ಉನ್ನತ ಶಿಕ್ಷಣವನ್ನು ಪಡೆದು ಬಹುದೊಡ್ಡ ಹುದ್ದೆಗೇರುವ ಕನಸು ರಾಮನದು.
ಆದರೆ ಮನೆಯಲ್ಲಿ ಕಡು ಬಡತನ.ಬಸ್ಟಾಂಡ್ ಪಕ್ಕದ ಅಂಗಡಿಯಲ್ಲಿ ಮುಂದಿನ ಭವಿಷ್ಯ ಹೇಗೆಂಬ ಚಿಂತೆಯಲ್ಲಿ ಕುಳಿತಿದ್ದ ಸ್ವಾಭಿಮಾನಿ ರಾಮನಿಗೆ ಕಂಡದ್ದು ಮುಂದಿದ್ದ ಕಸದ ತೊಟ್ಟಿಯ ಪಕ್ಕದಲ್ಲಿ ಯಾರೋ ಎಸೆದು ಹೋಗಿದ್ದ ಬೂಟ್ ಪಾಲಿಶ್ ಮಾಡುವ ಬ್ರಶ್ ಹಾಗೂ ಅಳಿದುಳಿದ ಸ್ವಲ್ಪವೇ ಸ್ವಲ್ಪ ಪಾಲಿಶ್ ನ ಡಬ್ಬ.
ಹಿಂದೆ ಮುಂದೆ ಯೋಚಿಸದೆ ಅದನ್ನೆತ್ತಿಕೊಂಡ ರಾಮ…ರಾಮನ ಕೈಯ್ಯಲ್ಲಿದ್ದ ವಸ್ತುಗಳನ್ನು ಕಂಡು ತಮ್ಮ ಬೂಟುಗಳನ್ನು ಅವನತ್ತ ಚಾಚಿದ ಅಂಗಡಿಯ ಮುತ್ತುಸ್ವಾಮಿ ದೀಕ್ಷಿತರು ಅವನ ಕೈಯಲ್ಲಿ ನೂರು ರೂಪಾಯಿಯ ನೋಟೊಂದನ್ನು ಕೊಟ್ಟು ಹೊಸ ಬ್ರಶ್ ಹಾಗೂ ಪಾಲೀಶ್ ಡಬ್ಬ ಖರೀದಿಸುವಂತೆ ಹೇಳಿ ಅಪ್ಯಾಯತೆಯಿಂದ ಅವನ ತಲೆ ಸವರಿದರು.
ಹೊಸ ಪಾಲೀಶ್ ಡಬ್ಬ ಖರೀದಿಸಿದ ರಾಮ ದಣಿವರಿಯದೆ ದುಡಿದ….ಇಂದು……….ಅಂದು ತಾನೇ ಪಾಲೀಶ್ ಮಾಡುತ್ತಿದ್ದ ಅದೆಷ್ಟೋ ಹೆಸರಾಂತ ಕಪೆನಿಗಳ ಬೂಟುಗಳ ಬಹುದೊಡ್ಡ ಶಾಖೆಯನ್ನೇ ತಾನು ಹೊಂದಿದ್ದಾನೆ ರಾಮ. ತಾನು ಅಂದು ಆ ಮಾಸಲು ಬಟ್ಟೆಯಲ್ಲಿ ದಣಿವರಿಯದೆ ಬೂಟು ಪಾಲೀಶ್ ಮಾಡುತ್ತಿರುವ ಚಿತ್ರ ಅವನ ಆಫೀಸಿನ ಗೋಡೆಯನ್ನಲಂಕರಿಸಿದೆ.
ಪಕ್ಕದಲ್ಲೇ ಮುತ್ತುಸ್ವಾಮಿ ದೀಕ್ಷಿತರ ವಾತ್ಸಲ್ಯ ಸೂಸುವ ನಗುಮೊಗದ ಚಿತ್ರವೂ.
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…
E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…
ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…
ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…