Advertisement
MIRROR FOCUS

ಜಗತ್ತಿನಲ್ಲಿ ನೀರಿನ ಸಂಕಷ್ಟ ಯಾಕೆ ಮೌನದಲ್ಲಿದೆ?

Share

ನೀರು ಮತ್ತು ಪರಿಸರ ಸಮಸ್ಯೆಗಳು ನಾಳೆಯಲ್ಲ, ಮುಂದಿನ ಜಾಗತಿಕ ಸಂಕಷ್ಟಗಳಿಗೆ ಕಾರಣವಾಗಲಿವೆ ಎಂದು World Economic Forum ಬಿಡುಗಡೆ ಮಾಡಿದ Global Risks Report 2026 ಎಚ್ಚರಿಸಿದೆ.  ಜಗತ್ತಿನ ಮುಂದಿನ ದಶಕದ ಅಪಾಯಗಳ ಸ್ಪಷ್ಟ ಸೂಚನೆಯನ್ನು ಇದು ಒದಗಿಸುತ್ತದೆ. ಆದರೆ ಈ ವರದಿಯಲ್ಲಿ ಕಾಣಿಸುವ ಅತಿದೊಡ್ಡ ವೈರುಧ್ಯವೇನೆಂದರೆ, ಜಲ ಮತ್ತು ಪರಿಸರ ಸಂಕಷ್ಟಗಳು ಅತಿದೊಡ್ಡ ದೀರ್ಘಕಾಲೀನ ಅಪಾಯಗಳಾಗಿದ್ದರೂ, ತಕ್ಷಣದ ರಾಜಕೀಯ ಚರ್ಚೆಗಳಲ್ಲಿ ಅವು ಹಿನ್ನಲೆಯಾಗಿಯೇ  ಉಳಿದಿವೆ.

ವರದಿ ಪ್ರಕಾರ, ಜಗತ್ತು ಈಗ “Age of Competition” ಎಂಬ ಹೊಸ ಹಂತಕ್ಕೆ ಪ್ರವೇಶಿಸಿದೆ. ಭೌಗೋಳಿಕ ಸಂಘರ್ಷಗಳು, ವ್ಯಾಪಾರ ಯುದ್ಧಗಳು ಮತ್ತು ಆರ್ಥಿಕ ಅಸ್ಥಿರತೆಗಳು ರಾಷ್ಟ್ರಗಳ ತಕ್ಷಣದ ಆದ್ಯತೆಗಳಾಗಿವೆ. ಆದರೆ ಇದೇ ಸಂಘರ್ಷಗಳ ಹಿಂದೆ ನಿಂತಿರುವ ಮೂಲಭೂತ ಕಾರಣಗಳಲ್ಲಿ ಒಂದು — ಸಂಪನ್ಮೂಲಗಳ, ವಿಶೇಷವಾಗಿ ನೀರಿನ ಕೊರತೆ — ಇನ್ನೂ ಗಂಭೀರವಾಗಿ ಚರ್ಚೆಗೆ ಬಂದಿಲ್ಲ.

ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಆಹಾರ ಭದ್ರತೆ ಕುಸಿಯುತ್ತಿದೆ, ಗ್ರಾಮೀಣ ಜೀವನ ಅಸ್ಥಿರಗೊಳ್ಳುತ್ತಿದೆ ಮತ್ತು ವಲಸೆ ಹೆಚ್ಚುತ್ತಿದೆ. ಇದು ಕೇವಲ ಪರಿಸರ ಸಮಸ್ಯೆಯಲ್ಲ; ಇದು ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ಬೀಜ. Global Risks Report ಈ ಅಂಶವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆ, ಆದರೆ ತಕ್ಷಣದ ಅಪಾಯಗಳ ಪಟ್ಟಿಯಲ್ಲಿ ನೀರು ಮತ್ತೆ ಹಿಂದಕ್ಕೆ ಸರಿದಿದೆ.

ಅತಿಯಾದ ಮಳೆ, ಬರ, ಭೂಗರ್ಭ ಜಲ ಕುಸಿತ, ಜೀವವೈವಿಧ್ಯ ನಾಶ — ಇವೆಲ್ಲವೂ 2036ರ ಅಪಾಯಗಳೆಂದು ವರದಿ ಹೇಳುತ್ತದೆ. ಆದರೆ ವಾಸ್ತವದಲ್ಲಿ, ಈ ಅಪಾಯಗಳು ಈಗಲೇ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಆರಂಭವಾಗಿದೆ. ಬೇರೆ ಬೇರೆ ಕಡೆ ಬೇರೆ ಬೇರೆ ಮಾದರಿಯಲ್ಲಿ ಕಂಡುಬರುತ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರೈತರ ಸಂಕಷ್ಟ, ಬೆಳೆ ನಷ್ಟ ಮತ್ತು ಆಹಾರ ಬೆಲೆ ಏರಿಕೆಇದೆಲ್ಲಾ ಪರಿಸರದ ಕಾರಣದಿಂದಲೇ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Global Risks Report 2026 ನಮ್ಮ ಮುಂದೆ ಒಂದು ಪ್ರಶ್ನೆಯನ್ನು ಇಟ್ಟಿದೆ, ಆರ್ಥಿಕ ಬೆಳವಣಿಗೆ ಮತ್ತು ಭೌಗೋಳಿಕ ಶಕ್ತಿಯ ಪೈಪೋಟಿಯಲ್ಲಿ ನಾವು ನೀರು ಮತ್ತು ಪರಿಸರವನ್ನು ಕಡೆಗಣಿಸುತ್ತಿದ್ದೇವೇ?.  ನೀರಿನ ನಿರ್ವಹಣೆ, ಹವಾಮಾನ ಮತ್ತು ಪರಿಸರ ಪುನಶ್ಚೇತನಕ್ಕೆ ರಾಜಕೀಯ ಬದ್ಧತೆ ಇಲ್ಲದೆ ಹೋದರೆ, ಮುಂದಿನ ದಶಕದಲ್ಲಿ ಸಂಘರ್ಷಗಳು ಇನ್ನಷ್ಟು ಗಾಢವಾಗಲಿವೆ ಎಂಬ ಎಚ್ಚರಿಕೆಯನ್ನು ಈ ವರದಿ ನೀಡಿದೆ.

ಭಾರತದಂತಹ ಕೃಷಿ ಪ್ರಧಾನ ದೇಶಕ್ಕೆ ಈ ವರದಿ ಸ್ಪಷ್ಟ ಸಂದೇಶ ನೀಡುತ್ತದೆ. ನೀರು -ಆಹಾರ ಭದ್ರತೆ, ಆಹಾರ ಭದ್ರತೆ-ಸಾಮಾಜಿಕ ಸ್ಥಿರತೆ, ಸಾಮಾಜಿಕ ಸ್ಥಿರತೆ ಇಲ್ಲದೆ ಆರ್ಥಿಕ ಬೆಳವಣಿಗೆ ಅಸಾಧ್ಯ. ಹೀಗಾಗಿ ನೀತಿ ರೂಪಿಸುವವರು ಜಲ ಮತ್ತು ಪರಿಸರ ಸಮಸ್ಯೆಗಳನ್ನು ಪರಿಸರ ಸಚಿವಾಲಯದ ಕಡತಗಳಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಯೋಜನೆಯ ಕೇಂದ್ರಬಿಂದುವಾಗಿಸಬೇಕಾಗಿದೆ.

ಇದನ್ನೂ ಓದಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

4 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

5 hours ago

ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ

ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…

5 hours ago

ಹವಾಮಾನ ವರದಿ | 12-08-2026 | ಕರ್ನಾಟಕದಲ್ಲಿ ಮುಂದುವರಿಯಲಿದೆ ಬಿಡುವಿನ ಮಳೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಬಿಸಿಲು, ಮೋಡ ಮತ್ತು ಬಿಡುವಿನ ಸಾಮಾನ್ಯ ಮಳೆ ಮುಂದುವರಿಯುವ…

5 hours ago

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

18 hours ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

1 day ago