Advertisement
Opinion

ಉತ್ತಮ ಆರೋಗ್ಯಕ್ಕಾಗಿ ಅಶ್ವಗಂಧ | ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ…!

Share

ಅಶ್ವಗಂಧ (Ashwaganda) ಎಂಬುದು ಸಂಸ್ಕೃತ ಪದ. ಅಶ್ವ ಎಂದರೆ ಕುದುರೆ ಮತ್ತು ಗಂಧ ಎಂದರೆ ವಾಸನೆ. ಅಶ್ವಗಂಧದ ಬೇರುಗಳು ಕುದುರೆಯಂತ ವಾಸನೆಯನ್ನು ಹೊಂದಿದೆ ಮತ್ತು ಇದು ಕುದುರೆಯಂತೆ ಶಕ್ತಿಯನ್ನು ನೀಡುವುದರಿಂದ ಇದನ್ನು ಅಶ್ವಗಂಧ ಎನ್ನಲಾಗುತ್ತದೆ. ಆಯುರ್ವೇದದ ಪ್ರಕಾರ ಇದನ್ನು ರಸಾಯನ ಅಥವಾ ಟಾನಿಕ್ ಆಗಿ ಉಪಯೋಗಿಸಲಾಗುತ್ತದೆ.

ಅಶ್ವಗಂಧದ ಉಪಯೋಗ:

  • ಅಶ್ವಗಂಧವು ಖನಿಜಗಳು ಕ್ಯಾಲ್ಸಿಯಂ#Calcium ಕಬ್ಬಿಣ#Iron ಮತ್ತು ವಿಟಮಿನ್#Vitamin C ಸಮೃದ್ದವಾಗಿ ಹೊಂದಿದೆ.
  • ರೋಗನಿರೋಧಕ ಹಾಗೂ ಶಕ್ತಿ ವರ್ಧಕವಾಗಿದೆ
  • ಸ್ನಾಯುಗಳ ಬೆಳವಣಿಗೆಗೆ ಸಹಾಯಕಾರಿ
  • ಪ್ರೊಟೀನ್ ಹೇರಳವಾಗಿರುವುದರಿಂದ ಕೂದಲ ಬೆಳವಣಿಗೆಗೆ ಬಹಳ ಪ್ರಯೋಜನ ಕಾರಿಯಾಗಿದೆ
  • ಪುರುಷರಲ್ಲಿ ಲೈಂಗಿಕ ಕಾರ್ಯ ಕ್ಷಮತೆ ಹೆಚ್ಚಿಸುವುದು. ಹಾಗೂ ಆರೋಗ್ಯವಂತ ವೀರ್ಯಣು ಉತ್ಪಾದನೆಯಲ್ಲಿ ಸಹಾಯಕಾರಿ.
  • ಮಾನಸಿಕ ಒತ್ತಡ ಹಾಗೂ ಆತಂಕ ನಿರ್ವಹಣೆ.
  • ಸಂಧಿವಾತಕ್ಕೆ -ಅಶ್ವಗಂಧ… ಮೊಣಕಾಲು ಕೀಲುನೋವಿನ ರೋಗಗಳಿಗೆ ಅಶ್ವಗಂಧದ ಬೇರು ಮತ್ತು ಎಲೆಗಳಿಂದ ತಯಾರಿಸಿದ ಔಷಧಗಳ ಸೇವನೆಯಿಂದ ಕೀಲು ನೋವು ಹಾಗೂ ಉರಿಯೂತ ಕಡಿಮೆ ಆಗುವುದು.
  • ಹೃದಯದ ಆರೋಗ್ಯಕ್ಕೆ… ಅಶ್ವಗಂಧವು ಕೊಲೆಸ್ಟ್ರೋಲ್ ಹಾಗೂ ರಕ್ತದೊತ್ತಡವನ್ನು ಸಮಾತೋಲನದಲ್ಲಿ ಇಡಲು ಸಹಾಯಕಾರಿಯಾಗಿದ್ದು ಹೃದಯವನ್ನು ಕಾಪಾಡುವುದು
  • ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ.
  • ಚರ್ಮದ ಆರೋಗ್ಯದಲ್ಲಿ, ಥೈರಾಯಿಡ್ ಸಮಸ್ಯೆ ಹೀಗೆ ಹಲವು ಕಾಯಿಲೆಗಳಲ್ಲಿ ಅಶ್ವಗಂಧ ಬಹಳ ಪ್ರಯೋಜನ ಕಾರಿಯಾಗಿದೆ. ಅಶ್ವಗಂಧ ಸರ್ವರೋಗಹರ ಎನ್ನಲಾಗುತ್ತದೆ.

ಅನೇಕ ಕಾಯಿಲೆಗಳಲ್ಲಿ ಮನೆ ಮದ್ದಾಗಿ ಉಪಯೋಗಿಸಲಾಗುವ ಈ ಅಶ್ವಗಂಧವನ್ನು ಆಯುರ್ವೇದದ ಅನೇಕ ಔಷಧಿಗಳಲ್ಲಿ ಗಿಡಮೂಲಿಕೆಯಾಗಿ ಬಳಸಲಾಗುತ್ತದೆ. ನಿದ್ರಾಜನಕಗಳು, ಥೈರಾಯ್ಡ್ ಹಾರ್ಮೋನ್ ರಿಪ್ಲೇಸ್ಮೆಂಟ್ ತೆರಪಿ ಆತಂಕ ಮತ್ತು ಖಿನ್ನತೆಗೆ ನೀಡುವ ಔಷಧಿಗಳನ್ನು ತೆಗದು ಕೊಳ್ಳುವರಲ್ಲಿ ಅಶ್ವಗಂಧವನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು. ಕೆಲವೊಂದು ಸಂಧರ್ಭದಲ್ಲಿ ತಲೆ ತಿರುಗುವಿಕೆ, ತಲೆನೋವು, ಕರುಳಿನ ಸಮಸ್ಯೆ ಹೀಗೆ ಕೆಲವೊಂದು ಅಡ್ಡ ಪರಿಣಾಮಗಳು ವರದಿಯಾಗಿವೆ. ಅಶ್ವಗಂಧವನ್ನು ಚೂರ್ಣ ಲೇಹ್ಯ capsules, tablets ರೀತಿಯಲ್ಲಿ ಸಾಮಾನ್ಯಗಿ ಬಳಸಲಾಗುತ್ತದೆ. ಅಶ್ವಗಂಧವನ್ನು ತೆಗೆದುಕೊಳ್ಳುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದು ಸರಿಯಾದ ರೀತಿಯಲ್ಲಿ ಉಪಯೋಗಿಸುವುದು ಉತ್ತಮ.

ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್‌ , ಮಂಗಳೂರು, 94481 68053
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

10 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

11 hours ago

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

2 days ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago