ಕೃಷಿಕನಾದವನಿಗೆ ನಷ್ಟವಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹಣ್ಣಿಗೂ ಅದರದೇ ಆದ ಸೀಸನ್ ಇರುತ್ತದೆ. ಮಾವಿನ ಹಣ್ಣು, ಅನಾನಸ್, ದ್ರಾಕ್ಷಿ, ಹೀಗೆ ಪ್ರತಿಯೊಂದು ಹಣ್ಣಿಗೂ ಒಂದು ಕಾಲದಲ್ಲಿ ತುಂಬ ಬೇಡಿಕೆ ಇದ್ದರೂ, ವರ್ಷ ಪೂರ್ತಿ ಬೇಡಿಕೆ ಇರಲು ಸಾಧ್ಯವಿಲ್ಲ.
ಆದರೆ, ನೆಲ್ಲಿಕಾಯಿಗೆ ವರ್ಷಪೂರ್ತಿ ಮಾರುಕಟ್ಟೆಯಲ್ಲು ಬೇಡಿಕೆ ಸೀರವಾಗಿರುತ್ತದೆ. ನೆಲ್ಲಿಕಾಯಿಂದ ಜ್ಯೂಸ್, ಜಾಮ್, ಕ್ಯಾಂಡಿ,ಪೌಡರ್ ಮೊದಲಾದ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಬಹುದು. ಇದರಿಂದ ರೈತರಿಗೆ ಹೆಚ್ಚುವರಿ ಲಾಭ ಸಹ ದೊರೆಯಲು ಸಹಾಯಕಾರಿಯಾಗುತ್ತದೆ. ಈ ನೆಲ್ಲಿಕಾಯಿ ಗಿಡವನ್ನು ರಾಜಸ್ಥಾನದ ಪುಷ್ಕರ್ ಪ್ರದೇಶದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ನೆಲ್ಲಿಕಾಯಿ ಕೃಷಿ ನಡೆಸುತ್ತಿದ್ದಾರೆ. ಈ ಬೆಳೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಲಾಭದಾಯಕ ಬೆಳೆಯಾಗಿ ಹೊರಹೊಮ್ಮಿದೆ. ಇಲ್ಲಿನ ಫಲವತ್ತಾದ ಮಣ್ಣು ಮತ್ತು ಹವಾಮಾನವು ಈ ಕೃಷಿಗೆ ಸೂಕ್ತವಾಗಿರುವುದರಿಂದ ರೈತರು ಸಾಂಪ್ರದಾಯಿಕ ಬೆಳೆಗಳಿಂದ ದೂರಾಗಿ ನೆಲ್ಲಿಕಾಯಿ ತೋಟಗಳನ್ನು ಸ್ಥಾಪಿಸಿದ್ದಾರೆ.
ಇಲ್ಲಿ ಹನಿ ನೀರಾವರಿ, ಆಧುನಿಕ ತಂತ್ರಜ್ಞಾನ ಮತ್ತು ಸರ್ಕಾರಿ ಯೋಜನೆಗಳ ಸಹಾಯದಿಂದ ಪುಷ್ಕರ್ ನ ರೈತರು ನೆಲ್ಲಿಕಾಯಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಕೃಷಿಯು ಅಲ್ಪ ಶ್ರಮ, ದೀರ್ಘಾವಧಿಯ ಫಲ ಮತ್ತು ನಿತ್ಯ ಬೇಡಿಕೆಗಳ ಕಾರಣದಿಂದ ಇಂದು ಅನೇಕ ರೈತರ ಆದಾಯದ ನಂಬಿಕೆಯಾಗಿದೆ.
ಕಸ್ಟಮ್ಸ್ ವಶಪಡಿಸಿಕೊಂಡಿದ್ದ 380 ಚೀಲ ಅಡಿಕೆ ಬಿಡುಗಡೆಗೆ ಕೇರಳ ಹೈಕೋರ್ಟ್ ನಿರಾಕರಿಸಿದೆ. ಅಡಿಕೆ…
ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…
2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…
ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…
ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…
ಬಕ್ರೀದ್ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…