Advertisement
Opinion

ಹೊಸ ವರ್ಷದ ಶುಭಾಶಯಗಳು | ಅಸೂಯೆ, ಸ್ವಾರ್ಥವನ್ನು ತೊರೆದು ಬದುಕೋಣ…

Share

ಹೊಸ ವರ್ಷದ ಶುಭಾಶಯಗಳು(Happy New Year), 2023 ವರ್ಷ ಮುಗಿದೇ ಹೋಯಿತು…. 2024ರ ವರ್ಷ ಇಂದಿನ ದಿನದಿಂದ ಪ್ರಾರಂಭವಾಯಿತು. ಹೊಸ ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು.‌‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ಯಾವಾಗಲೂ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡ ನಾನು ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸುತ್ತೇನೆ ಹಾಗೂ ಸ್ಥಿರವಾಗಿರುತ್ತೇನೆಂದು ನಿಶ್ಚಯ ಮಾಡಿಕೋ, ಅಸೂಯೆ, ಸ್ವಾರ್ಥವನ್ನು ತೊರೆದು, ನನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರುತ್ತೇನೆಂದು ಮತ್ತು ಸತ್ಯ ನಿಷ್ಠೆಗೆ ಬದ್ಧನಾಗಿರುತ್ತೇನೆಂದು ನಿಶ್ಚಯಿಸು ಆಗ ಜಗತ್ತನ್ನೇ ಅಲ್ಲಾಡಿಸುವ ಶಕ್ತಿಯನ್ನು ಆ ಭಗವಂತನೇ ನಿನಗೆ ಕರುಣಿಸುತ್ತಾನೆ.

ನಿನ್ನ ಮನಸ್ಸಿನಲ್ಲಿ ಅಹಂಕಾರವೇನಾದರೂ ಬಂದರೆ ನಿನ್ನ ಹತ್ತಿರದಲ್ಲಿ ಇರುವ ಸ್ಮಶಾನಕ್ಕೆ ಒಮ್ಮೆಭೇಟಿ ಕೊಡು ಅಲ್ಲಿ ನಿನಗಿಂತ ಶ್ರೀಮಂತ, ಶಕ್ತಿವಂತ, ಸೌಂದರ್ಯವಂತ, ಹಾಗೂ ನಿನಗಿಂತ ಬಲಾಡ್ಯ ದೇಹವನ್ನು ಹೊ०ದಿದಂತಹ ವ್ಯಕ್ತಿ ,6×3,ಅಡಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೆ ಅಥವಾ ಕಟ್ಟಿಗೆಯ ನಡುವೆ ಬೂದಿಯಾಗುತ್ತಿದ್ದರೆ, ಒಂದಲ್ಲ ಒಂದು ದಿನ ನಿನಗೂ ಅದೇ ಸ್ಥಳಕ್ಕೆ ಹೋಗಲಿಕ್ಕೆ ಇದೆ. ಇದನ್ನು ಅರ್ಥಮಾಡಿಕೊಂಡವನ ಮನಸ್ಸಿನಲ್ಲಿ ಒಂದು ಅಣುವಿನಷ್ಟು ಅಹಂಕಾರ ಬರಲಾರದು.

Advertisement

ಚಿಂತಿಸುವವನಿಗೆ ದೃಷ್ಟಾಂತವಿದೆ. ನಮಗೆ ಸಿಹಿಯ ರುಚಿ ಅರಿವಾಗಬೇಕೆಂದರೆ ಮೊದಲು ಕಹಿಯ ಅನುಭವ ಇರಬೇಕು, ಕಷ್ಟದ ಬೆಲೆ ತಿಳಿದಿದ್ದರೆ ಸುಖದ ಅನುಭವ ಪ್ರತಿಫಲ ಏನು ಎಂದು ತಿಳಿಯುತ್ತದೆ.  ಅರ್ಥ ಮಾಡಿಕೊಂಡರೆ ಜೀವನ ತುಂಬ ಸುಂದರ, ಸಹಾಯ ಪಡೆದವರನ್ನು ಎಂದಿಗೂ ಮರೆಯಬಾರದು,
ಸಹಾಯ ಮಾಡಿದರೆ ಅದನ್ನು ಪದೇ ಪದೇ ನೆನಪಿಸಬಾರದು. ನಮ್ಮ ಶಕ್ತಿ ಹೆಚ್ಚಾಗುವುದು ನಮ್ಮ ಗೆಲುವುಗಳಿಂದಲ್ಲ. ಗೆಲುವಿಗಾಗಿ ನಾವುನಡೆಸುವ ಹೋರಾಟಗಳಿಂದ. ಆದುದರಿಂದ ಎಂತಹ ಪರಿಸ್ಥಿಯಲ್ಲೂ ಶರಣಾಗತರಾಗದಿರುವುದೇ ನಿಜವಾದ ಶಕ್ತಿ. ಆ ಅನುಭವ ನಮನ್ನು ಯಶಸ್ಸಿನಿಂದ ಜಗತ್ತಿಗೆ ಪರಿಚಯಿಸುತ್ತದೆ.

ಹಿಂದಿನ ವಷ೯ದ ಕೊನೆಯ ದಿನ ಮುಗಿದು ಹೊಸ ವರ್ಷ ಬಂದೇ ಬಿಟ್ಟಿತು, ನಮ್ಮ ಕಣ್ಣ್ ಗಳಲ್ಲಿ ನೀರು ತಂದವರಿಗೆ ಹಾಗೂ ಮುಖದಲ್ಲಿ ನಗು ತಂದವರಿಗೆ, ಇಬ್ಬರಿಗೂ ಧನ್ಯವಾದಗಳು ಹೇಳುವ ಮನಸ್ಸು ನಮ್ಮದಾಗಬೇಕು. 2024ರ ಹೊಸ ವರ್ಷ ದೊಡ್ಡ ಯಶಸ್ಸಿನ ವರ್ಷ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ

ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…

9 hours ago

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…

10 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ತಡೆ – ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರ್ತಕರ ಮನವಿ

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ಹಿನ್ನೆಲೆಯಲ್ಲಿ ಶಿರಸಿಯ ವರ್ತಕರು ಸಂಸದ ವಿಶ್ವೇಶ್ವರ ಹೆಗಡೆ…

14 hours ago

ಹವಾಮಾನ ವರದಿ | 01-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸ್ವಲ್ಪ ಇಳಿಕೆ – ಜುಲೈ 4ರಿಂದ ಮತ್ತೆ ಚುರುಕು!

ಜುಲೈ 2 ಮತ್ತು 3ರಂದು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗುವ…

17 hours ago

ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ

ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್‌ ಜಾಮ್‌ಗೆ ವಿಶೇಷ ಸಂಚಾರ ನಿರ್ವಹಣಾ…

21 hours ago

ಜುಲೈನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸಾಧ್ಯತೆ : ಐಎಂಡಿ ಎಚ್ಚರಿಕೆ

ಜುಲೈ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ…

21 hours ago