Advertisement
ಸುದ್ದಿಗಳು

ತಾಂತ್ರಿಕತೆ ಮುಂದುವರಿದರೂ ಸಮಸ್ಯೆ ಮುಗಿಯದು…! | ಇಲ್ಲಿ ವಿದ್ಯುತ್‌ ಕೈಕೊಟ್ಟದ್ದು ಹೇಗೆ..?

Share

ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲ. ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜು ಸಮಸ್ಯೆ. ಕಾರಣ ಭೂಮಿ ಒಳಗಿನ ಕೇಬಲ್‌ ಸಮಸ್ಯೆ.

ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ಕಳೆದ ಎರಡು ದಿನಗಳಿಂದ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆ. ಹೀಗಾಗಿ ಅನೇಕ ಕಡೆಯ ವಿದ್ಯುತ್‌ ಬಳಕೆದಾರರಿಗೆ ಸಮಸ್ಯೆ. ಹಾಗೆಂದು ಇಲಾಖೆಯ ಸಿಬಂದಿಗಳು, ಅಧಿಕಾರಿಗಳು ಮೌನವಾಗಿ ಕುಳಿತಿಲ್ಲ. ಇಡೀ ದಿನ ಕೆಲಸ ಮಾಡುತ್ತಲೇ ಇದ್ದಾರೆ. ಗ್ರಾಹಕರು, ಕೃಷಿಕರಿಗೆ ಎರಡೂ ದಿನಗಳಿಂದ ಅಧಿಕಾರಿಗಳಿಗೆ, ಮೆಸ್ಕಾಂ ಸಿಬಂದಿಗಳನ್ನು ಪ್ರಶ್ನಿಸುವುದೇ ಕೆಲಸ, ಕರೆಂಟಿಲ್ಲ ಏಕೆ..?. ಕಾರಣ , ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಕೇಬಲ್‌ ಸಮಸ್ಯೆ.(ಯು ಜಿ ಕೇಬಲ್)‌

ಭೂಮಿಯೊಳಗೆ ಕೇಬಲ್‌ ಅಳವಡಿಕೆ ಮಾಡುವ ವೇಳೆ ಎರಡೆರಡು ಕೇಬಲ್‌ ಅಳವಡಿಕೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಯಾವ ಸಮಸ್ಯೆಯೂ ಇಲ್ಲದೆ ಗ್ರಾಹಕರಿಗೆ ನಿಶ್ಚಿಂತೆಯಿಂದ ವಿದ್ಯುತ್‌ ಸರಬರಾಜಾಗಿತ್ತು. ಇದೀಗ ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಒಂದು ಕೇಬಲ್‌ ಸಮಸ್ಯೆಯಾಗಿ ಇನ್ನೊಂದು ಕೇಬಲ್‌ ಮೂಲಕ ವಿದ್ಯುತ್‌ ನೀಡಿದಾಗಲೂ ಸಮಸ್ಯೆ..!. ಇದನ್ನು ದುರಸ್ತಿ ಮಾಡಲು ಇನ್ನೊಂದು ತಂಡ ಆಗಮಿಸಬೇಕು ಹಾಗೂ ಭೂಮಿಯೊಳಗಿನಿಂದ ಕೇಬಲ್‌ ತೆಗೆದು ದುರಸ್ತಿ ಮಾಡಬೇಕು. ಹೀಗಾಗಿ ಸಮಸ್ಯೆಯಾಗಿದೆ. ಅಧಿಕಾರಿಗಳು, ಸಿಬಂದಿಗಳು ನಿರಂತರ ಕೆಲಸದಲ್ಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಕೃಷಿಕರು, ಗ್ರಾಮೀಣ ಭಾಗದ ಹಲವು ಕಡೆ ಸಮಸ್ಯೆ. ಕುಡಿಯುವ ನೀರು, ಸಣ್ಣ ಪುಟ್ಟ ಇಂಡಸ್ಟ್ರೀಗಳು, ಕೃಷಿಕರು ಸೇರಿದಂತೆ ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಲೂ ಅದೇ ಸಮಸ್ಯೆ ಕಾಡಿದೆ. ತಾಂತ್ರಿಕವಾಗಿ ಎಷ್ಟೇ ಮುಂದಿವರಿದರೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸ್ವಲ್ಪ ವಿಳಂಬವೇ ಆಗಿದೆ. ಇದಕ್ಕೆ ಕಾರಣರು ಯಾರೂ ಅಲ್ಲ, ಪ್ರಕೃತಿಯೇ ಕಾರಣ. ಹೀಗಾಗಿ ಗ್ರಾಹಕರು ಸಮಾಧಾನ ಪಟ್ಟುಕೊಳ್ಳುವುದು, ತಾಳ್ಮೆ ಕಳೆದುಕೊಳ್ಳದಿರುವುದೇ ಪರಿಹಾರ..!.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

4 hours ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

4 hours ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

21 hours ago

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ

ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…

1 day ago

ಕರ್ನಾಟಕದ 69.60 ಲಕ್ಷ ಹೆಕ್ಟೇರ್ ಭೂಮಿ ಹಾನಿ – ಕೃಷಿ ಉತ್ಪಾದಕತೆಗೆ ದೊಡ್ಡ ಸವಾಲು

ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…

1 day ago

ಮಂಗಳೂರಿನಲ್ಲಿ ರಾಷ್ಟ್ರೀಯ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ತೆರೆ – ಮಣಿ ಸರ್ಬರ್‌ತೋ ಚಾಂಪಿಯನ್

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್–2026ಕ್ಕೆ…

2 days ago