Advertisement
The Rural Mirror ಕಾಳಜಿ

ಸುಳ್ಯದಲ್ಲೊಂದು ಗುಡಿಸಲು ಮನೆ | ಪುತ್ತಿಲ ಪರಿವಾರದ ಸುಳ್ಯ ಘಟಕದಿಂದ ಮನೆ ಕನಸಿಗೆ ನೆರವು | ಸಹೃದಯಿಗಳು ನೆರವು ನೀಡಿ |

Share

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರದಲ್ಲಿ ತೀರಾ ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ಪುತ್ತಿಲ ಪರಿವಾರದ ಸುಳ್ಯ ಘಟಕವು ಈಗ ನೆರವಿಗೆ ಇಳಿದಿದೆ. ಇವರ ಜೊತೆ ಸಹೃದಯಿಗಳು ಕೈಜೋಡಿಸಬಹುದು.  ಈ ಮಹಿಳೆ ಸುಮತಿ ಅವರ ಪರಿಸ್ಥಿತಿ ತೀರಾ ಸಂಕಷ್ಟದಿಂದ ಕೂಡಿದೆ.

ಮಹಿಳೆಯ ಪತಿ ಗಣೇಶ ಅಸೌಖ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿವೆ. ಮೂವರು ಮಕ್ಕಳೊಂದಿಗೆ ಮಹಿಳೆಯ ವಾಸ. ಆದರೆ ಮೂರು ಮಕ್ಕಳಲ್ಲಿ ಒಬ್ಬಾತನಿಗೆ ದೃಷ್ಟಿ ದೋಷವಿದ್ದು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ  ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕೂಲಿ ಮಾಡಿ ಬಂದ ಹಣ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ. ಹಾಗಿದ್ದರೂ ಪುಟ್ಟ ಮನೆಯೊಂದನ್ನು ಕಟ್ಟುವ ಹಂಬಲ ಸುಮತಿ ಅವರದಾಗಿತ್ತು. ಪುತ್ತಿಲ ಪರಿವಾರದ ಸುಳ್ಯ ಘಟಕದ ಸಹೃದಯಿಗಳು ಸುಮತಿ ಅವರ ಮನೆಯ ಪರಿಸ್ಥಿತಿ ಗಮನಿಸಿ ಮನೆ ಕಟ್ಟುವ ಕನಸಿಗೆ ಆಸರೆಯಾದರು. ಇದರ ಜೊತೆಗೆ ಸ್ಥಳೀಯಾಡಳಿತ , ಪ್ರತಿನಿಧಿಗಳನ್ನೂ ಮಾತನಾಡಿಸಿದರು. ಈಗ ಮಹಿಳೆ ಸುಮತಿ ಅವರ  ಪುಟ್ಟ ಮನೆ ಕಟ್ಟುವ ಕನಸಿಗೆ ಕಲ್ಲು, ಸಿಮೆಂಟು, ಹೊಯಿಗೆ, ಕಬ್ಬಿಣ…, ಹೀಗೆ  ಸಹಾಯ ಮಾಡಿದರೆ ಮನೆ ಸುಲಭದಲ್ಲಿ ನಿರ್ಮಾಣವಾದೀತು. ಅದಕ್ಕಾಗಿ ನೆರವು ಅಗತ್ಯ ಇದೆ.

The Sullia Unit of Puttila Parivar has now come to help a woman living in a very small hut in Shantinagar, Kasaba village of Sullia taluk. Friends can join hands with them. Sumathi’s situation is very difficult.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

16 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago