Advertisement
MIRROR FOCUS

‘ಕವಳ’ ಅಂದ್ರೆ ಗೊತ್ತು…| ‘ಕಳವೆ’ ಗೊತ್ತಾ ? ನಮ್ಮೂರ ಬೀಜ ಬೆಳೆಸೋಣ-ಬಳಸೋಣ-ಬಾಳಿಸೋಣ

Share

ಶಿವಮೊಗ್ಗ ಜಿಲ್ಲೆಯ ಸಾಗರ(Shivmoga,Sagara) ವೈವಿಧ್ಯ ಭತ್ತದ ಪ್ರಬೇಧಗಳ(Paddy breed) ಕಣಜವೇ ಆಗಿತ್ತು… ಸಿಹಿ ಕೆಂಪಕ್ಕಿಯ ಸಿದ್ಧಸಾಲೆ, ಶ್ರೀಮಂತರ ಅಕ್ಕಿ(Rice) ಎಂದೇ ಖ್ಯಾತವಾದ ರಾಜಭೋಗ-ರಾಜಮುಡಿ , ಪಾಯಸಕ್ಕೆ ಪರಿಮಳ ಕೊಡುವ ಜೀರಿಗೆ ಸಣ್ಣ -ಗಂಧಸಾಲೆ-ಕುಂಕುಮ ಕೇಸರಿ , ‘ಕಳೆಯಬಾರದ ತಾಯಿ ಭತ್ತ ‘ ಎಂದೆ ಗೌರವಿಸಿ ಪ್ರತಿ ವರ್ಷ ತಪ್ಪದೆ ಬೆಳೆಸುವ ಕಳವೆ, ಚಕ್ಕುಲಿಗೆ ಪ್ರಿಯವಾದ ಕರೆಕಾಲ್ದಡಿಗ , ಬುತ್ತಿ ಊಟಕ್ಕೆ ಅತ್ಯುತ್ತಮವಾದ ಸಣ್ಣವಾಳ್ಯ, ಪಸೆ ಹೆಚ್ಚು ಬೇಡದ ಹಕ್ಲು ಹೊನಸು, ತೀರಾ ತೆಳು ಸಿಪ್ಪೆಯ ಪುಟ್ಟ ಹೆಗ್ಗೆ , ಜನಪ್ರಿಯವಾದ ಆಲೂರು ಸಣ್ಣ , ನೆರೆಗೂ ಸೆಡ್ಡು ಹೊಡೆವ ನೆರಗುಳಿ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ…ಅಬ್ಬಬ್ಬಾ ಎಷ್ಟೆಲ್ಲ ವಿಶೇಷತೆ !

ಕೇವಲ 20 ವರುಷಗಳ ಹಿಂದೆ ಸಾಗರದಲ್ಲಿ 62 ಭತ್ತದ ಪ್ರಬೇಧಗಳಿದ್ದವು. ಈಗ …? ಅದ್ನೇನ್ ಕೇಳ್ತಿ , ಅಕ್ಕಾಳು , ಅರ್ಲು ಹೊನಸು , ಕೆಂಪುದಡಿ ಗೊಳ್ತೀಗ, ಚಿಟಗ, ಚಿಳಗ, ಕರೆಕಣ್ ಹೊನಸು , ಚಿಕ್ಕಸಾಲೆ, ಜೇನುಗೂಡು , ತೊಗರಿನ ಭತ್ತ , ನ್ಯಾರೆಮಿಂಡ, ಬಿಳಿದಡಿ ಬಂಗಾರದ ಗುಂಡು , ಬರ ರತ್ನಚೂಡಿ , ಬಿಳಿ ಇಸಡಿ, ಬಂಗಾರ ಕಡ್ಡಿ , ಬಿಳಿದಡಿ ಗೋಳ್ತಿಗ , ಮಲ್ಲಿಗೆ ಸಣ್ಣ , ಮುಸಳ್ಳಿ , ಬುಲ್ಬುಲ್ , ಬಿಳಿ ಮಳ್ಹೆಗ್ಗೆ, ಮೈಸೂರು ಸಣ್ಣ , ದಬ್ಬಣ ಸಾಲೆ, ಸಂಪೆದಳ, ಸಣ್ಣ ಅಭಿಲಾಷ, ಮುಳ್ ಭತ್ತ , ರಾಜಮಣಿ…ಕಳೆದಿವೆ…ಎಲ್ಲೂ ಕಾಣದು. ಮತ್ತೆ ತರಲಾದೀತೆ ? ಒಂದು ತಾಲೂಕಿನ ಸ್ಥಿತಿಯಿದು. ರಾಜ್ಯದಲ್ಲಿ, ದೇಶದಲ್ಲಿ ಇನ್ನೆಷ್ಟು ಕಳೆದಿವೆಯೊ … ಬೀಜಗಳ ಉಳಿಸಲು ಇರುವ ಸುಲಭ ದಾರಿ ಒಂದೆ ; ಬೆಳೆಸುವುದು ಮತ್ತು ಬಳಸುವುದು. ಹುಡುಕಿ ಸಂರಕ್ಷಿಸೋಣ ; ನಮ್ಮ ಸುತ್ತಲಿರುವ ಪಾರಂಪರಿಕ ಬೀಜ ವೈವಿಧ್ಯ. ನಮ್ಮೂರ ಬೀಜ ಬೆಳೆಸೋಣ-ಬಳಸೋಣ-ಬಾಳಿಸೋಣ. ದೇಶೀ ಬೀಜಗಳು ಸಾವಯವ ಕೃಷಿಗೆ ಬಹಳ ಪೂರಕ.

ಬೀಜಗಳು ನಮ್ಮ ಮನೆಯ ಪುಟ್ಟ ಸದಸ್ಯರಲ್ಲವೆ ? ಜನವರಿ 12-13, ಶುಕ್ರವಾರ-ಶನಿವಾರ ಕೊಲ್ಹಾಪುರ ಸಮೀಪವಿರುವ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ಕೃಷಿ ಕಾಯಕ ಕ್ಷೇತ್ರದ ಈ ರೀತಿಯ ಹಲವು ಪ್ರಶ್ನೆಗಳಿಗೆ ಪರಿಹಾರ-ಉತ್ತರ ಹುಡುಕುವ ತವಕ. ಪರಮಪೂಜ್ಯ ಶ್ರೀ ಅದೃಶ್ಯ ಕಾಡ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರೇರಣೆಯಲ್ಲಿ ‘ಸಾವಯವ ಕೃಷಿ ಪರಿವಾರ’ ಮತ್ತು ‘ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ‘ ಸಂಸ್ಥೆಗಳು ಸಮಾನಾಸಕ್ತ ಸಂಸ್ಥೆಗಳೊಡಗೂಡಿ ಸಂಘಟಿಸುತ್ತಿರುವ ಎಲ್ಲಾ ಸಂಪ್ರದಾಯಗಳ ಪರಮಪೂಜ್ಯ ಮಠಾಧೀಶರು, ಸಂತರು, ಧರ್ಮದರ್ಶಿಗಳು ಹಾಗೂ ರೈತರು, ವಿಜ್ಞಾನಿಗಳು, ಶಿಕ್ಷಣ ತಜ್ಞರ ‘ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು’ ಮಹಾಸಮಾವೇಶದ ಆಶಯ.

ಬರಹ :
ಆನಂದ ಆ. ಶ್ರೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

4 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

7 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

8 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

11 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

11 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

14 hours ago