Advertisement
Opinion

#BloodPressure | ಪ್ರಾಣಕ್ಕೆ ಕುತ್ತು ತರಬಲ್ಲ ಅಧಿಕ ರಕ್ತದೊತ್ತಡ | ಆಯುರ್ವೇದ ಚಿಕಿತ್ಸೆ ಉತ್ತಮ |

Share

ನಿಮ್ಮ ಹೃದಯವು ರಕ್ತವನ್ನು ಪಂಪು ಮಾಡಲು ಹೆಚ್ಚು ಶ್ರಮಿಸಬೇಕಾದರೆ ಮತ್ತು ನಿಮ್ಮ ಅಪಧಮನಿಗಳು ಕಿರಿದಾಗುತ್ತಿದ್ದರೆ, ರಕ್ತದೊತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡ 120/ 80 ಇರುತ್ತದೆ. ರಕ್ತದೊತ್ತಡ ಇದು ಎರಡು ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಅಗ್ರ ಸಂಖ್ಯೆ ನಿಮ್ಮ ಸಂಕೋಚನದ ರಕ್ತದೊತ್ತಡವಾಗಿದೆ ನಿಮ್ಮ ಹೃದಯ ಬಡಿತ ಮತ್ತು ದೇಹದಾದ್ಯಂತ ರಕ್ತವನ್ನು ತಳ್ಳಿದಾಗ ಆಗುವ ಹೆಚ್ಚಿನ ಒತ್ತಡ ಕೆಳಭಾಗವು ನಿಮ್ಮ ಡಯಸ್ಟೋಲಿಕ್ ಬಡಿತಗಳ ನಡುವೆ ನಿಮ್ಮ ಹೃದಯ ಸಡಿಲಗೊಂಡಾಗ ಆಗುವ ಕಡಿಮೆ ಒತ್ತಡ.

Advertisement
Advertisement
Advertisement
Advertisement

ಅಧಿಕ ರಕ್ತದೊತ್ತಡಕ್ಕೆ ಕಾರಣಗಳು:
* ಅಧಿಕ ತೂಕ
* ಮಾನಸಿಕ ಒತ್ತಡ
* ನಿದ್ರಾಹೀನತೆ
* ಅತಿಯಾದ ಕೊಬ್ಬಿನಂಶ ಅತಿಯಾದ ಉಪ್ಪು ಹಾಗೂ ನಾರಿನ ಅಂಶವಿಲ್ಲದ ಆಹಾರ ಸೇವನೆ
* ಮಧ್ಯಪಾನ / ಧೂಮಪಾನ
* ನೋವು ನಿವಾರಕ ಔಷಧಿಗಳ ದೀರ್ಘಾವಧಿ ಪ್ರಯೋಗ
* ಚಟುವಟಿಕೆ ಇಲ್ಲದ ಅನಿಮಿಯತ ಜೀವನ ಶೈಲಿ
* ಅನುವಂಶಿಕ
* ವಯಸ್ಸಿನ ಅಂಶ
* ಟೈಪ್ 2ಮಧುಮೇಹ,ಹೃದಯ ಸಂಬಂಧಿ ಹಾಗೂ ಮೂತ್ರಪಿಂಡ ಕಾಯಿಲೆಗಳು ನರ ಮತ್ತು ಮಾನಸ ರೋಗ ಕಾಯಿಲೆಗಳು

Advertisement

ಲಕ್ಷಣಗಳು :-
*ತಲೆನೋವು
* ಮಂದದ್ರಷ್ಟಿ
* ತಲೆ ತಿರುಗುವಿಕೆ
* ಉಸಿರಾಟ ತೊಂದರೆ
* ಎದೆ ಮತ್ತು ತಲೆಯ ಭಾಗದಲ್ಲಿ ಬಡಿತದ ಭಾವನೆ
* ಅತಿಯಾದ ಆಯಾಸ ಹಾಗೂ ವಾಕರಿಕೆ

ರಕ್ತದ ಒತ್ತಡ ಪತ್ತೆ ಹಚ್ಚದೆ ಹೋದಲ್ಲಿ ಹೃದಯಘಾತ ಪಾರ್ಶ್ವ ವಾಯು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  ಆರೋಗ್ಯಕರ ಆಹಾರ ವ್ಯಾಯಾಮ ಮತ್ತು ಉತ್ತಮ ಒತ್ತಡ ನಿರ್ವಹಣೆಯ ಜೀವನ ಶೈಲಿ ಬದಲಾವಣೆಗಳು ಅಧಿಕ ರಕ್ತದ ಒತ್ತಡವನ್ನು ನಿಭಾಯಿಸಲು ಉತ್ತಮ ಮಾರ್ಗಗಳಾಗಿವೆ ಅಧಿಕ ರಕ್ತದೊತ್ತಡವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಔಷಧಿ ಮತ್ತು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿಯಂತ್ರಿಸಬಹುದು ಇದಕ್ಕೆ ಸಾಮಾನ್ಯವಾಗಿ ನಿಯಮಿತ ವೈದ್ಯಕೀಯ ಆರೈಕೆ ಅಗತ್ಯ.

Advertisement

ಆಯುರ್ವೇದ ಔಷಧಿ ಯಾದ ಸರ್ಪಗಂಧವು ರಕ್ತದೊತ್ತಡಕ್ಕೆ ಉತ್ತಮ ಚಿಕಿತ್ಸೆಯಾಗಿದೆ ಪಂಚಕರ್ಮ ಚಿಕಿತ್ಸೆ ಯಲ್ಲಿ ಒಂದಾದ ಶಿರೋದಾರವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ ದಿನನಿತ್ಯವೂ ಯೋಗಾಸನ ವ್ಯಾಯಾಮ ಇವುಗಳಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಬರಹ :
ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು, ಮಂಗಳೂರು, 94481 68053
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

13 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago