Advertisement
ನಂದನವನ

ಆಧುನಿಕ ಸಮಾಜದಲ್ಲಿ ಸಾಂಸ್ಕೃತಿಕ ಸಂವೇದನೆಯ ಅಗತ್ಯ

Share

ಇಂದಿನ ಜಗತ್ತು ಬಹುಮಟ್ಟಿಗೆ “ಗ್ಲೋಬಲ್ ವಿಲೇಜ್” ಆಗಿದೆ. ತಾಂತ್ರಿಕ ಪ್ರಗತಿ, ಆರ್ಥಿಕ ವಿನಿಮಯ, ವಲಸೆ, ಶಿಕ್ಷಣ ಮತ್ತು ಮಾಧ್ಯಮ ಇವೆಲ್ಲವು ವಿಭಿನ್ನ ಸಂಸ್ಕೃತಿಗಳ ಜನರನ್ನು ಪರಸ್ಪರ ಹತ್ತಿರದ ಸಂಪರ್ಕಕ್ಕೆ ತಂದಿವೆ.. ಇಂತಹ ಸಂದರ್ಭದಲ್ಲಿ ಕೇವಲ ವೈಯಕ್ತಿಕ ಬುದ್ಧಿವಂತಿಕೆ ಅಥವಾ ವೃತ್ತಿಪರ ಕೌಶಲ್ಯ ಸಾಕಾಗುವುದಿಲ್ಲ. ಬದುಕಿನ ನಿಜವಾದ ಅಸ್ತಿತ್ವವನ್ನು ನಿರ್ಧರಿಸುವುದು ಮೌಲ್ಯಗಳೂ, ಸಂವೇದನೆಗಳೂ. “ಸಾಂಸ್ಕೃತಿಕ ಸಂವೇದನೆ” ಎಂಬ ಪರಿಕಲ್ಪನೆ ಸಾಮಾನ್ಯವಾಗಿ ‘ಇತರರ ಸಂಸ್ಕೃತಿ–ಪದ್ಧತಿ–ಅಭ್ಯಾಸ–ಆಚಾರಗಳ ಬಗ್ಗೆ ಗೌರವ ಮತ್ತು ಸ್ವೀಕಾರ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಇದು ಕೇವಲ ಸಹಿಷ್ಣುತೆ ಅಥವಾ ಕರುಣೆ ಎಂಬ ಅಲ್ಪ ಮಟ್ಟದ ಪ್ರತಿಕ್ರಿಯೆ ಅಲ್ಲ; ಇದು ಸಾಹಿತ್ಯಕ ವೈಭವೀಕರಣವನ್ನೇ ತರಬಲ್ಲ ಆಳವಾದ ಮಾನಸಿಕ–ಸಾಮಾಜಿಕ ಜಾಗೃತಿ.

ಸಂವೇದನೆ ಎಂದರೆ ವ್ಯಕ್ತಿಯ ಅಂತರಂಗದ ಪ್ರತಿಕ್ರಿಯೆ, ನಾಜೂಕಾದ ಮನಸ್ಸಿನ ಸ್ಪಂದನೆ. ಇದು ವೈಯಕ್ತಿಕ ಮಟ್ಟದಲ್ಲಿ ಆಗಬಹುದಾದ ಅನುಭವ.ಸಾಂಸ್ಕೃತಿಕ ಸಂವೇದನೆ ಎಂದರೆ, ಈ ಸ್ಪಂದನೆಯು ಕೇವಲ ವೈಯಕ್ತಿಕವಲ್ಲದೆ, ಇತರ ಸಮಾಜಗಳ, ಜನಾಂಗಗಳ, ಧರ್ಮ–ಭಾಷಾ–ಪ್ರದೇಶಗಳ ವೈಶಿಷ್ಟ್ಯಗಳನ್ನು ಗೌರವದಿಂದ ಸ್ವೀಕರಿಸುವ ಸಾಮರ್ಥ್ಯ. ಹೀಗಾಗಿ ಸಂವೇದನೆ ವೈಯಕ್ತಿಕ ಗುಣವಾಗಿದ್ದರೆ, ಸಾಂಸ್ಕೃತಿಕ ಸಂವೇದನೆ ಸಾಮಾಜಿಕ–ಜಾಗತಿಕ ಮೌಲ್ ಎಂಬುದಾಗಿದೆ.

ಸಾಂಸ್ಕೃತಿಕ ಸಂವೇದನೆ (Cultural Sensitivity) ಎಂಬ ಮೌಲ್ಯವೇ ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತು ಸಹಅಸ್ತಿತ್ವಕ್ಕೆ ಕೇಂದ್ರೀಯ ಶಕ್ತಿ.ನಮ್ಮದೇ ಸಂಸ್ಕೃತಿ ಪರಮೋನ್ನತವೆಂಬ ಅಹಂಕಾರವನ್ನು ತೊರೆದು, ಇತರರ ಆಚರಣೆ, ಮೌಲ್ಯ, ನಂಬಿಕೆಗಳಿಗೆ ಪ್ರಾಮುಖ್ಯತೆ ನೀಡುವ ಮನೋಭಾವ.“ವಿಭಿನ್ನತೆ”ಯನ್ನು “ಸಂಕಟ”ವಾಗಿ ನೋಡದೆ, “ಸಂಪತ್ತು”ವಾಗಿ ಸ್ವೀಕರಿಸುವ ಸಾಮರ್ಥ್ಯ.

1 .ಆಧುನಿಕ ಸಮಾಜದಲ್ಲಿ ಇದರ  ಅಗತ್ಯತೆ :  ನಗರಗಳಲ್ಲಿ ಒಂದೇ ಬೀದಿಯಲ್ಲಿ ವಿವಿಧ ಧರ್ಮ, ಭಾಷೆ, ಜಾತಿ, ವಲಸಿಗರು ಸಹವಾಸ ಮಾಡುತ್ತಿದ್ದಾರೆ. ಇವರ ನಡುವೆ ಸಾಮರಸ್ಯಕ್ಕಾಗಿ ಸಂವೇದನೆ ಮುಖ್ಯ.  ಜಾಗತಿಕ ವ್ಯವಹಾರದಲ್ಲಿ ಉದ್ಯೋಗ, ವ್ಯಾಪಾರ, ಐಟಿ ಕ್ಷೇತ್ರದಲ್ಲಿ ಬೇರೆ ದೇಶದ ಜನರೊಂದಿಗೆ ಸಹಕಾರ ಅಗತ್ಯ. ಸಾಂಸ್ಕೃತಿಕ ಸಂವೇದನೆ ಇಲ್ಲದೆ ಜಾಗತಿಕ ಸ್ಪರ್ಧೆಯಲ್ಲಿ ಯಶಸ್ಸು ಸಾಧ್ಯವಿಲ್ಲ.  ಶಿಕ್ಷಣ–ಆರೋಗ್ಯ ಕ್ಷೇತ್ರ ದಲ್ಲಿ ವಿದ್ಯಾರ್ಥಿಗಳ ವಿಭಿನ್ನ ಹಿನ್ನೆಲೆಯ ಗೌರವ, ರೋಗಿಗಳ ನಂಬಿಕೆ–ಆಚಾರಗಳನ್ನು ಪರಿಗಣಿಸುವ ಶೈಲಿ ಸಂವೇದನೆ ಇಲ್ಲದೆ ಸಾಧ್ಯವಲ್ಲ. ಸಮಾಜದ ಶಾಂತಿ ಕಾಪಾಡುವಲ್ಲಿ  ಧರ್ಮ, ಭಾಷೆ, ಸಂಸ್ಕೃತಿ ಆಧಾರಿತ ಸಂಘರ್ಷಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾಂಸ್ಕೃತಿಕ ಸಂವೇದನೆ ಸಾಮಾಜಿಕ ಬಾಂಧವ್ಯಕ್ಕೆ ಲೇಪನ.

2 .ಭಾರತೀಯ ದೃಷ್ಟಿಕೋನ : “ಏಕಂ ಸತ್ ವಿಪ್ರಾ ಬಹುಧಾ ವದಂತಿ” –ಎಂಬುದಾಗಿ ಋಗ್ವೇದ ಹೇಳುತ್ತದೆ . ಸತ್ಯ ಒಂದೇ ಆದರೆ ಅದನ್ನು ವಿಭಿನ್ನ ಮಾರ್ಗಗಳಲ್ಲಿ ಕಾಣಬಹುದು. ಉಪನಿಷತ್ತಿನಲ್ಲಿ  ಹೇಳಿದಂತೆ “ವಸುದೈವ ಕುಟುಂಬಕಂ” ಎಂಬ ತತ್ತ್ವವೇ ಸಾಂಸ್ಕೃತಿಕ ಸಂವೇದನೆಯ ಶ್ರೇಷ್ಠ ರೂಪ.

ಭಗವದ್ಗೀತೆಯ (೪.೧೧) ಯಲ್ಲಿ  “ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್” – ಎಲ್ಲರೂ ತಮ್ಮ ರೀತಿಯಲ್ಲಿ ಬಂದರೂ, ಭಗವಂತ ಎಲ್ಲರನ್ನೂ ಸ್ವೀಕರಿಸುತ್ತಾನೆ.ಎಂಬ  ಈ ಮೌಲ್ಯಗಳು ಭಾರತವನ್ನು ಬಹುಸಂಸ್ಕೃತಿಯ, ಸಹಿಷ್ಣುತೆಯ ನೆಲವನ್ನಾಗಿ ಮಾಡಿದವು. ಪಾಶ್ಚಾತ್ಯ ‘Pluralism’, ‘Human Rights’, ‘Tolerance’ ಪರಿಕಲ್ಪನೆಗಳು ಸಹ ಸಾಂಸ್ಕೃತಿಕ ಸಂವೇದನೆಯ ನವೋತ್ಪಾದನೆ.

ಹೀಗಾಗಿ ಸಾಂಸ್ಕೃತಿಕ ಸಂವೇದನೆ ಕೇವಲ ಸಾಮಾಜಿಕ ಸಾಮರಸ್ಯವಲ್ಲ, ಇದು ಮೌಲ್ಯ–ಸಾಧನೆಗಳೇ (Value Realization) ಆಗಿದೆ.

3 .ಪ್ರಾಯೋಗಿಕ ಅಂಶಗಳು : ಉದ್ಯೋಗ ಕ್ಷೇತ್ರದಲ್ಲಿ ಬೇರೆ ಭಾಷೆಯ ಸಹೋದ್ಯೋಗಿಯನ್ನು ಹಾಸ್ಯ ಮಾಡುವ ಬದಲು, ಅವನ ಸಂಪ್ರದಾಯ ತಿಳಿದುಕೊಳ್ಳುವುದು.ಶಿಕ್ಷಣದಲ್ಲಿ  ಮಕ್ಕಳ ಮನೆ–ಸಂಸ್ಕೃತಿ, ಆಹಾರ, ಉಡುಪಿಗೆ ಗೌರವ ಕೊಡುವುದು.ಸಾಮಾಜಿಕ ಜೀವನದಲ್ಲಿ  ಹಬ್ಬ–ಹರಿದಿನಗಳ ವಿಭಿನ್ನ ಆಚರಣೆಗಳನ್ನು ಗೌರವದಿಂದ  ಕಾಣುವುದು. ಅದರಂತೆಯೇ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬೇರೆ ರಾಷ್ಟ್ರಗಳ ಸಂಸ್ಕೃತಿ ಅಧ್ಯಯನದಿಂದ ನಂಬಿಕೆ–ಸಂಬಂಧ ಗಾಢವಾಗುವುದು.

4 .ವ್ಯಾಪ್ತಿ ಮತ್ತು ಪರಿಣಾಮ: ವೈಯಕ್ತಿಕ ಮಟ್ಟದಲ್ಲಿ ಹೃದಯದ ವಿಶಾಲತೆ, ಸಹಾನುಭೂತಿ, ಸ್ವೀಕಾರಶಕ್ತಿ ಬೆಳೆಯುತ್ತದೆ.ಸಾಮಾಜಿಕವಾಗಿ  ಸಾಮರಸ್ಯ, ಸಮಾನತೆ, ಪರಸ್ಪರ ಸಹಕಾರ ಬಲಗೊಳ್ಳುತ್ತದೆ.ಜಾಗತಿಕ ವಾಗಿ ನೋಡುವುದಾದರೆ  ಶಾಂತಿ, ಮಾನವ ಹಕ್ಕುಗಳ ಗೌರವ, ಮಾನವಕುಲದ ಏಕತೆ ಸಾಧ್ಯವಾಗುತ್ತದೆ. ಆಧುನಿಕ ಸಮಾಜದಲ್ಲಿ ವಿಜ್ಞಾನ–ತಂತ್ರಜ್ಞಾನ, ಆರ್ಥಿಕತೆ, ರಾಜಕೀಯ ಶಕ್ತಿಗಳು ಎಷ್ಟೇ ಬಲಶಾಲಿಯಾಗಿದ್ದರೂ, ಅವುಗಳ ಮೇಲೆ ನಿಲ್ಲುವ ಮೌಲ್ಯವೇ ಸಾಂಸ್ಕೃತಿಕ ಸಂವೇದನೆ.ಇದು ಕೇವಲ “ಸಹಿಷ್ಣುತೆ” ಅಲ್ಲ; ಇದು ವಿಶ್ವಮಾನವತೆ, “ಮಾನವೀಯತೆ” ಮತ್ತು “ಸಹಅಸ್ತಿತ್ವ”ದ ಆಳವಾದ ಬುನಾದಿ. ವಿಭಿನ್ನತೆಯಲ್ಲಿಯೇ ಏಕತೆ ಕಂಡುಕೊಳ್ಳುವುದು – ಅದೇ ನವಯುಗದ ಸಾಂಸ್ಕೃತಿಕ ಸಂವೇದನೆಯ ಮರ್ಮ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

5 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

12 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

23 hours ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

23 hours ago

ಮುಂಗಾರು ಇದ್ದಕ್ಕಿದ್ದಂತೆ ದುರ್ಬಲವಾಗಿದ್ದೇಕೆ..? ಇಲ್ಲಿದೆ ವೈಜ್ಞಾನಿಕ ಕಾರಣ

ದೇಶದ ಬಹುತೇಕ ಭಾಗಗಳಿಂದ ಮಳೆ ಮೋಡಗಳು ಕಡಿಮೆಯಾಗಲು ಪಶ್ಚಿಮ ಪೆಸಿಫಿಕ್‌ನ ಪ್ರಬಲ ಚಂಡಮಾರುತ…

1 day ago

ಮತ್ತೆ ಹೆಚ್ಚಿದ ದೇಶದ ಮಳೆ ಕೊರತೆ – ಜುಲೈ ಆರಂಭದ ಚೇತರಿಕೆ ಕುಂಠಿತ, ಮುಂಗಾರು ಮತ್ತೆ ದುರ್ಬಲ

ಜುಲೈ ಮೊದಲ ವಾರದ ಚೇತರಿಕೆಯ ಬಳಿಕ ದೇಶದ ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ…

1 day ago