Advertisement
Opinion

ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ಪರಿಸರಕ್ಕೆ ಧಕ್ಕೆ ತರದಿರಲಿ | ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ

Share

ನಾವು ಸ್ವಾತಂತ್ರ್ಯ ದಿನಾಚರಣೆಯನ್ನು(Independence day) ದೇಶದ ಸ್ವ್ಯಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸಲು ಮಾಡುತ್ತಿದ್ದೇವೆಯಾ..? ಇಲ್ಲಾ ನಮ್ಮ ಪ್ರಕೃತಿಯನ್ನು ಹಾಳು ಮಾಡಲು ಮಾಡುತ್ತಿದ್ದೇವಾ ಅನ್ನುವ ಅನುಮಾನ ಮೂಡುತ್ತದೆ. ಮುಂಬರುವ ದಿನಗಳಲ್ಲಿ ನಾಡಹಬ್ಬ, ಗಣ್ಯಾತಿಗಣ್ಯರು ಮಾಡುವ ಕಾರ್ಯಕ್ರಮ, ಸಾಮೂಹಿಕವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳಲ್ಲಿ ಅದಕ್ಕಾಗಿ ಬಳಸುವ, ದಾನ, ಮಂಟಪಗಳು, ಚಿತ್ರಗಳು, ಸರ್ಕಾರೀ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ, ಕಣ್ಣಿಗ ಕಾಣುವಂತೆ ಚಿತ್ರಸಹಿತ, ಪ್ಲಾಸ್ಟಿಕ್, ರಬ್ಬರ್ ಇತರೆ ತ್ಯಾಜ್ಯದಿಂದಾಗುವ ತೊಂದರೆಗಳ ವಿವರಣೆ ಇರುವ ಫಲಕ ಕಡ್ಡಾಯ ಮಾಡಬೇಕು.

ಈ ಮಾಹಿತಿಯನ್ನು ಓದಿದ ಕೆಲವೇ ಕೆಲವರಾದರು ಸಹೖದಯಿಗಳು, ಕಾರ್ಯುಪ್ರವೃತ್ತರಾದರೆ ಸಾಕು. ಒಬ್ಬರಿಂದ ಒಬ್ಬರನ್ನು ಜಾಗೃತಗೊಳಿಸಲು ಸಾಧ್ಯವಾದರೆ ಆ ಜಾಗೃತದಿಂದಾಗುವ ಮುಂದಿನ ಕಾರ್ಯ ಸದಾ ಸಾಕಾರದೆಡೆ ಇರುತ್ತದೆ. ಇದು ಸರಿ ಎನಿಸಿದರೆ, ಇದಕ್ಕೆ ಪೂರಕವಾದ ಚಿತ್ರಗಳು, ಸೂಕ್ತ ಸಾಕ್ಷಚಿತ್ರಗಳನ್ನು ಕಲೆಹಾಕಿ, ಸಂಭಂದ ಪಟ್ಟ ಅಧಿಕಾರಿಗಳಿಗೆ ಸವಿವರ, ಸಚಿತ್ರಸಹಿತ, ದೂರು ನೀಡಿ. ಹಾನಿ ಕಾರಕ ವಸ್ತುಗಳನ್ನಳ ತಯಾರಿಕೆ ಖಡ್ಡಾಯವಾಗಿ ನಿಲ್ಲಿಸಲು, ಬಳಕೆಗೆ ನಿರ್ದೇಶನಗಳನ್ನು ಹೇರಲು ಪತ್ರಮುಕೇನ ಆಗ್ರಹಿಸೋಣ. ಆಂದೋಲನಗಳನ್ನು ಮಾಡೋಣ, ತಯಾರಿಕಾ ಘಟಕಗಳೆದುರು ಸತ್ಯಾಗ್ರಹ ಮಾಡೋಣ. ಮಾರಾಟಗಾರರಿಗೆ ಮಾರದಂತೆ ತಾಕೀತು ಮಾಡೋಣ.

ಇದಕ್ಕಾಗಿ ಸಹಕರಿಸಲು, ಸಲಹೆ, ಸಲಕರಣೆಗೆ, ಸಹಭಾಗಿತ್ವಕ್ಕೆ ಕೈಜೋಡಿಸಿ, ಆದಿ ಇಂದ ಅಂತ್ಯದವರೆಗೆ ಕೈ ಕೊಡದೆ, ಕೈ ಬಿಡದೆ ಸರಪಳಿಯಂತೆ, ತಡೆ ಗೋಡೆಗಳಂತೆ ನಿಂತು ನಿಭಾಯಿಸುವುದಕ್ಕೆ ಬದ್ದರಾಗಿ ಬನ್ನಿ. ನಮ್ಮಿಂದಾದ ಅಳಿಲು ಸೇವೆ ಒಬ್ಬರಿಗೆ ಒಂದು ಕ್ಷಣ ಹಾಯಾಗಿದೆ ಎಂದೆನಿಸಿದರೂ ನಮ್ಮ ಕಾರ್ಯ, ಜೀವನ ಸಾರ್ಥಕವಾದಂತೆ.
ಬನ್ನಿ ಕೖ ಜೋಡಿಸಿ, ನಡೆಸಿ, ವಿಪುಲವಾದ ಫಲ ನೀಡಲು ಪಣತೊಟ್ಟು ನಿಲ್ಲಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

1 day ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

2 days ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

2 days ago