ಕೇಂದ್ರ ಸಚಿವ ಸಂಪುಟ ಮಂಗಳವಾರ 2023-24ರ ಸಾಲಿನ ರಾಬಿ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (MSP) ಏರಿಸಿದೆ.
ಗೋಧಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ಗೆ 110 ರೂ. ಏರಿಸಲಾಗಿದೆ. ಅಂದರೆ 2015 ರೂ.ಗಳಿಂದ 2125 ರೂ.ಗೆ ಏರಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಂಎಸ್ಪಿ ಎಂದರೆ ಸರ್ಕಾರವು ರೈತರಿಂದ ಖರೀದಿಸುವ ಧಾನ್ಯಗಳಿಗೆ ನೀಡುವ ದರವಾಗಿದೆ. ಪ್ರಸ್ತುತ ಸರ್ಕಾರ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತದೆ.
ಸಾಸಿವೆಯ ಎಂಎಸ್ಪಿಯಲ್ಲಿ ಕ್ವಿಂಟಾಲ್ಗೆ 400 ರೂ. ಏರಿಸಲಾಗಿದ್ದು, 5,450 ರೂ.ಗೆ ವೃದ್ಧಿಸಲಾಗಿದೆ. ಕೆಂಪು ತೊಗರಿಯ (ಮಸೂರ್) ಎಂಎಸ್ಪಿ ದರದಲ್ಲಿ ಕ್ವಿಂಟಾಲ್ಗೆ 500 ರೂ. ಏರಿಸಲಾಗಿದೆ.
ಬಾರ್ಲಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ 100 ರೂ. ಹೆಚ್ಚಳವಾಗಿದ್ದು, ಕ್ವಿಂಟಾಲ್ಗೆ 1,635 ರೂ.ಗಳಿಂದ 1,735 ರೂ.ಗೆ ಏರಿಕೆಯಾಗಿದೆ. ಕಡಲೆ ಕಾಳಿನ ಎಂಎಸ್ಪಿಯಲ್ಲಿ 105 ರೂ. ಏರಿಕೆಯಾಗಿದ್ದು, ಕ್ವಿಂಟಾಲ್ಗೆ 5,230 ರೂ.ಗಳಿಂದ 5,335 ರೂ.ಗೆ ವೃದ್ಧಿಸಿದೆ.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…
23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…