ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಕುನೂರು ಬಳಿ ಪತನವಾಗಿತ್ತು.ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಹೀಗೆ ವಿವರಿಸುತ್ತಾರೆ……
ಮಧ್ಯಾಹ್ನ ಸುಮಾರು 12 ರ ಹೊತ್ತಿಗೆ ದುರ್ಘಟನೆ ನಡೆದಿತ್ತು. ಒಂದು ಭಯಾನಕ ಶಬ್ದ ಕೇಳಿತು. ಅದು ತುಂಬ ಹತ್ತಿರದಲ್ಲೇ ಕೇಳಿಸಿತು. ಹೀಗಾಗಿ ಕುತೂಹಲ ಮತ್ತು ಭಯದಿಂದ ಹೊರಬಂದು ನೋಡಿದೆ. ಆಗ ಹೆಲಿಕಾಪ್ಟರ್ವೊಂದು ಮರಕ್ಕೆ ಅಪ್ಪಳಿಸಿತ್ತು. ಅಲ್ಲಿಂದ ಬೆಂಕಿಯ ಉಂಡೆ ಏಳುತ್ತಿತ್ತು. ನೋಡುತ್ತಿದ್ದಂತೆ ಮತ್ತೆ ಆ ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸಿತು. ಅಷ್ಟರಲ್ಲಿ ಮೂವರು ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದರು. ಅದನ್ನು ನೋಡಿ ನಾನು ಸುತ್ತಲಿನ ಜನರನ್ನು ಕೂಗಿ ಕರೆದೆ. ಬಳಿಕ ಅಗ್ನಿಶಾಮಕ ದಳ, ತುರ್ತು ಸೇವಾ ಘಟಕಗಳಿಗೆ ಕರೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಇನ್ನೊಬ್ಬರು ಪ್ರತ್ಯಕ್ಷದರ್ಶಿ ಮಂಜಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದಂತೆ, ಕುನೂರಿನ ಕಟ್ಟೇರಿ ಹಿಲ್ಸ್ನಲ್ಲಿ ಈ ಘಟನೆ ನಡೆದಿದೆ. ಇದು ಊಟಿಯಿಂದ 25 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 11.20ಕ್ಕೆ ಘಟನೆ ಸಂಭವಿಸಿದೆ. ಚಳಿಗಾಲ ಆರಂಭವಾಗಿರುವುದರಿಂದ ಮಂಜು ಕವಿದಿತ್ತು ಎಂದು ಹೇಳುತ್ತಾರೆ. ಹೀಗಾಗಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಸದ್ದು ಕೇಳಿತು ಎನ್ನುತ್ತಾರೆ.
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …