Advertisement
MIRROR FOCUS

“ಕಾಕ್ರೋಚ್‌ ಜನತಾ ಪಾರ್ಟಿ” ಸದ್ದು | 60 ಲಕ್ಷ ಫಾಲೋವರ್ಸ್‌ ದಾಟಿದ ರಾಜಕೀಯ ಚಳವಳಿ..!

Share

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕಾಕ್ರೋಚ್‌ ಜನತಾ ಪಾರ್ಟಿ(CJP) ಎಂಬ ವ್ಯಂಗ್ಯಾತ್ಮಕ ರಾಜಕೀಯ ಚಳವಳಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಈ ಇನ್‌ಸ್ಟಾಗ್ರಾಂ ಪೇಜ್‌ 60 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಪಡೆದುಕೊಂಡಿದ್ದು, ಯುವಕರ ಅಸಮಾಧಾನ ಹಾಗೂ ಡಿಜಿಟಲ್‌ ರಾಜಕೀಯ ಚರ್ಚೆಗಳ ಹೊಸ ಮುಖವಾಗಿ ಕಾಣಿಸುತ್ತಿದೆ.

ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಯುವಕರ ಕುರಿತು ಮಾಡಿದ “cockroach” ಉಲ್ಲೇಖದ ಬಳಿಕ ಈ ಚಳವಳಿ ಆರಂಭಗೊಂಡಿದೆ. ಬಳಿಕ ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಭಿಜೀತ್‌ ದಿಪ್ಕೆ “ಕಾಕ್ರೋಚ್‌ ಜನತಾ ಪಾರ್ಟಿ” ಹೆಸರಿನಲ್ಲಿ ವ್ಯಂಗ್ಯಾತ್ಮಕ ಡಿಜಿಟಲ್‌ ಅಭಿಯಾನ ಆರಂಭಿಸಿದರು.

“ನಾನು ಕಾಕ್ರೋಚ್” ಎಂಬ ಘೋಷಣೆ, ನಿರುದ್ಯೋಗ, ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಹಾಗೂ ರಾಜಕೀಯದ ಕುರಿತ ಮೀಮ್ಸ್‌ ಮತ್ತು ಪೋಸ್ಟ್‌ಗಳ ಮೂಲಕ ಈ ಪೇಜ್‌ ವೇಗವಾಗಿ ಜನಪ್ರಿಯವಾಯಿತು. “Secular, Socialist, Democratic, Lazy” ಎಂಬ ಟ್ಯಾಗ್‌ಲೈನ್‌ ಸಹ ಯುವಕರ ಗಮನ ಸೆಳೆದಿದೆ.

ಪ್ರಸ್ತುತ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಗೆ ಸುಮಾರು 87 ಲಕ್ಷ ಫಾಲೋವರ್ಸ್‌, ಕಾಂಗ್ರೆಸ್‌ಗೆ ಸುಮಾರು 1.32 ಕೋಟಿ ಫಾಲೋವರ್ಸ್‌ ಇದ್ದರೆ, ಕಾಕ್ರೋಚ್‌ ಜನತಾ ಪಾರ್ಟಿ ಈಗಾಗಲೇ 60 ಲಕ್ಷದ ಗಡಿ ದಾಟಿರುವುದು ವಿಶೇಷವಾಗಿದೆ.

ಈ ಪೇಜ್‌ ಆರಂಭದಲ್ಲಿ ಕೇವಲ ವ್ಯಂಗ್ಯಾತ್ಮಕ ಮೀಮ್‌ ಚಳವಳಿಯಂತೆ ಕಾಣಿಸಿಕೊಂಡಿದ್ದರೂ, ಬಳಿಕ ಸದಸ್ಯತ್ವ ಅಭಿಯಾನ, ವೆಬ್‌ಸೈಟ್‌, ರಾಜಕೀಯ ಘೋಷಣೆಗಳು ಹಾಗೂ ಯುವಕರ ಸಮಸ್ಯೆಗಳ ಕುರಿತ ಅಭಿಪ್ರಾಯಗಳ ಮೂಲಕ ದೊಡ್ಡ ಡಿಜಿಟಲ್‌ ಸಮೂಹವಾಗಿ ರೂಪುಗೊಳ್ಳುತ್ತಿದೆ.

ಸದಸ್ಯತ್ವ ಅರ್ಜಿಯಲ್ಲಿ “ನಿರುದ್ಯೋಗಿಯಾಗಿರಬೇಕು”, “ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯಬೇಕು”, “ದೂರು ಹೇಳುವಲ್ಲಿ ಪರಿಣತಿ ಇರಬೇಕು” ಎಂಬ ವ್ಯಂಗ್ಯಾತ್ಮಕ ಅರ್ಹತೆಗಳನ್ನು ಸೇರಿಸಿರುವುದು ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಇದು ಕೇವಲ ಹಾಸ್ಯ ಅಥವಾ ಮೀಮ್‌ ಸಂಸ್ಕೃತಿ ಮಾತ್ರವಲ್ಲ; ಯುವಕರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ವ್ಯವಸ್ಥೆಯ ವಿರುದ್ಧದ ಅಸಮಾಧಾನ ಹಾಗೂ ಡಿಜಿಟಲ್‌ ರಾಜಕೀಯ ಚಟುವಟಿಕೆಗಳ ಹೊಸ ರೂಪವಾಗಿದೆ.

ಯುವಕರ ನಿರುದ್ಯೋಗ, ವ್ಯವಸ್ಥೆಯ ವಿರುದ್ಧದ ಅಸಮಾಧಾನ ಮತ್ತು ರಾಜಕೀಯ ನಿರಾಶೆಯನ್ನು ವ್ಯಂಗ್ಯ ಹಾಗೂ ಮೀಮ್‌ಗಳ ಮೂಲಕ ವ್ಯಕ್ತಪಡಿಸುತ್ತಿರುವ ಈ ಡಿಜಿಟಲ್‌ ಚಳವಳಿಯ ಹಿಂದೆ ಇರುವ ವ್ಯಕ್ತಿ ಅಭಿಜಿತ್‌ ದೀಪ್ಕೆ.

ಅಭಿಜಿತ್‌ ದೀಪ್ಕೆ ಮೂಲತಃ ರಾಜಕೀಯ ಸಂವಹನ ಮತ್ತು ಸಾಮಾಜಿಕ ಜಾಲತಾಣ ಪ್ರಚಾರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವ್ಯಕ್ತಿಯಾಗಿದ್ದು, ಅಮೆರಿಕದ ಬೋಸ್ಟನ್‌ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ಮರಳಿದ ಬಳಿಕ ಡಿಜಿಟಲ್‌ ರಾಜಕೀಯ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಪಾರ್ಟಿಯ ಘೋಷಣೆಗಳು, ಸದಸ್ಯತ್ವದ ನಿಯಮಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಸಂಪೂರ್ಣ ವ್ಯಂಗ್ಯ ಹಾಗೂ ರಾಜಕೀಯ ಟೀಕೆಯ ಮಿಶ್ರಣವಾಗಿದ್ದು, ವಿಶೇಷವಾಗಿ ನಿರುದ್ಯೋಗ, ಪರೀಕ್ಷಾ ಅವ್ಯವಸ್ಥೆ, ಮಾಧ್ಯಮಗಳ ಪಾತ್ರ ಹಾಗೂ ವ್ಯವಸ್ಥೆಯ ವಿರುದ್ಧದ ಅಸಮಾಧಾನವನ್ನು ತೋರಿಸುತ್ತಿವೆ.

ಕೆಲವು ರಾಜಕೀಯ ನಾಯಕರು ಕೂಡ ಈ ಚಳವಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದರಿಂದ ಇದರ ಜನಪ್ರಿಯತೆ ಮತ್ತಷ್ಟು ಏರಿಕೆಯಾಗಿದೆ.

“Cockroach Janta Party” Instagram movement has crossed 6 million followers, emerging as a satirical digital political campaign reflecting youth frustration over unemployment and social issues. The movement has gained massive traction through memes, slogans, and online activism.

Abhijit Dipke, the founder of the viral “Cockroach Janta Party,” has emerged as a prominent face of youth-driven political satire in India. The movement, born after controversial remarks about unemployed youth, has rapidly gained popularity online by blending memes, humour, and criticism of the political system.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ

ಕಣ್ಣೂರಿನ ಜಿನೇಶ್ ಕಲಿಯಾಣಿ 18 ಕರಿಮೆಣಸು ತಳಿಗಳ ನರ್ಸರಿ, ಮಿಶ್ರ ಕೃಷಿ ಮತ್ತು…

3 hours ago

ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಶಾಲೆ-ಕಾಲೇಜುಗಳಿಗೆ ಇಂದು ರಜೆ -ಉತ್ತರ ಕನ್ನಡದ ಕೆಲವು ತಾಲೂಕಿನಲ್ಲೂ ರಜೆ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ,…

3 hours ago

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

1 day ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

2 days ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

3 days ago