Advertisement
MIRROR FOCUS

ನಮ್ಮಲ್ಲಿ ತೆಂಗಿನಕಾಯಿಗೆ ಕೇವಲ 55 ರೂಪಾಯಿ…! | ಇ ಕಾಮರ್ಸ್‌ ಯುಗದಲ್ಲಿ ರಸ್ತೆ ಬದಿಯ ವ್ಯಾಪಾರಿಯಿಂದ ಹೊಸ ಟೆಕ್ನಿಕ್..!‌ |

Share

ಕೊರೋನಾ ನಂತರ  ದೇಶದಲ್ಲಿ  ಇ ಕಾಮರ್ಸ್‌ ವಿಸ್ತರಣೆಯಾಗಿದೆ. ನಗರ ಪ್ರದೇಶದಲ್ಲಿ  ಇ ಕಾಮರ್ಸ್‌  ವಿಸ್ತಾರಗೊಂಡಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೇ ವಿವಿಧ ಸಂಸ್ಥೆಗಳು ಎಲ್ಲಾ ವಸ್ತುಗಳನ್ನೂ ತಂದೊಪ್ಪಿಸುತ್ತವೆ. ಆಪ್‌ ಮೂಲಕ ಬುಕ್‌ ಮಾಡಿದರೆ ಸಾಕು. ಮನೆ ಬಾಗಿಲಿಗೆ ಬರುತ್ತವೆ. ಹೀಗಾಗಿ ಅನೇಕ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯ ಎಳನೀರು ವ್ಯಾಪಾರಿಯೊಬ್ಬರು ಮಾಡಿರುವ ಟೆಕ್ನಿಕ್‌ ಭಾರೀ ವೈರಲ್‌ ಆಗಿದೆ. ಚರ್ಚೆಗೆ ಕಾರಣವಾಗಿದೆ.…..ಮುಂದೆ ಓದಿ….

ಇ-ಕಾಮರ್ಸ್ ಯುಗದಲ್ಲಿ ಸ್ಥಳೀಯ ಮಾರಾಟಗಾರರು ಸ್ಫರ್ಧೆ ಮಾಡಬಹುದದೇ..? ಅವರ ಜೊತೆ ಬೆಲೆಯೊಂದಿಗೆ ಸ್ಪರ್ಧಿಸಬಹುದೇ..? ಎನ್ನುವ ಚರ್ಚೆ ಕೆಲವು ಸಮಯಗಳಿಂದ ಇದೆ. ಈ ನಡುವೆ ಬೆಂಗಳೂರಿನ ರಸ್ತೆ ಬದಿಯ ಎಳನೀರು ಮಾರಾಟಗಾರರ ಪೋಸ್ಟರ್ ವೈರಲ್ ಆಗಿದೆ .‌ ಅವರು ಗ್ರಾಹಕರಿಗೆ ಎಳನೀರನ್ನು ಕೇವಲ 55 ರೂ.ಗೆ ನೀಡುವುದಾಗಿ ಹೇಳಿದ್ದಾರೆ. ಬೆಲೆಗಳ ವ್ಯತ್ಯಾಸವನ್ನು ಕಾಣಿಸಿದ್ದಾರೆ. ಈ ಪೋಸ್ಟರ್‌ನಲ್ಲಿ  ಝೆಪ್ಟೋ, ಬ್ಲಿಂಕಿಟ್‌, ಬಿಗ್‌ಬಾಸ್ಕೆಟ್‌ಗಳಲ್ಲಿ 70 ರೂಪಾಯಿ – 80 ರೂಪಾಯಿ ಆಸುಪಾಸಿನಲ್ಲಿದೆ  ತೆಂಗಿನಕಾಯಿ ದರ. ಆದರೆ ನಮ್ಮ ಅಂಗಡಿಯಲ್ಲಿ ಕೇವಲ 55 ರೂಪಾಯಿ ಎಂದು ದಾಖಲಿಸಿದ್ದರು ಆ ಪೋಸ್ಟರ್‌ನಲ್ಲಿ. ಇದು ವೈರಲ್‌ ಆಗಿತ್ತು ಹಾಗೂ ಸಾಕಷ್ಟು ಚರ್ಚೆಯೂ ಆಗಿತ್ತು. ಈ ಪೋಸ್ಟರ್‌ ಗಮನಿಸಿದ ಗ್ರಾಹಕರೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಅದನ್ನು ಪೀಕ್‌ ಬೆಂಗಳೂರು ಎನ್ನುವ ಹ್ಯಾಂಡಲ್‌ ಮೂಲಕ ಶೇರ್‌ ಮಾಡಲಾಗಿತ್ತು, ಇದು ವೈರಲ್‌ ಆಗಿದ್ದು, ಚರ್ಚೆಯಾಗಿದೆ. ಅನೇಕರು ಪ್ರಶಂಸಿದರೆ, ಇನ್ನೂ ಕೆಲವು ಮನೆ ಬಾಗಿಲಿಗೆ ತಂದು ನೀಡುತ್ತಾರೆಯೇ, ಗುಣಮಟ್ಟ ನೀಡುತ್ತಾರೆಯೇ ಇತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ.  ಕೆಲವರು ಅವರನ್ನು ಬೆಂಬಲಿಸುವ ಅಗತ್ಯತೆಯನ್ನು ಹೇಳಿದ್ದಾರೆ, ಇನ್ನೂ ಕೆಲವರು ಆನ್‌ಲೈನ್ ವಿತರಣೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ತಂದು ನೀಡುವ ಕಾರಣದಿಂದ ಹೆಚ್ಚಿನ ಶುಲ್ಕ ಇದೆ ಎಂದು ಹೇಳಿದ್ದಾರೆ.

ಈಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಇ ಮಾರುಕಟ್ಟೆಯ ಕಾರಣದಿಂದ ಹಾಗೂ ಈಚೆಗೆ ವಿಸ್ತರಣೆಯ ವೇಗದ ಕಾರಣದಿಂದ ಸುಮಾರು 25 ರಿಂದ 30%  ಸ್ಥಳೀಯ ಅಂಗಡಿಗಳ ನಷ್ಟವಾಗಬಹುದು ಎಂದು ವರದಿ ಉಲ್ಲೇಖಿಸಿದೆ. ಇಂತಹ ಸಂದರ್ಭದಲ್ಲಿ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ವ್ಯವಹಾರದಲ್ಲಿ ಯಶಸ್ಸು ಕಾಣಲು ಇಂತಹ ತಲನಾತ್ಮಕ ಅಂಶಗಳೂ ಇಂದು ಮುಖ್ಯವಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ನಾನಾ ರೀತಿಯ ಕಸರತ್ತು ಮಾಡಬೇಕಾಗಿದೆ. ವ್ಯಾಪಾರಿಯ ಸೃಜನಶೀಲತೆಯ ಆಧಾರದಲ್ಲಿಯೇ ಇಂದು ಸ್ಥಳೀಯ ಮಾರುಕಟ್ಟೆಗಳು ಉಳಿದುಕೊಂಡಿದೆ.

ಗ್ರಾಹಕರು ಹಣವನ್ನು ಉಳಿಸಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ನಾಲ್ಕೈದು ವೆಬ್‌ ಸೈಟ್ ಚೆಕ್‌ ಮಾಡಿ ಕಡಿಮೆ ಬೆಲೆ ಎಲ್ಲಿದೆ ಅಲ್ಲಿಂದ ಆರ್ಡರ್ ಮಾಡುತ್ತಾರೆ. ಆದರೆ ರಸ್ತೆ ಬದಿ ವ್ಯಾಪಾರಿ ತನ್ನ ಗ್ರಾಹಕರಿಗೆ ಹೆಚ್ಚಿನ ಹೊರೆ ನೀಡದೆ ಕಡಿಮೆ ಬೆಲೆಯಲ್ಲಿ ಹೇಗೆ ನೀಡುತ್ತಾರೆ ಎನ್ನುವ ಅಂಶವನ್ನು ಇಲ್ಲಿ ಉಲ್ಲೇಖಿಸಿರುವುದು ಗಮನ ಸೆಳೆದಿದೆ.

ಇದೇ ಮಾದರಿ ತೆಂಗು ಬೆಳೆಗಾರರಿಗೆ ಏಕೆ ಸಾಧ್ಯವಾಗುತ್ತಿಲ್ಲ..?. ಇ ಮಾರುಕಟ್ಟೆ ಮೂಲಕ ತೆಂಗಿನಕಾಯಿ ಅಥವಾ ಎಳನೀರು 70-90 ರೂಪಾಯಿವರೆಗೂ ಮಾರಾಟವಾಗುವುದಾದರೆ, ತೆಂಗು ಬೆಳೆಗಾರರಿಗೆ ಏಕೆ ಲಭ್ಯವಾಗುತ್ತಿಲ್ಲ?. ಇಡೀ ವರ್ಷದ ಬೆಳೆ ಬೆಳೆದು ಅದಕ್ಕೆ ಲಭ್ಯವಾಗುವ ಹಣ 30-40 ರೂಪಾಯಿ..!. ಉಳಿದ ಶೇ.50 ರಷ್ಟು ಹಣ ಮಾರುಕಟ್ಟೆಯಲ್ಲಿ ಕರಗುತ್ತದೆಯಾದರೆ ರೈತರೇ ಇಂತಹ ಮಾರುಕಟ್ಟೆಯನ್ನು ಏಕೆ ಕಂಡುಕೊಳ್ಳಬಾರದು..?.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

5 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

5 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

13 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

13 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

2 days ago