Advertisement
ಅಂಕಣ

ಕೊರೋನಾ ಕಲಿಸಿದ ಪಾಠ

Share

“ಕೊರೋನಾ”  ಈ ಜಗತ್ತನ್ನು ವ್ಯಾಪಿಸಿದ ಮಹಾಮಾರಿ. ಲಕ್ಷಾಂತರ ಜನರ ಸಾವಿಗೆ ಕಾರಣವಾದ  ಕೊರೋನಾ , ಅನೇಕರ ಬದುಕಿಗೆ ಪಾಠ ಕಲಿಸಿದೆ.

Advertisement
Advertisement

ಇಂದಿಗೂ ಕೊರೋನಾ ತೊಲಗಿಲ್ಲ. ಭಾರತದಲ್ಲಿ ಲಕ್ಷಾಂತರ ಜನರು ಈ ಮಹಾಮಾರಿಗೆ ತುತ್ತಾಗಿದ್ದಾರೆ. ಲಕ್ಷಾಂತರ ಜನರು ಇದರಿಂದಾಗಿ ಸಾವನ್ನಪ್ಪಿದ್ದಾರೆ. ಈಗಲೂ ಆತಂಕ ಹೆಚ್ಚಾಗಿದೆ.

Advertisement

ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯದನ್ನು ಹುಡುಕುವ ಪ್ರಯತ್ನ ಮಾಡಬೇಕು.  ಕೊರೋನಾ ಎಂಬ  ಮಹಾಮಾರಿಯೂ ಸಹ ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ಕೊರೋನಾ  ಸಂಬಂಧಗಳ ಬೆಲೆಯನ್ನು ತಿಳಿಸಿಕೊಟ್ಟಿದೆ. ಈಗಿನ  ಯಾಂತ್ರಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೆಲಸ ಹುಡುಕಿಕೊಂಡು ದೂರದ ಪ್ರದೇಶಗಳಿಗೆ ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ-ಮಕ್ಕಳು ಎಲ್ಲರನ್ನೂ ಬಿಟ್ಟು ಹೋಗುತ್ತಾರೆ.

ಆದರೆ ಈ ಕೊರೋನಾ ಮಹಾಮಾರಿಗೆ ಹೆದರಿ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಮರಳಿದರು. ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ-ಮಕ್ಕಳ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆದರು. ಪ್ರತಿನಿತ್ಯ ಬೆಳಿಗ್ಗೆ ಎದ್ದು ತಮ್ಮ ತಮ್ಮ ಕೆಲಸಗಳಿಗೆ ಹೊರಗಡೆ ಹೋಗುತ್ತಿದ್ದ ಜನರಿಗೆ “ಲಾಕ್ ಡೌನ್” ಆಗಿ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗುತ್ತಿದ್ದ ಜನರು ಮನೆಯಲ್ಲಿಯೇ ಕುಳಿತುಕೊಳ್ಳುವಂತಾಯಿತು. ಕೆಲವರಿಗಂತೂ ಪ್ರತಿನಿತ್ಯ ಸೂರ್ಯ ಕಿಟಕಿಯಲ್ಲಿಯೇ ಹುಟ್ಟಿ ಕಿಟಕಿಯಲ್ಲಿಯೇ ಮುಳುಗುವಂತಾಯಿತು. ತಮ್ಮ ನೆರೆ-ಹೊರೆಯವರನ್ನು ಎಂದೂ ಮಾತನಾಡಿಸದ ಜನರು ಈ ಲಾಕ್ ಡೌನ್ ಸಮಯದಲ್ಲಿ ತಮ್ಮ ನೆರೆ-ಹೊರೆಯವರ ಜೊತೆಗೆ ಸಮಯವನ್ನು ಕಳೆದರು. ಹಲವಾರು ಜನರು ಚಿತ್ರಕಲೆ, ಬರವಣಿಗೆ ಮುಂತಾದ ತಮಗೆ ಇಷ್ಟವಾದ ಕಲೆಗಳನ್ನು ಕಲಿತರು. ಪ್ರೀತಿ, ಸ್ನೇಹ, ಸಂಬಂಧಗಳ ನಿಜವಾದ ಬೆಲೆಯನ್ನು ಅರಿತರು. ಸಮಯದ ಮಹತ್ವವನ್ನು ಅರಿತುಕೊಂಡರು.

Advertisement

ವಿದ್ಯಾರ್ಥಿಗಳ ಒಂದು ವರ್ಷವನ್ನು ಈ ಕೊರೋನಾ ಕಿತ್ತುಕೊಂಡಿದೆ ನಿಜ. ಆದರೆ ಆಕಸ್ಮಾತ್ತಾಗಿ ಎದುರಾಗುವ ಸಮಸ್ಯೆಗಳಿಗೆ ಈ ಕೊರೋನಾ ಒಂದು ಉತ್ತಮವಾದ ಉದಾಹರಣೆಯಾಗಿದೆ. ಮನುಷ್ಯರು ಅತ್ಯಂತ ಕಡಿಮೆ ಸೌಲಭ್ಯದಿಂದ ಹೇಗೆ ಬದುಕಬಹುದು ಎಂದು ಕೊರೋನಾ ಕಲಿಸಿಕೊಟ್ಟಿದೆ. ಕೊರೋನಾದಿಂದಾಗಿ ನಾವು  ಕಳೆದುಕೊಂಡಿದ್ದು ನಿಜ, ಆದರೆ ಅದೇ ರೀತಿ  ಪಡೆದುಕೊಂಡಿದ್ದೂ ನಿಜ. “ಕೊರೋನಾ” ಜೀವನದಲ್ಲಿ ನಮಗೆ ಒಂದು ಪಾಠವಾಗಿದೆ.

# ಉಲ್ಲಾಸ್ ಕಜ್ಜೋಡಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

19 hours ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

21 hours ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

1 day ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago