ದೇಶ ಎದುರಿಸುತ್ತಿರುವ ನಿರುದ್ಯೋಗವನ್ನು ಕಡಿಮೆ ಮಾಡಲು ಛತ್ತೀಸ್ಗಢ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿಕೊಂಡಿದೆ. ಇಲ್ಲಿ ಸೆಗಣಿ ಬಳಕೆ ವರ್ಮಿ- ಕಾಂಪೋಸ್ಟ್, ಮಣ್ಣಿನ ಪಾತ್ರೆಗಳು, ಅಗರಬತ್ತಿಗಳ ತಯಾರಿಸಲು ಸೆಗಣಿ ಪ್ರತಿ ಕೆಜಿಗೆ 2 ರೂಗೆ ಖರೀದಿಸಲಾಗುತ್ತದೆ. ಈ ಯೋಜನೆಯಿಂದಾಗಿ ಒಂದೆಡೆ ದನಕರುಗಳು ಮತ್ತು ಸೆಗಣಿ ಸಂಗ್ರಹಿಸುವವರು ಹಣ ಗಳಿಸಿದರೆ ಮತ್ತೊಂದೆಡೆ ಉದ್ಯೋಗ ಸೃಷ್ಟಿಯಾಗಿದೆ.
ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿ, ಇದರ ಅಡಿಯಲ್ಲಿ ಗೋಥಾನ್ ಗಳನ್ನು ಹಗಲಿನಲ್ಲಿ ಜಾನುವಾರುಗಳನ್ನು ತಂದು ಆಹಾರ, ನೀರು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ನಿರ್ಮಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2,80,000 ಜಾನುವಾರು ಹೊಂದಿರುವ ರೈತರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಎರಡು ಲಕ್ಷದಷ್ಟು ರೈತರು ಸೆಗಣಿ ಮಾರಾಟ ಮಾಡಿದ್ದು, 59 ಲಕ್ಷ ಕ್ವಿಂಟಲ್ ಸೆಗಣಿ ಖರೀದಿಗೆ ಕಾರಣವಾಗಿದೆ.
ಸಮಿತಿಗಳು ಖರೀದಿಸಿದ ಸೆಗಣಿಯಿಂದ 10,10,555 ಕ್ವಿಂಟಾಲ್ ವರ್ಮಿ ಕಾಂಪೋಸ್ಟ್ ತಯಾರಿಸಲಾಗಿದ್ದು, 4,31,701 ಕ್ವಿಂಟಾಲ್ ಸೂಪರ್ ಕಾಂಪೋಸ್ಟ್ ತಯಾರಿಸಲಾಗಿದೆ. ಈ ವ್ಯವಹಾರದಿಂದ 48 ಕೋಟಿ ರೂಪಾಯಿ ಆದಾಯವಾಗಿದ್ದರೆ, ವರ್ಮಿ ಕಾಂಪೋಸ್ಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ 29 ಕೋಟಿ ರೂ.ಗಿಂತ ಹೆಚ್ಚು ಲಾಭಾಂಶ ನೀಡಲಾಗಿದೆ. ಇತರ ಸಂಬಂಧಿತ ವ್ಯವಹಾರಗಳು ಸಹ ಲಾಭವನ್ನು ಗಳಿಸಿದೆ. ಮತ್ತು ಅದರೊಂದಿಗೆ ಸಂಬಂಧಿಸಿದ ಜನರಿಗೆ ಲಾಭಾಂಶವನ್ನು ಒದಗಿಸಲಾಗಿದ್ದು, ಇದರಿಂದ ಬಿಡಾಡಿ ದನಗಳಿಂದ ಬೆಳೆ ಹಾನಿಯಾಗದಂತೆ ತಡೆಯುವ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…