Advertisement
The Rural Mirror ಕಾಳಜಿ

ಸುಳ್ಯದಲ್ಲೊಂದು ಗುಡಿಸಲು ಮನೆ | ಪುತ್ತಿಲ ಪರಿವಾರದ ಸುಳ್ಯ ಘಟಕದಿಂದ ಮನೆ ಕನಸಿಗೆ ನೆರವು | ಸಹೃದಯಿಗಳು ನೆರವು ನೀಡಿ |

Share

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರದಲ್ಲಿ ತೀರಾ ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ಪುತ್ತಿಲ ಪರಿವಾರದ ಸುಳ್ಯ ಘಟಕವು ಈಗ ನೆರವಿಗೆ ಇಳಿದಿದೆ. ಇವರ ಜೊತೆ ಸಹೃದಯಿಗಳು ಕೈಜೋಡಿಸಬಹುದು.  ಈ ಮಹಿಳೆ ಸುಮತಿ ಅವರ ಪರಿಸ್ಥಿತಿ ತೀರಾ ಸಂಕಷ್ಟದಿಂದ ಕೂಡಿದೆ.

ಮಹಿಳೆಯ ಪತಿ ಗಣೇಶ ಅಸೌಖ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿವೆ. ಮೂವರು ಮಕ್ಕಳೊಂದಿಗೆ ಮಹಿಳೆಯ ವಾಸ. ಆದರೆ ಮೂರು ಮಕ್ಕಳಲ್ಲಿ ಒಬ್ಬಾತನಿಗೆ ದೃಷ್ಟಿ ದೋಷವಿದ್ದು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ  ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕೂಲಿ ಮಾಡಿ ಬಂದ ಹಣ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ. ಹಾಗಿದ್ದರೂ ಪುಟ್ಟ ಮನೆಯೊಂದನ್ನು ಕಟ್ಟುವ ಹಂಬಲ ಸುಮತಿ ಅವರದಾಗಿತ್ತು. ಪುತ್ತಿಲ ಪರಿವಾರದ ಸುಳ್ಯ ಘಟಕದ ಸಹೃದಯಿಗಳು ಸುಮತಿ ಅವರ ಮನೆಯ ಪರಿಸ್ಥಿತಿ ಗಮನಿಸಿ ಮನೆ ಕಟ್ಟುವ ಕನಸಿಗೆ ಆಸರೆಯಾದರು. ಇದರ ಜೊತೆಗೆ ಸ್ಥಳೀಯಾಡಳಿತ , ಪ್ರತಿನಿಧಿಗಳನ್ನೂ ಮಾತನಾಡಿಸಿದರು. ಈಗ ಮಹಿಳೆ ಸುಮತಿ ಅವರ  ಪುಟ್ಟ ಮನೆ ಕಟ್ಟುವ ಕನಸಿಗೆ ಕಲ್ಲು, ಸಿಮೆಂಟು, ಹೊಯಿಗೆ, ಕಬ್ಬಿಣ…, ಹೀಗೆ  ಸಹಾಯ ಮಾಡಿದರೆ ಮನೆ ಸುಲಭದಲ್ಲಿ ನಿರ್ಮಾಣವಾದೀತು. ಅದಕ್ಕಾಗಿ ನೆರವು ಅಗತ್ಯ ಇದೆ.

The Sullia Unit of Puttila Parivar has now come to help a woman living in a very small hut in Shantinagar, Kasaba village of Sullia taluk. Friends can join hands with them. Sumathi’s situation is very difficult.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

23 minutes ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

1 hour ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

4 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

5 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

8 hours ago

ಮುಂಬೈನಲ್ಲಿ ಭಾರೀ ಮಳೆ ಅಬ್ಬರ – ರೆಡ್ ಅಲರ್ಟ್ ಮುಂದುವರಿಕೆ, ಜನಜೀವನ ಅಸ್ತವ್ಯಸ್ತ

ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…

17 hours ago