ಹರ್ಯಾಣ ಸರಕಾರ ಯಮುನಾ ನದಿಗೆ ಉದ್ದಿಶ್ಯಪೂರ್ವಕವಾಗಿ ಅಮೋನಿಯಾ ಹೆಚ್ಚು ಬೆರೆಯುವಂತೆ ಮಾಡ್ತಾ ಇದೆ.ಹಾಗಾಗಿ ಆ ನೀರನ್ನು ಬಳಸಿದ ದೆಹಲಿಯ ಜನರಿಗೆ ಆರೋಗ್ಯ ಸಮಸ್ಯೆ ಬರಲಿದೆ ಅಂತ ಅರವಿಂದ ಕೇಜ್ರೀವಾಲರ ಆರೋಪ.
ಹಾಗೇನೂ ಆಗಿಲ್ಲ ಎಂಬುದರ ಪ್ರದರ್ಶನಕ್ಕಾಗಿ ಹರ್ಯಾಣದ ಮುಖ್ಯಮಂತ್ರಿಯವರು ಎರಡು ರಾಜ್ಯಗಳ ಗಡಿಯಲ್ಲಿ ಯಮುನಾ ನದಿಯ ನೀರು ಕುಡಿದು ತೋರಿಸಿದ ವಿಡಿಯೋ ಪ್ರದರ್ಶನಕ್ಕೆ.
ನೀರು ಕುಡಿದ ನಾಟಕ ಅವರು ಮಾಡಿದ್ದು ಅಂತ ಇವರ ಪ್ರತ್ಯಾರೋಪ. ಮಾಧ್ಯಮಗಳಲ್ಲಂತೂ ಇದರದ್ದೇ ಸುದ್ದಿ,ಚರ್ಚೆ,ವಾಗ್ವಾದ. ನನಗೆ ಅರ್ಥವಾಗದ್ದು ,ದೆಹಲಿ / ಹರ್ಯಾಣ ರಾಜ್ಯದ ಗಡಿಯಲ್ಲಿನ ನೀರಿನ ರಾಸಾಯನಿಕ ಪರೀಕ್ಷೆ ಯಾವುದೇ ಮಾಧ್ಯಮ ಯಾಕೆ ಮಾಡಿಲ್ಲ ಅಂತ.ಅದು ಮತ್ತು ಅದರ ಜೊತೆ ದೆಹಲಿ ರಾಜ್ಯದ ಇನ್ನೊಂದು ಬದಿಯಲ್ಲಿನ ನದಿ ನೀರನ್ನು ಅಮೋನಿಯಾ ರಾಸಾಯನಿಕದ ಪ್ರಮಾಣಕ್ಕಾಗಿ ಪರೀಕ್ಷೆ ಮಾಡಿಸಿದ್ದರೆ ಸಮಸ್ಯೆ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತಿತ್ತಲ್ಲಾ ಅಂತ. ಅಂದ ಹಾಗೆ ದೆಹಲಿ ರಾಜ್ಯ ದಾಟಿದ ಬಳಿಕ ಯಮುನಾ ನದಿ ಯಾವ ರಾಜ್ಯದಲ್ಲಿ ಹರಿದು ಹೋಗುತ್ತಿದೆ? ಅಲ್ಲಿ ನದಿ ನೀರಿನ ಪರಿಸ್ಥಿತಿ ಹೇಗಿದೆ?
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…