Advertisement
ಸುದ್ದಿಗಳು

#Jackfruit | ಹಲಸಿನ ಹಣ್ಣಿನ ಕಾಲ ಇದು | ಸಿಕ್ಕರೆ ತಿನ್ನದೇ ಬಿಡಬೇಡಿ | ಇದರಲ್ಲಿದೆ ಆರೋಗ್ಯದ ಗುಟ್ಟು |

Share

ಹಲಸಿನ ಹಣ‍್ಣು  ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ #jackfruit ಎಂದು ಕರೆಯಲಾಗುತ್ತದೆ. ಹಲಸು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. 

Advertisement
Advertisement

ಇದರ ಕಾಯಿ, ಹಣ್ಣು, ಬೀಜಗಳಲ್ಲಿ ವಿವಿಧ ಖಾದ್ಯ ಮಾಡಿ ತಿನ್ನುತ್ತೇವೆ. ಪಲ್ಯ, ಗೊಜ್ಜು, ಸಾಂಬಾರು,ಕಾಯಿರಸ, ಮಜ್ಜಿಗೆ ಹುಳಿ, ಬೋಂಡಾ, ಗೋಬಿ, ಹೋಳಿಗೆ, ಜಾಮ್, ಸುಟ್ಟೆವು, ಕಡುಬು, ಹಪ್ಪಳ, ಚಕ್ಕುಲಿ,…… ಒಂದೇ ಎರಡೇ. ಸಾಮಾನ್ಯವಾಗಿ ಮೇ ಜೂನ್ ಜುಲೈ ಹೆಚ್ಚಾಗಿ ಕಾಣಸಿಗುವ ಅಪರೂಪಕ್ಕೆ ಬೇರೆ ಸಮಯದಲ್ಲೂ ಸಿಗುವ ಹಣ್ಣು. ಇದರ ಹೊರತಾಗಿ ಹಲಸು ಔಷಧೀಯ ಗುಣವನ್ನು ಹೊಂದಿದೆ. ಇದರ ಎಲೆ, ಬೇರು, ಚಕ್ಕೆ, ಬೀಜ, ಹಣ್ಣು ಇವುಗಳು ಔಷಧಿಯಾಗಿ ಬಳಕೆಯಾಗುತ್ತದೆ.

Advertisement

1) ಬೆಲ್ಲದೊಂದಿಗೆ ಹಣ್ಣನ್ನು ಸೇವಿಸುವುದರಿಂದ ಅಲ್ಸರ್ ಗುಣವಾಗುತ್ತದೆ.
2) ಆಗಾಗ ಬೆಲ್ಲದ ಪಾಕದಲ್ಲಿ ಹಾಕಿದ ಹಣ್ಣನ್ನು ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ.
3) ಹಣ್ಣಿನ ಜಾಮ್ ಮಾಡಿ ಪ್ರತಿದಿನ ತಿನ್ನುವುದರಿಂದ ಕಣ್ಣಿನ ಶಕ್ತಿ ಹೆಚ್ಚಿಸುತ್ತದೆ ಇರುಳುಗಣ್ಣು ಗುಣವಾಗುತ್ತದೆ.
4) ಬೇಸಿಗೆಯಲ್ಲಿ ಯಥೇಚ್ಛವಾಗಿ ಹಣ್ಣು ತಿನ್ನುವುದರಿಂದ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
5) ಹಲಸಿನ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಮುಪ್ಪು ಮುಂದೂಡುತ್ತದೆ.
6) ಎಲೆಯನ್ನು ಕಷಾಯ ಮಾಡಿ ಸೇವಿಸುವುದರಿಂದ ಪಾರ್ಶ್ವ ವಾಯು ಬೇಗನೆ ಗುಣವಾಗುತ್ತದೆ.
7) ನೀಟಾಗಿ ಜೋಡಿಸಿಟ್ಟ ಎಲೆಯ ಕೊಟ್ಟೆಯಲ್ಲಿ ಕಡುಬು ಮಾಡಿ ವರ್ಷಕ್ಕೊಮ್ಮೆಯಾದರೂ ಸೇವಿಸಬೇಕು ಎಂದು ಹಿರಿಯರು ಹೇಳುತ್ತಾರೆ.
8) ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಮತ್ತು ಭೇದಿ ಎರಡು ಗುಣವಾಗುತ್ತದೆ.
9) ಎಲೆಯ ಕಷಾಯವನ್ನು ಗಂಡುಷ ಅಂದರೆ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಗುಣ ವಾಗುತ್ತದೆ.
10) ಹಲಸಿನ ಬೀಜ ದಿನನಿತ್ಯ ಸೇವನೆಯಿಂದ ವೀರ್ಯ ವೃದ್ಧಿ ಆಗುತ್ತದೆ.
11) ಹಲಸಿನ ಮರದಲ್ಲಿ ಇರುವ ಬಂಜಳಿಕೆ ಹೆಣ್ಣು ಮಕ್ಕಳ ಬಂಜೆತನವನ್ನು ನಿವಾರಿಸಲು ತುಂಬಾ ಉಪಯುಕ್ತ ಮೆಡಿಸಿನ್ ತಯಾರಿಸುವ ವಿಧಾನ ದಲ್ಲಿ ಒಂದು.
12) ಹಲಸು ಒಂದು ಘನ ಆಹಾರ ತಿಂದಿದ್ದು ಹೆಚ್ಚಾದರೆ ಅಜೀರ್ಣ. ಹಣ್ಣು ತಿಂದು ಕೊನೆಯ ತೊಳೆಯಲಿ ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ತಿನ್ನುವುದರಿಂದ ಈ ಅಜೀರ್ಣ ನಿವಾರಣೆ ಆಗುತ್ತದೆ.
12) ಹೊಟ್ಟೆ ಹಸಿದಾಗ ಹಲಸು ತಿನ್ನುವುದು ಒಳ್ಳೆಯದು.

(ಬರಹ ಕೃಪೆ : ಸುಮನಾ ಮಳಲಗದ್ದೆ)

Advertisement

(ಸಾಮಾಜಿಕ ಜಾಲತಾಣದಿಂದ )

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |

ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…

6 mins ago

ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…

25 mins ago

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

17 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

18 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

18 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

18 hours ago