Advertisement
MIRROR FOCUS

ವಿಪರೀತ ಬೀಳುತ್ತಿರುವ ಎಳೆ ಅಡಿಕೆ | ಮುಂದಿನ ವರ್ಷದ ಅಡಿಕೆ ಇಳುವರಿ ಮೇಲೆ ಹೊಡೆತ.. | ತಾಪಮಾನ ಕಾರಣ..?

Share

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಡಿಕೆ ತೋಟದಲ್ಲಿ ವಿಪರೀತವಾಗಿ ಎಳೆ ಅಡಿಕೆ ಬೀಳುತ್ತಿದೆ. ಮಳೆ ಬಿದ್ದು ಕೆಲವು ದಿನಗಳ ನಂತರ ಎಳೆ ಅಡಿಕೆ ಬೀಳಲು ಆರಂಭವಾಗಿದೆ. ಈಗಲೂ ಹಲವು ತೋಟಗಳಲ್ಲಿ ಎಳೆ ಅಡಿಕೆ ಬೀಳುತ್ತಲಿದೆ. ಹೀಗಾಗಿ ಮುಂದಿನ ಫಸಲಿನ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬಾರಿ ದಕ್ಷಿಣ ಕನ್ನಡ ಸೇರಿದಂತೆ ಕಾಸರಗೋಡು ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿಗೆ ಹೊಡೆತ ಬೀಳುತ್ತಿದೆ. ಹವಾಮಾನ ವೈಪರೀತ್ಯ ಆರಂಭದಲ್ಲಿ ಸಂಕಷ್ಟ ತಂದಿತ್ತು. ನೀರಿನ ಕೊರತೆ ಕಾಡಿತ್ತು. ಅಡಿಕೆ ಬೆಳೆಯು ಹೆಚ್ಚು ನೀರನ್ನು ಬಯಸುವ ಬೆಳೆಯಾಗಿದೆ. ಈ ಬಾರಿ ಮಳೆಯ ಕೊರತೆ ಅದರ ಬೆನ್ನಿಗೇ ತಾಪಮಾನ ಏರಿಕೆಯ ಕಾರಣದಿಂದ ನೀರಿನ ಕೊರತೆಯೂ ಹಲವು ಕಡೆ ಕಾಡಿತ್ತು. ಕೊಳವೆಬಾವಿ ಕೊರೆದರೂ ಪಂಪ್‌ ಅಳವಡಿಕೆ ಇತ್ಯಾದಿ ವಿಳಂಬದ ಕಾರಣದಿಂದ ತೋಟಕ್ಕೆ ಬೇಕಾದಷ್ಟು ನೀರುಣಿಸಲು ಕಷ್ಟವಾಗಿತ್ತು. ಸರಿಯಾಗಿ ನೀರುಣಿಸಿದರೂ ವಾತಾವರಣದ ಉಷ್ಣತೆ 40 ಡಿಗ್ರಿಗಿಂತ ಅಧಿಕವಾಗಿ ಎಳೆ ಅಡಿಕೆಯ ಮೇಲೆ ಪರಿಣಾಮ ಬೀರಿತ್ತು.

ಮೇ ಅಂತ್ಯದವರೆಗೂ ಸರಿಯಾಗಿ ಮಳೆಯಾಗಿಲ್ಲ, ಮೇ ಅಂತ್ಯದ ಬಳಿಕ ಮಳೆಯಾಗಿ ವಾತಾವರಣದ ಉಷ್ಣತೆ 30 ಡಿಗ್ರಿ ತಲಪುತ್ತಲೇ ಎಳೆ ಅಡಿಕೆ ಬೀಳಲು ಆರಂಭವಾಗಿತ್ತು. ನಂತರ ಸ್ವಲ್ಪ ದಿನಗಳ ಕಾಲ ಅಡಿಕೆ ಬೀಳುವುದು ಕಡಿಮೆಯಾದಂತೆಯೇ ಮಳೆಯ ಪ್ರಮಾಣ ಕಡಿಮೆಯಾಗಿ ವಾತಾವರನದ ಉಷ್ಣತೆ ಮತ್ತೆ ಏರಿಕೆಯಾಗಿ ಮತ್ತೆ ಮಳೆಯಾದಾಗ ತಂಪಾಗಿತ್ತು. ಹೀಗಾಗಿ ಮತ್ತೆ ಅಡಿಕೆ ಬೀಳುವುದಕ್ಕೆ ಆರಂಭವಾಗಿತ್ತು. ಹಲವು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಳೆ ಅಡಿಕೆ ಬೀಳುತ್ತಿದೆ. ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇದು ಮುಂದಿನ ಬಾರಿಗೆ ಫಸಲಿನ ಕೊರತೆಗೂ ಕಾರಣವಾಗಬಹುದು.

ಈ ಪ್ರಮಾಣದಲ್ಲಿ ಇದುವರೆಗೂ ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.ಕೆಲವು ಕಡೆಗಳಲ್ಲಿ ಪೆಂತಿ ಕೀಟದ ಕಾರಣದಿಂದಲೂ ಅಡಿಕೆ ಬೀಳುತ್ತಿತ್ತು. ಇದು ಔಷಧಿ ಸಿಂಪಡಣೆಯ ಬಳಿಕ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈ ಬಾರಿ ಔಷಧಿ ಸಿಂಪಡಣೆಯ ಬಳಿಕವೂ ಎಳೆ ಅಡಿಕೆ ಬೀಳುತ್ತಿರುವುದು ಹವಾಮಾನದ ಬದಲಾವಣೆಯೇ ಕಾರಣ ಎಂದು ಅಭಿಪ್ರಾಯ ಪಡಲಾಗಿದೆ.

There is a notable issue of excessive nut fall in Arecanut plantations in various areas of Dakshina Kannada district. Following the onset of rains, a significant number of nuts are falling from the trees. This ongoing trend in many plantations is causing concerns regarding its potential impact on the upcoming crop.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

1 hour ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

3 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

9 hours ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

9 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

17 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

17 hours ago