ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಬರ, ಪ್ರವಾಹ, ಶಾಖ(Heat Wave) ಅಲೆಗಳ ನಡುವೆ ಭಾರತದ ಆಹಾರ ಭದ್ರತೆ, ರೈತರ ಜೀವನೋಪಾಯ ಮತ್ತು ಪರಿಸರ ಸುಸ್ಥಿರತೆಯನ್ನು ಕಾಪಾಡಲು ಹವಾಮಾನ–ಸ್ಥಿತಿಸ್ಥಾಪಕ ಕೃಷಿ (Climate Resilient Agriculture) ಅತ್ಯಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಸುಮಾರು 51 ಶೇಕಡಾ ಕೃಷಿ ಭೂಮಿ ಮಳೆಯಾಶ್ರಿತವಾಗಿದ್ದು, ಹವಾಮಾನ ವೈಪರೀತ್ಯಗಳಿಂದ ಬೆಳೆ ಇಳುವರಿ ಗಂಭೀರವಾಗಿ ಪರಿಣಾಮಕ್ಕೆ ಒಳಗಾಗುತ್ತಿದೆ. ಮುಂದಿನ ದಶಕಗಳಲ್ಲಿ ಮಳೆಯಾಶ್ರಿತ ಭತ್ತ, ಗೋಧಿ ಹಾಗೂ ಮೆಕ್ಕೆಜೋಳದ ಉತ್ಪಾದನೆ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ,ಅಷ್ಟೇ ಅಲ್ಲ, ಅಡಿಕೆ, ರಬ್ಬರ್ ಮೇಲೆ ಕೂಡಾ ಪರಿಣಾಮ ಇದೆ ಎಂಬ ಮುನ್ಸೂಚನೆಗಳು ಆತಂಕ ಹೆಚ್ಚಿಸಿವೆ.
ಈ ಹಿನ್ನೆಲೆಯಲ್ಲಿ ಹವಾಮಾನ–ಸಹಿಷ್ಣು ಬೆಳೆ ಪ್ರಭೇದಗಳು, ನೀರಿನ ಸಮರ್ಥ ಬಳಕೆ, ಮಣ್ಣಿನ ಆರೋಗ್ಯ ನಿರ್ವಹಣೆ, ಕೃಷಿ ಅರಣ್ಯ ಪದ್ಧತಿ, ಬೆಳೆ ವೈವಿಧ್ಯೀಕರಣ ಹಾಗೂ ಡಿಜಿಟಲ್ ಕೃಷಿ ತಂತ್ರಜ್ಞಾನಗಳು ಹವಾಮಾನ ಅಪಾಯಗಳನ್ನು ಎದುರಿಸಲು ಪ್ರಮುಖ ಪರಿಹಾರಗಳಾಗಿ ಹೊರಹೊಮ್ಮಿವೆ.
ಕೇಂದ್ರ ಸರ್ಕಾರವು ಹವಾಮಾನ–ಸ್ಥಿತಿಸ್ಥಾಪಕ ಕೃಷಿಯಲ್ಲಿ ರಾಷ್ಟ್ರೀಯ ನಾವೀನ್ಯತೆಗಳು (NICRA), ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್, ಡಿಜಿಟಲ್ ಕೃಷಿ ಮಿಷನ್, ಹಾಗೂ BioE3 ನೀತಿ ಮುಂತಾದ ಉಪಕ್ರಮಗಳ ಮೂಲಕ ಈ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಆದರೆ, ಭಾರತದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಲ್ಲಿ ತಂತ್ರಜ್ಞಾನದ ಮಾಹಿತಿ ಕಡಿಮೆ, ಮಣ್ಣು–ನೀರಿನ ಒತ್ತಡ ಹಾಗೂ ಮಣ್ಣಿನ ಗುಣಮಟ್ಟ ಸಂರಕ್ಷಣೆಯ ಕಾಳಜಿ, ರಾಷ್ಟ್ರೀಯ ಮಾರ್ಗಸೂಚಿಯ ಕೊರತೆ ಪ್ರಮುಖ ಸವಾಲುಗಳಾಗಿ ಉಳಿದಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ತಜ್ಞರ ಪ್ರಕಾರ, ರಾಷ್ಟ್ರೀಯ ಹವಾಮಾನ–ಸ್ಥಿತಿಸ್ಥಾಪಕ ಕೃಷಿಯ ಮಾರ್ಗಸೂಚಿ, ಜಾಗತಿಕ ಸಹಕಾರ, ಡಿಜಿಟಲ್ ಸಾಕ್ಷರತೆ ವಿಸ್ತರಣೆ ಹಾಗೂ ಮಣ್ಣು–ನೀರಿನ ಪುನಃಸ್ಥಾಪನೆ ಕ್ರಮಗಳನ್ನು ಬಲಪಡಿಸಿದರೆ, ಭಾರತವು ಭವಿಷ್ಯದ ಹವಾಮಾನ ಸವಾಲುಗಳ ನಡುವೆಯೂ ಸುಸ್ಥಿರ ಕೃಷಿ ಮತ್ತು ಆಹಾರ ಭದ್ರತೆಯನ್ನು ಸಾಧಿಸಬಹುದು ಎಂದಿದ್ದಾರೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…