Advertisement
ಸುದ್ದಿಗಳು

ಲೆಕ್ಕ ತಪ್ಪಿದ ಅಂಕ | ಎಕನಾಮಿಕ್ಸ್ ಪರೀಕ್ಷೆಯಲ್ಲಿ 27 ಅಂಕ ಢಮಾರ್…!‌ |‌ ವಿದ್ಯಾರ್ಥಿನಿಯ ಆತಂಕಕ್ಕೆ ಯಾರು ಹೊಣೆ ? |

Share

ಇದೊಂದು ಲೆಕ್ಕ. 09+11+12+20+18+27 =70 ..! ಇನ್ನೊಮ್ಮೆ ಕೂಡಿಸಿ. ಸರಿಯಾಗದೇ ಇದ್ದರೆ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಕೇಳಬೇಕು. ಇಂತಹದ್ದೊಂದು ಎಡವಟ್ಟು ಲೆಕ್ಕ ಮಾಡಿರುವುದು  ಎಕನಾಮಿಕ್ಸ್‌ ಉಪನ್ಯಾಸಕರೊಬ್ಬರು.ಆದರೆ ಈ ಎಡವಟ್ಟು ವಿದ್ಯಾರ್ಥಿನಿಯೊಬ್ಬ ಭವಿಷ್ಯದ ಮೇಲೆ ಹೊಡೆತ ಬೀಳುತ್ತಿತ್ತು. ಆದರೆ ಏನೋ ಎಡವಟ್ಟಾಗಿದೆ ಎಂದು ವಿದ್ಯಾರ್ಥಿನಿಗೆ ಪಕ್ಕಾ ಗೊತ್ತಾದ ಕಾರಣ ಧೈರ್ಯದಿಂದ ಇದ್ದರು. ಈಗ ಉತ್ತರ ಸಿಕ್ಕಿತು. 27 ಅಂಕವನ್ನು ಕೂಡಿಸಲೇ ಇಲ್ಲ…!. ಹೀಗಾಗಿ ಈಗ ವಿದ್ಯಾರ್ಥಿನಿಯ ಅಂಕ 97.

ಹೌದು. ಈ ಎಡವಟ್ಟು ಆಗಿರುವುದು ಕುಕ್ಕೆ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂದು ಭಾರ್ಗವಿ ಅವರಿಗೆ. ರಾಧಾಕೃಷ್ಣ ಭಟ್‌ ಅಡ್ಕ ಗುತ್ತಿಗಾರು ಇವರ ಪುತ್ರಿಯಾಗಿರುವ ಬಿಂದು ಭಾರ್ಗವಿ  ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಎಕನಾಮಿಕ್ಸ್‌ನಲ್ಲಿ  95 ರಿಂದ 97 ಅಂಕದ ನಿರೀಕ್ಷೆಯಲ್ಲಿದ್ದರು. ಆದರೆ ಫಲಿತಾಂಶ ಬಂದಾಗ ಕೇವಲ 70 ಅಂಕ. ವಿದ್ಯಾರ್ಥಿನಿಗೆ ಒಮ್ಮೆ ಆತಂಕವಾಗಿತ್ತು. ಇಷ್ಟೆಲ್ಲಾ ಬರೆದು ಹೀಗೇಕಾಯಿತು ಎಂದು.ಇದು ಎಕನಾಮಿಕ್ಸ್‌ ಬೇರೆ. ಲೆಕ್ಕಗಳು ಪಕ್ಕಾ ಇದ್ದರೆ ಅಂಕವೂ ಪಕ್ಕಾವೇ. ಹಾಗಾಗಿ ಎಲ್ಲವೂ ಬರೆದ ನಂತರವೂ ಹೀಗೇಕಾಯಿತು ಎಂದು ಆತಂಕಕ್ಕೆ ಒಳಗಾದಳು. ಆಗ ವಿದ್ಯಾರ್ಥಿನಿಯ ಮನೆಯವರು ಧೈರ್ಯ ತುಂಬಿ ಉತ್ತರ ಪತ್ರಿಕೆಯ ನಕಲು ತಂದಾಗ ಸತ್ಯ ತಿಳಿಯಿತು. 27 ಅಂಕವನ್ನು ಸೇರ್ಪಡೆ ಮಾಡಲೇಇಲ್ಲ..!. ಹೀಗಾಗಿ ವಿದ್ಯಾರ್ಥಿನಿಗೆ ಈಗ ಅಂಕ 97.

ಇಲಾಖೆಗಳು ಇಂತಹ ಎಡವಟ್ಟುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪರೀಕ್ಷೆ ಚೆನ್ನಾಗಿ ಬರೆದು ತಪ್ಪಾಗಿ ಅಂಕ ಕೂಡಿಸಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳು ಮಾನಸಿಕ ಆಘಾತಕ್ಕೆ ಒಳಗಾದರೆ ಯಾರು ಹೊಣೆ. ಹೀಗಾಗಿ ಇಂತಹ ಗಂಭೀರವಾದ ಎಡವಟ್ಟುಗಳು ಆಗದಂತೆ ಇಲಾಖೆಗಳು ಎಚ್ಚರ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಯಾವುದೇ ವಿದ್ಯಾರ್ಥಿಗಳಿಗೆ ಇದೊಂದು ಪಾಠ. ನಿರೀಕ್ಷೆಯಷ್ಟು ಅಂಕ ಬಾರದೇ ಇದ್ದಾಗ ಯಾವುದೇ ಆತಂಕಕ್ಕೆ ಒಳಗಾಗದೆ ಪರಿಶೀಲನೆ ನಡೆಸುವುದು  ಉತ್ತಮ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

55 minutes ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

6 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

13 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

22 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

1 day ago