ಕೃಷಿಕನಾದವನಿಗೆ ನಷ್ಟವಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹಣ್ಣಿಗೂ ಅದರದೇ ಆದ ಸೀಸನ್ ಇರುತ್ತದೆ. ಮಾವಿನ ಹಣ್ಣು, ಅನಾನಸ್, ದ್ರಾಕ್ಷಿ, ಹೀಗೆ ಪ್ರತಿಯೊಂದು ಹಣ್ಣಿಗೂ ಒಂದು ಕಾಲದಲ್ಲಿ ತುಂಬ ಬೇಡಿಕೆ ಇದ್ದರೂ, ವರ್ಷ ಪೂರ್ತಿ ಬೇಡಿಕೆ ಇರಲು ಸಾಧ್ಯವಿಲ್ಲ.
ಆದರೆ, ನೆಲ್ಲಿಕಾಯಿಗೆ ವರ್ಷಪೂರ್ತಿ ಮಾರುಕಟ್ಟೆಯಲ್ಲು ಬೇಡಿಕೆ ಸೀರವಾಗಿರುತ್ತದೆ. ನೆಲ್ಲಿಕಾಯಿಂದ ಜ್ಯೂಸ್, ಜಾಮ್, ಕ್ಯಾಂಡಿ,ಪೌಡರ್ ಮೊದಲಾದ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಬಹುದು. ಇದರಿಂದ ರೈತರಿಗೆ ಹೆಚ್ಚುವರಿ ಲಾಭ ಸಹ ದೊರೆಯಲು ಸಹಾಯಕಾರಿಯಾಗುತ್ತದೆ. ಈ ನೆಲ್ಲಿಕಾಯಿ ಗಿಡವನ್ನು ರಾಜಸ್ಥಾನದ ಪುಷ್ಕರ್ ಪ್ರದೇಶದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ನೆಲ್ಲಿಕಾಯಿ ಕೃಷಿ ನಡೆಸುತ್ತಿದ್ದಾರೆ. ಈ ಬೆಳೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಲಾಭದಾಯಕ ಬೆಳೆಯಾಗಿ ಹೊರಹೊಮ್ಮಿದೆ. ಇಲ್ಲಿನ ಫಲವತ್ತಾದ ಮಣ್ಣು ಮತ್ತು ಹವಾಮಾನವು ಈ ಕೃಷಿಗೆ ಸೂಕ್ತವಾಗಿರುವುದರಿಂದ ರೈತರು ಸಾಂಪ್ರದಾಯಿಕ ಬೆಳೆಗಳಿಂದ ದೂರಾಗಿ ನೆಲ್ಲಿಕಾಯಿ ತೋಟಗಳನ್ನು ಸ್ಥಾಪಿಸಿದ್ದಾರೆ.
ಇಲ್ಲಿ ಹನಿ ನೀರಾವರಿ, ಆಧುನಿಕ ತಂತ್ರಜ್ಞಾನ ಮತ್ತು ಸರ್ಕಾರಿ ಯೋಜನೆಗಳ ಸಹಾಯದಿಂದ ಪುಷ್ಕರ್ ನ ರೈತರು ನೆಲ್ಲಿಕಾಯಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಕೃಷಿಯು ಅಲ್ಪ ಶ್ರಮ, ದೀರ್ಘಾವಧಿಯ ಫಲ ಮತ್ತು ನಿತ್ಯ ಬೇಡಿಕೆಗಳ ಕಾರಣದಿಂದ ಇಂದು ಅನೇಕ ರೈತರ ಆದಾಯದ ನಂಬಿಕೆಯಾಗಿದೆ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…