Advertisement
MIRROR FOCUS

ದೇಶದ ಆರ್ಥಿಕ ಅಸಮಾನತೆ ಇಳಿಮುಖ | ಶೇಕಡಾ 5ಕ್ಕಿಂತ ಕಡಿಮೆಯಾದ ಬಡತನ | ಉತ್ತಮ ಸ್ಥಿತಿಯತ್ತ ಗ್ರಾಮೀಣ ಪ್ರದೇಶಗಳು – ಸಮೀಕ್ಷೆ

Share

ಅಭಿವೃದ್ಧಿ ಹೊಂದುತ್ತಿರುವ ದೇಶ(Developing country) ನಮ್ಮ ಭಾರತ(India). ದಿನದಿಂದ ದಿನಕ್ಕೆ ದೇಶದ ಆರ್ಥಿಕ ಸ್ಥಿತಿ(Economic condition) ಹಾಗೂ ಜನರ ಜೀವನ ವೆಚ್ಚ ಏರುತ್ತಾ ಸಾಗಬೇಕು. ಮೂಲಭೂತ ಸೌಕರ್ಯಗಳು(Basic amenities) ಸುಧಾರಬೇಕು. ಈ ನಿಟ್ಟಿನಲ್ಲಿ ಭಾರತ ಸಾಗುತ್ತಿದೆಯಾ ಎನ್ನುವ ಬಗ್ಗೆ ಸಮೀಕ್ಷೆಯೊಂದನ್ನು(Survey) ನಡೆಸಲಾಗಿತ್ತು. ಅದರ ಪ್ರಕಾರ ದೇಶದಲ್ಲಿ ಬಡತನ ಪ್ರಮಾಣ(poverty rate) ಶೇಕಡಾ 5 ಕ್ಕಿಂತ ಕೆಳಗೆ ಇಳಿದಿದೆ. ನಗರ ಪ್ರದೇಶಗಳ(Urban) ಜೊತೆಗೆ ಗ್ರಾಮೀಣ ಜನರು(Rural People) ಕೂಡ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಆರ್ಥಿಕ ಅಸಮಾನತೆ(economic inequality) ಇಳಿಮುಖವಾಗುತ್ತಿದೆ ಎಂಬ ವರದಿಯೊಂದು ಹೊರಬಿದ್ದಿದೆ.

Advertisement
Advertisement

ನ್ಯಾಷನಲ್​ ಸ್ಯಾಂಪಲ್​ ಸರ್ವೇ ಆಫೀಸ್​ (NSSO) ಬಿಡುಗಡೆ ಮಾಡಿರುವ ಗೃಹಬಳಕೆದಾರರ ವೆಚ್ಚ ಸಮೀಕ್ಷೆಯಲ್ಲಿ ಈ ಅಂಶಗಳು ಇವೆ. ದೇಶ ನಿಧಾನವಾಗಿ ಬಡತನ ರೇಖೆಯಿಂದ ಹೊರಬರುತ್ತಿದೆ. ಜನರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ಈ ವರದಿ ಉಲ್ಲೇಖಿಸಿದೆ.‌ ಈ ಬಗ್ಗೆ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ಅವರು ಮಾತನಾಡಿದ್ದಾರೆ.

Advertisement

ಈ ಬಗ್ಗೆ ವಿಶ್ಲೇಷಿಸಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು, 2011-12ಕ್ಕೆ ಹೋಲಿಸಿದರೆ ತಲಾ ಗೃಹಬಳಕೆಯ ಮಾಸಿಕ ವೆಚ್ಚ 2022-23ರಲ್ಲಿ ದ್ವಿಗುಣಗೊಂಡಿದೆ. ಸರ್ಕಾರ ಕೈಗೊಂಡಿರುವ ಬಡತನ ನಿರ್ಮೂಲನೆ ಕ್ರಮಗಳು ಯಶಸ್ಸು ಪಡೆಯುತ್ತಿವೆ ಎಂಬುದು ಕೂಡ ಇಲ್ಲಿ ವಿಧಿತವಾಗುತ್ತಿದೆ. ದೇಶದ ಬಡತನ ಪ್ರಮಾಣವು ಶೇಕಡಾ 5ಕ್ಕಿಂತ ಕಡಿಮೆಗೆ ಕುಸಿದಿದೆ ಎಂದರು.

ಅಭಿವೃದ್ಧಿ ಪಥದಲ್ಲಿ ಹಳ್ಳಿಗಳು: ನಗರ ಪ್ರದೇಶಗಳ ಜೊತೆಗೆ ಹಳ್ಳಿಗಾಡಿನ ಜನರೂ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಸಮಾಜದಲ್ಲಿನ ಜನರನ್ನು 20 ವಿವಿಧ ವರ್ಗಗಳನ್ನಾಗಿ ವಿಂಗಡಿಸಿ ಸಮೀಕ್ಷೆ ನಡೆಸಲಾಗಿದೆ. ವರದಿ ಪ್ರಕಾರ, ಎಲ್ಲ ವರ್ಗಗಳ ಸರಾಸರಿ ತಲಾದಾಯ ಗ್ರಾಮೀಣ ಪ್ರದೇಶದಲ್ಲಿ 3,773 ರೂಪಾಯಿ ಇದ್ದರೆ, ನಗರ ಪ್ರದೇಶಗಳಲ್ಲಿ 6,459 ರೂಪಾಯಿ ಇದೆ ಎಂದು ನಮೂದಿಸಿದೆ. ನಗರಗಳಲ್ಲಿ ಹೆಚ್ಚಿನ ದರ ನಿಗದಿ ಮಾಡಿದ್ದರೂ, ಗ್ರಾಮೀಣರು ಹಿಂದೆ ಉಳಿದಿಲ್ಲ ಎಂಬುದನ್ನು ಸಮೀಕ್ಷೆ ಗುರುತಿಸುತ್ತದೆ ಎಂದು ವಿಶ್ಲೇಷಿಸಿದರು.

Advertisement

ಅತಿ ಕಡಿಮೆ ತಲಾದಾಯ ಗುರುತಿಸಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಅದು ರೂಪಾಯಿ 1,373 ಮತ್ತು ನಗರ ಪ್ರದೇಶಗಳಲ್ಲಿ 2,001 ರೂಪಾಯಿ ಇದೆ ಎಂದು ನಿಗದಿಪಡಿಸಲಾಗಿದೆ. ಬಡತನದ ಪ್ರಮಾಣವನ್ನು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಇಂದಿನ ದರಕ್ಕೆ ಹೋಲಿಸಿದರೆ, ಶೇಕಡಾ 0-5 ಸರಾಸರಿಯಷ್ಟು ಕಾಣುತ್ತೇವೆ. ಇದರರ್ಥ, ದೇಶದಲ್ಲಿ ಬಡತನ 0 ದಿಂದ 5 ಪ್ರತಿಶತದ ಒಳಗೆ ಇದೆ ಎಂಬುದು ತಿಳಿಯುತ್ತದೆ ಎಂದು ನೀತಿ ಆಯೋಗದ ಸಿಇಒ ತಿಳಿಸಿದರು.

1.55 ಲಕ್ಷ ಗ್ರಾಮೀಣ ಕುಟುಂಬಗಳು ಮತ್ತು 1.07 ಲಕ್ಷ ನಗರ ಕುಟುಂಬಗಳಿಂದ ನೀಡಿದ ಮಾಹಿತಿಯನ್ನು ಆಧರಿಸಿ ಎನ್​ಎಸ್​ಎಸ್​ಒ ಈ ವರದಿಯನ್ನು ತಯಾರಿಸಿದೆ. ಇನ್ನು, ಯಾವುದೇ ವಸ್ತುಗಳ ಬಳಕೆಯ ವಿಚಾರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 2.5 ಪಟ್ಟು ಹೆಚ್ಚಾಗಿದೆ. ಅದರಲ್ಲೂ ನಗರಕ್ಕಿಂತ ಹಳ್ಳಿಗಳಲ್ಲೇ ಅತಿ ಹೆಚ್ಚಿನ ಬಳಕೆ ದರ ಇದೆ. ನಗರ – ಗ್ರಾಮೀಣ ಅಸಮಾನತೆಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಸುಬ್ರಹ್ಮಣ್ಯಂ ಹೇಳಿದರು.

Advertisement

Accordingly, the poverty rate in the country has come down below 5 percent. Along with urban areas, rural people are also getting better off. A good report has come out that economic inequality is on the decline.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

7 hours ago

ಗೇರುಹಣ್ಣಿನ ಮೌಲ್ಯವರ್ಧನೆ : ಕೇರಳ ಕೃಷಿ ವಿವಿ ಸಾಧನೆ

ಬಹುತೇಕ ಕೊಳೆತು ಮಣ್ಣುಪಾಲಾಗುವ ಗೇರುಹಣ್ಣಿಗೂ(Cashew fruit)  ಮೌಲ್ಯವಿದೆ. ಆದರೆ ಮೌಲ್ಯವರ್ಧನೆ(Value addition) ಮಾಡಿದಾಗ ಮಾತ್ರ!…

8 hours ago

ನಿಮಗೆ ಗೊತ್ತೇ ???? ಬಿದಿರಿನ ಬಗೆಗಿನ ಕೆಲವು ಆಸಕ್ತಿದಾಯಕ ಸಂಗತಿಗಳು

ಬಿದಿರು(Bamboo) ನಾನಾರಿಗಲ್ಲದವಳು ಎಂಬ ಸಂತ ಶಿಶುನಾಳ ಶರೀಪರ(Shishunala Sharifa) ಹಾಡನ್ನು ನೀವು ಕೇಳಿರುತ್ತೀರಿ.…

8 hours ago

ಮೊಬೈಲ್ ಫೋನ್ ಅನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗತ್ತೀರಾ..? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ…..!

ಇಂದು ಮೊಬೈಲ್ ಫೋನ್(Mobile Phone) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಅನ್ನು…

9 hours ago

ರಾಜ್ಯಾದ್ಯಂತ ಬಿರು ಬಿಸಿಲಿನ ಪರಿಣಾಮ : ಗಗನಕ್ಕೇರಿದ ಹಸಿ ಮೆಣಸಿನಕಾಯಿ ದರ : ಗ್ರಾಹಕರಿಗೆ ಜೋರಾದ ಖಾರದ ಅನುಭವ

ಕಳೆದ ಬಾರಿ ಕೆಂಪು ಮೆಣಸಿನಕಾಯಿ(Red chilli) ಬೆಲೆ(Price hike) ಗಗನಕ್ಕೇರಿತ್ತು. ಈ ಬಾರಿ…

9 hours ago

Karnataka Weather |11-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |

ಈಗಿನ ಪ್ರಕಾರ ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

12 hours ago