Advertisement
ನಂದನವನ

ಆಧುನಿಕ ಸಮಾಜದಲ್ಲಿ ಸಾಂಸ್ಕೃತಿಕ ಸಂವೇದನೆಯ ಅಗತ್ಯ

Share

ಇಂದಿನ ಜಗತ್ತು ಬಹುಮಟ್ಟಿಗೆ “ಗ್ಲೋಬಲ್ ವಿಲೇಜ್” ಆಗಿದೆ. ತಾಂತ್ರಿಕ ಪ್ರಗತಿ, ಆರ್ಥಿಕ ವಿನಿಮಯ, ವಲಸೆ, ಶಿಕ್ಷಣ ಮತ್ತು ಮಾಧ್ಯಮ ಇವೆಲ್ಲವು ವಿಭಿನ್ನ ಸಂಸ್ಕೃತಿಗಳ ಜನರನ್ನು ಪರಸ್ಪರ ಹತ್ತಿರದ ಸಂಪರ್ಕಕ್ಕೆ ತಂದಿವೆ.. ಇಂತಹ ಸಂದರ್ಭದಲ್ಲಿ ಕೇವಲ ವೈಯಕ್ತಿಕ ಬುದ್ಧಿವಂತಿಕೆ ಅಥವಾ ವೃತ್ತಿಪರ ಕೌಶಲ್ಯ ಸಾಕಾಗುವುದಿಲ್ಲ. ಬದುಕಿನ ನಿಜವಾದ ಅಸ್ತಿತ್ವವನ್ನು ನಿರ್ಧರಿಸುವುದು ಮೌಲ್ಯಗಳೂ, ಸಂವೇದನೆಗಳೂ. “ಸಾಂಸ್ಕೃತಿಕ ಸಂವೇದನೆ” ಎಂಬ ಪರಿಕಲ್ಪನೆ ಸಾಮಾನ್ಯವಾಗಿ ‘ಇತರರ ಸಂಸ್ಕೃತಿ–ಪದ್ಧತಿ–ಅಭ್ಯಾಸ–ಆಚಾರಗಳ ಬಗ್ಗೆ ಗೌರವ ಮತ್ತು ಸ್ವೀಕಾರ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಇದು ಕೇವಲ ಸಹಿಷ್ಣುತೆ ಅಥವಾ ಕರುಣೆ ಎಂಬ ಅಲ್ಪ ಮಟ್ಟದ ಪ್ರತಿಕ್ರಿಯೆ ಅಲ್ಲ; ಇದು ಸಾಹಿತ್ಯಕ ವೈಭವೀಕರಣವನ್ನೇ ತರಬಲ್ಲ ಆಳವಾದ ಮಾನಸಿಕ–ಸಾಮಾಜಿಕ ಜಾಗೃತಿ.

ಸಂವೇದನೆ ಎಂದರೆ ವ್ಯಕ್ತಿಯ ಅಂತರಂಗದ ಪ್ರತಿಕ್ರಿಯೆ, ನಾಜೂಕಾದ ಮನಸ್ಸಿನ ಸ್ಪಂದನೆ. ಇದು ವೈಯಕ್ತಿಕ ಮಟ್ಟದಲ್ಲಿ ಆಗಬಹುದಾದ ಅನುಭವ.ಸಾಂಸ್ಕೃತಿಕ ಸಂವೇದನೆ ಎಂದರೆ, ಈ ಸ್ಪಂದನೆಯು ಕೇವಲ ವೈಯಕ್ತಿಕವಲ್ಲದೆ, ಇತರ ಸಮಾಜಗಳ, ಜನಾಂಗಗಳ, ಧರ್ಮ–ಭಾಷಾ–ಪ್ರದೇಶಗಳ ವೈಶಿಷ್ಟ್ಯಗಳನ್ನು ಗೌರವದಿಂದ ಸ್ವೀಕರಿಸುವ ಸಾಮರ್ಥ್ಯ. ಹೀಗಾಗಿ ಸಂವೇದನೆ ವೈಯಕ್ತಿಕ ಗುಣವಾಗಿದ್ದರೆ, ಸಾಂಸ್ಕೃತಿಕ ಸಂವೇದನೆ ಸಾಮಾಜಿಕ–ಜಾಗತಿಕ ಮೌಲ್ ಎಂಬುದಾಗಿದೆ.

ಸಾಂಸ್ಕೃತಿಕ ಸಂವೇದನೆ (Cultural Sensitivity) ಎಂಬ ಮೌಲ್ಯವೇ ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತು ಸಹಅಸ್ತಿತ್ವಕ್ಕೆ ಕೇಂದ್ರೀಯ ಶಕ್ತಿ.ನಮ್ಮದೇ ಸಂಸ್ಕೃತಿ ಪರಮೋನ್ನತವೆಂಬ ಅಹಂಕಾರವನ್ನು ತೊರೆದು, ಇತರರ ಆಚರಣೆ, ಮೌಲ್ಯ, ನಂಬಿಕೆಗಳಿಗೆ ಪ್ರಾಮುಖ್ಯತೆ ನೀಡುವ ಮನೋಭಾವ.“ವಿಭಿನ್ನತೆ”ಯನ್ನು “ಸಂಕಟ”ವಾಗಿ ನೋಡದೆ, “ಸಂಪತ್ತು”ವಾಗಿ ಸ್ವೀಕರಿಸುವ ಸಾಮರ್ಥ್ಯ.

1 .ಆಧುನಿಕ ಸಮಾಜದಲ್ಲಿ ಇದರ  ಅಗತ್ಯತೆ :  ನಗರಗಳಲ್ಲಿ ಒಂದೇ ಬೀದಿಯಲ್ಲಿ ವಿವಿಧ ಧರ್ಮ, ಭಾಷೆ, ಜಾತಿ, ವಲಸಿಗರು ಸಹವಾಸ ಮಾಡುತ್ತಿದ್ದಾರೆ. ಇವರ ನಡುವೆ ಸಾಮರಸ್ಯಕ್ಕಾಗಿ ಸಂವೇದನೆ ಮುಖ್ಯ.  ಜಾಗತಿಕ ವ್ಯವಹಾರದಲ್ಲಿ ಉದ್ಯೋಗ, ವ್ಯಾಪಾರ, ಐಟಿ ಕ್ಷೇತ್ರದಲ್ಲಿ ಬೇರೆ ದೇಶದ ಜನರೊಂದಿಗೆ ಸಹಕಾರ ಅಗತ್ಯ. ಸಾಂಸ್ಕೃತಿಕ ಸಂವೇದನೆ ಇಲ್ಲದೆ ಜಾಗತಿಕ ಸ್ಪರ್ಧೆಯಲ್ಲಿ ಯಶಸ್ಸು ಸಾಧ್ಯವಿಲ್ಲ.  ಶಿಕ್ಷಣ–ಆರೋಗ್ಯ ಕ್ಷೇತ್ರ ದಲ್ಲಿ ವಿದ್ಯಾರ್ಥಿಗಳ ವಿಭಿನ್ನ ಹಿನ್ನೆಲೆಯ ಗೌರವ, ರೋಗಿಗಳ ನಂಬಿಕೆ–ಆಚಾರಗಳನ್ನು ಪರಿಗಣಿಸುವ ಶೈಲಿ ಸಂವೇದನೆ ಇಲ್ಲದೆ ಸಾಧ್ಯವಲ್ಲ. ಸಮಾಜದ ಶಾಂತಿ ಕಾಪಾಡುವಲ್ಲಿ  ಧರ್ಮ, ಭಾಷೆ, ಸಂಸ್ಕೃತಿ ಆಧಾರಿತ ಸಂಘರ್ಷಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ಸಂವೇದನೆ ಸಾಮಾಜಿಕ ಬಾಂಧವ್ಯಕ್ಕೆ ಲೇಪನ.

2 .ಭಾರತೀಯ ದೃಷ್ಟಿಕೋನ : “ಏಕಂ ಸತ್ ವಿಪ್ರಾ ಬಹುಧಾ ವದಂತಿ” –ಎಂಬುದಾಗಿ ಋಗ್ವೇದ ಹೇಳುತ್ತದೆ . ಸತ್ಯ ಒಂದೇ ಆದರೆ ಅದನ್ನು ವಿಭಿನ್ನ ಮಾರ್ಗಗಳಲ್ಲಿ ಕಾಣಬಹುದು. ಉಪನಿಷತ್ತಿನಲ್ಲಿ  ಹೇಳಿದಂತೆ “ವಸುದೈವ ಕುಟುಂಬಕಂ” ಎಂಬ ತತ್ತ್ವವೇ ಸಾಂಸ್ಕೃತಿಕ ಸಂವೇದನೆಯ ಶ್ರೇಷ್ಠ ರೂಪ.

ಭಗವದ್ಗೀತೆಯ (೪.೧೧) ಯಲ್ಲಿ  “ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್” – ಎಲ್ಲರೂ ತಮ್ಮ ರೀತಿಯಲ್ಲಿ ಬಂದರೂ, ಭಗವಂತ ಎಲ್ಲರನ್ನೂ ಸ್ವೀಕರಿಸುತ್ತಾನೆ.ಎಂಬ  ಈ ಮೌಲ್ಯಗಳು ಭಾರತವನ್ನು ಬಹುಸಂಸ್ಕೃತಿಯ, ಸಹಿಷ್ಣುತೆಯ ನೆಲವನ್ನಾಗಿ ಮಾಡಿದವು. ಪಾಶ್ಚಾತ್ಯ ‘Pluralism’, ‘Human Rights’, ‘Tolerance’ ಪರಿಕಲ್ಪನೆಗಳು ಸಹ ಸಾಂಸ್ಕೃತಿಕ ಸಂವೇದನೆಯ ನವೋತ್ಪಾದನೆ.

ಹೀಗಾಗಿ ಸಾಂಸ್ಕೃತಿಕ ಸಂವೇದನೆ ಕೇವಲ ಸಾಮಾಜಿಕ ಸಾಮರಸ್ಯವಲ್ಲ, ಇದು ಮೌಲ್ಯ–ಸಾಧನೆಗಳೇ (Value Realization) ಆಗಿದೆ.

3 .ಪ್ರಾಯೋಗಿಕ ಅಂಶಗಳು : ಉದ್ಯೋಗ ಕ್ಷೇತ್ರದಲ್ಲಿ ಬೇರೆ ಭಾಷೆಯ ಸಹೋದ್ಯೋಗಿಯನ್ನು ಹಾಸ್ಯ ಮಾಡುವ ಬದಲು, ಅವನ ಸಂಪ್ರದಾಯ ತಿಳಿದುಕೊಳ್ಳುವುದು.ಶಿಕ್ಷಣದಲ್ಲಿ  ಮಕ್ಕಳ ಮನೆ–ಸಂಸ್ಕೃತಿ, ಆಹಾರ, ಉಡುಪಿಗೆ ಗೌರವ ಕೊಡುವುದು.ಸಾಮಾಜಿಕ ಜೀವನದಲ್ಲಿ  ಹಬ್ಬ–ಹರಿದಿನಗಳ ವಿಭಿನ್ನ ಆಚರಣೆಗಳನ್ನು ಗೌರವದಿಂದ  ಕಾಣುವುದು. ಅದರಂತೆಯೇ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬೇರೆ ರಾಷ್ಟ್ರಗಳ ಸಂಸ್ಕೃತಿ ಅಧ್ಯಯನದಿಂದ ನಂಬಿಕೆ–ಸಂಬಂಧ ಗಾಢವಾಗುವುದು.

4 .ವ್ಯಾಪ್ತಿ ಮತ್ತು ಪರಿಣಾಮ: ವೈಯಕ್ತಿಕ ಮಟ್ಟದಲ್ಲಿ ಹೃದಯದ ವಿಶಾಲತೆ, ಸಹಾನುಭೂತಿ, ಸ್ವೀಕಾರಶಕ್ತಿ ಬೆಳೆಯುತ್ತದೆ.ಸಾಮಾಜಿಕವಾಗಿ  ಸಾಮರಸ್ಯ, ಸಮಾನತೆ, ಪರಸ್ಪರ ಸಹಕಾರ ಬಲಗೊಳ್ಳುತ್ತದೆ.ಜಾಗತಿಕ ವಾಗಿ ನೋಡುವುದಾದರೆ  ಶಾಂತಿ, ಮಾನವ ಹಕ್ಕುಗಳ ಗೌರವ, ಮಾನವಕುಲದ ಏಕತೆ ಸಾಧ್ಯವಾಗುತ್ತದೆ. ಆಧುನಿಕ ಸಮಾಜದಲ್ಲಿ ವಿಜ್ಞಾನ–ತಂತ್ರಜ್ಞಾನ, ಆರ್ಥಿಕತೆ, ರಾಜಕೀಯ ಶಕ್ತಿಗಳು ಎಷ್ಟೇ ಬಲಶಾಲಿಯಾಗಿದ್ದರೂ, ಅವುಗಳ ಮೇಲೆ ನಿಲ್ಲುವ ಮೌಲ್ಯವೇ ಸಾಂಸ್ಕೃತಿಕ ಸಂವೇದನೆ.ಇದು ಕೇವಲ “ಸಹಿಷ್ಣುತೆ” ಅಲ್ಲ; ಇದು ವಿಶ್ವಮಾನವತೆ, “ಮಾನವೀಯತೆ” ಮತ್ತು “ಸಹಅಸ್ತಿತ್ವ”ದ ಆಳವಾದ ಬುನಾದಿ. ವಿಭಿನ್ನತೆಯಲ್ಲಿಯೇ ಏಕತೆ ಕಂಡುಕೊಳ್ಳುವುದು – ಅದೇ ನವಯುಗದ ಸಾಂಸ್ಕೃತಿಕ ಸಂವೇದನೆಯ ಮರ್ಮ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

5 hours ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

1 day ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

1 day ago

ಹವಾಮಾನ ವರದಿ| 10-05-2026 | ರಾಜ್ಯದಲ್ಲಿ ಮಳೆ ಕ್ಷೀಣಿಸುವ ಸೂಚನೆ | ಮೇ 15ರಿಂದ ಮುಂಗಾರು ಮಾರುತ ಚಟುವಟಿಕೆ ಚುರುಕು ಸಾಧ್ಯತೆ

ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ…

3 days ago

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

5 days ago