಿದೆ. ಒಂಟಿ ಅಥವಾ ಜೋಡಿಯಾಗಿರುತ್ತದೆ. ಗುಂಪಿನಲ್ಲಿರುವುದು ಅಪರೂಪ. ಒಮ್ಮೆಗೆ 3-5 ಮೊಟ್ಟೆಗಳನ್ನಿಡುತ್ತವೆ. ಮರಿಗಳ ಜವಾಬ್ದಾರಿಯನ್ನು ಎರಡೂ ಹಕ್ಕಿಗಳು ಹಂಚಿಕೊಳ್ಳುತ್ತವೆ. ಕೀಟಗಳು, ಹಣ್ಣುಗಳು, ಇವುಗಳ ಆಹಾರವಾಗಿದೆ.
ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

4 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

6 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

13 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

19 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

1 day ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

1 day ago