Advertisement
Opinion

ಹೊಸ ವರ್ಷದ ಶುಭಾಶಯಗಳು | ಅಸೂಯೆ, ಸ್ವಾರ್ಥವನ್ನು ತೊರೆದು ಬದುಕೋಣ…

Share

ಹೊಸ ವರ್ಷದ ಶುಭಾಶಯಗಳು(Happy New Year), 2023 ವರ್ಷ ಮುಗಿದೇ ಹೋಯಿತು…. 2024ರ ವರ್ಷ ಇಂದಿನ ದಿನದಿಂದ ಪ್ರಾರಂಭವಾಯಿತು. ಹೊಸ ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು.‌‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ಯಾವಾಗಲೂ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡ ನಾನು ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸುತ್ತೇನೆ ಹಾಗೂ ಸ್ಥಿರವಾಗಿರುತ್ತೇನೆಂದು ನಿಶ್ಚಯ ಮಾಡಿಕೋ, ಅಸೂಯೆ, ಸ್ವಾರ್ಥವನ್ನು ತೊರೆದು, ನನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರುತ್ತೇನೆಂದು ಮತ್ತು ಸತ್ಯ ನಿಷ್ಠೆಗೆ ಬದ್ಧನಾಗಿರುತ್ತೇನೆಂದು ನಿಶ್ಚಯಿಸು ಆಗ ಜಗತ್ತನ್ನೇ ಅಲ್ಲಾಡಿಸುವ ಶಕ್ತಿಯನ್ನು ಆ ಭಗವಂತನೇ ನಿನಗೆ ಕರುಣಿಸುತ್ತಾನೆ.

ನಿನ್ನ ಮನಸ್ಸಿನಲ್ಲಿ ಅಹಂಕಾರವೇನಾದರೂ ಬಂದರೆ ನಿನ್ನ ಹತ್ತಿರದಲ್ಲಿ ಇರುವ ಸ್ಮಶಾನಕ್ಕೆ ಒಮ್ಮೆಭೇಟಿ ಕೊಡು ಅಲ್ಲಿ ನಿನಗಿಂತ ಶ್ರೀಮಂತ, ಶಕ್ತಿವಂತ, ಸೌಂದರ್ಯವಂತ, ಹಾಗೂ ನಿನಗಿಂತ ಬಲಾಡ್ಯ ದೇಹವನ್ನು ಹೊ०ದಿದಂತಹ ವ್ಯಕ್ತಿ ,6×3,ಅಡಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೆ ಅಥವಾ ಕಟ್ಟಿಗೆಯ ನಡುವೆ ಬೂದಿಯಾಗುತ್ತಿದ್ದರೆ, ಒಂದಲ್ಲ ಒಂದು ದಿನ ನಿನಗೂ ಅದೇ ಸ್ಥಳಕ್ಕೆ ಹೋಗಲಿಕ್ಕೆ ಇದೆ. ಇದನ್ನು ಅರ್ಥಮಾಡಿಕೊಂಡವನ ಮನಸ್ಸಿನಲ್ಲಿ ಒಂದು ಅಣುವಿನಷ್ಟು ಅಹಂಕಾರ ಬರಲಾರದು.

ಚಿಂತಿಸುವವನಿಗೆ ದೃಷ್ಟಾಂತವಿದೆ. ನಮಗೆ ಸಿಹಿಯ ರುಚಿ ಅರಿವಾಗಬೇಕೆಂದರೆ ಮೊದಲು ಕಹಿಯ ಅನುಭವ ಇರಬೇಕು, ಕಷ್ಟದ ಬೆಲೆ ತಿಳಿದಿದ್ದರೆ ಸುಖದ ಅನುಭವ ಪ್ರತಿಫಲ ಏನು ಎಂದು ತಿಳಿಯುತ್ತದೆ.  ಅರ್ಥ ಮಾಡಿಕೊಂಡರೆ ಜೀವನ ತುಂಬ ಸುಂದರ, ಸಹಾಯ ಪಡೆದವರನ್ನು ಎಂದಿಗೂ ಮರೆಯಬಾರದು,
ಸಹಾಯ ಮಾಡಿದರೆ ಅದನ್ನು ಪದೇ ಪದೇ ನೆನಪಿಸಬಾರದು. ನಮ್ಮ ಶಕ್ತಿ ಹೆಚ್ಚಾಗುವುದು ನಮ್ಮ ಗೆಲುವುಗಳಿಂದಲ್ಲ. ಗೆಲುವಿಗಾಗಿ ನಾವುನಡೆಸುವ ಹೋರಾಟಗಳಿಂದ. ಆದುದರಿಂದ ಎಂತಹ ಪರಿಸ್ಥಿಯಲ್ಲೂ ಶರಣಾಗತರಾಗದಿರುವುದೇ ನಿಜವಾದ ಶಕ್ತಿ. ಆ ಅನುಭವ ನಮನ್ನು ಯಶಸ್ಸಿನಿಂದ ಜಗತ್ತಿಗೆ ಪರಿಚಯಿಸುತ್ತದೆ.

ಹಿಂದಿನ ವಷ೯ದ ಕೊನೆಯ ದಿನ ಮುಗಿದು ಹೊಸ ವರ್ಷ ಬಂದೇ ಬಿಟ್ಟಿತು, ನಮ್ಮ ಕಣ್ಣ್ ಗಳಲ್ಲಿ ನೀರು ತಂದವರಿಗೆ ಹಾಗೂ ಮುಖದಲ್ಲಿ ನಗು ತಂದವರಿಗೆ, ಇಬ್ಬರಿಗೂ ಧನ್ಯವಾದಗಳು ಹೇಳುವ ಮನಸ್ಸು ನಮ್ಮದಾಗಬೇಕು. 2024ರ ಹೊಸ ವರ್ಷ ದೊಡ್ಡ ಯಶಸ್ಸಿನ ವರ್ಷ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

4 hours ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

20 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

1 day ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago