ವಿಶೇಷ ವರದಿಗಳು

#Agriculture | ಅಂತರಾಷ್ಟ್ರೀಯ ಮಟ್ಟದಲ್ಲೂ ಆರಂಭವಾಗಿದೆ ಆಹಾರ ಭದ್ರತೆಯ ಬಿಸಿ | ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಗಮನಹರಿಸಿದ ಆಫ್ರಿಕಾ ಗ್ರೀನ್ ರೆವಲ್ಯೂಷನ್ ಫೋರಮ್ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಪಂಚದಲ್ಲಿ ಆಹಾರ ಭದ್ರತೆಯ ಬಗ್ಗೆ ಹೆಚ್ಚಿನ ಗಮನಹರಿಸುವ ಕೆಲಸ ಆರಂಭವಾಗಿದೆ. ಕೃಷಿ(Agriculture) ಕ್ಷೇತ್ರದ ಬೆಳವಣಿಗೆ, ಕೃಷಿ ಜಿಡಿಪಿ ಹೆಚ್ಚಳದ ಕಡೆಗೆ ಎಲ್ಲಾ ಒಕ್ಕೂಟಗಳೂ ಕೆಲಸ ಆರಂಭ ಮಾಡಿದೆ. ಇದೀಗ  ಆಫ್ರಿಕಾದ ಕೃಷಿ ವಲಯದ ನೀತಿ ನಿರೂಪಕರು ಆಫ್ರಿಕಾ ಖಂಡದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು, ಪ್ರಾಯೋಗಿಕ ಕ್ರಮಗಳನ್ನು ಜಾರಿಗೆ ತರಲು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲುನಿರ್ಧರಿಸಿದ್ದಾರೆ.

Advertisement

ಆಫ್ರಿಕಾದ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ನಡೆದ ಐದು ದಿನಗಳ ಆಫ್ರಿಕಾ ಗ್ರೀನ್ ರೆವಲ್ಯೂಷನ್ ಫೋರಮ್  ಶೃಂಗಸಭೆಯ ಸಮಾರೋಪದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆಹಾರ ಭದ್ರತೆಯನ್ನು ನಿರ್ಮಿಸಲು ಮತ್ತು ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಲು ಮತ್ತು ಆಫ್ರಿಕಾದಲ್ಲಿ ಸುಸ್ಥಿರ, ಲಾಭದಾಯಕ ಮತ್ತು ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಚಾಲನೆ ಮಾಡಲು ಅಗತ್ಯ ಕ್ರಮಗಳ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಕೃಷಿಗೆ ಹೆಚ್ಚಿನ ಸಂಪನ್ಮೂಲಗಳನ್ನು ನಿರ್ದೇಶಿಸುವ ತಮ್ಮ ಸಂಕಲ್ಪವನ್ನು ಅಲ್ಲಿನ ಕಾಯಕರು ಪ್ರಕಟಿಸಿದ್ದಾರೆ.

ಶೃಂಗಸಭೆಯಲ್ಲಿ  ರುವಾಂಡಾದ ಕೃಷಿ ಸಚಿವ ಜೆರಾಲ್ಡಿನ್ ಮುಕೇಶಿಮಾನಾ ಅವರು ಮಾತನಾಡುತ್ತಾ, ಆಹಾರ ಭದ್ರತೆಯ ವಿಷಯದಲ್ಲಿ ಇನ್ನು ಮುಂದೆ ನಾವು ಮಾತನಾಡುವುದಿಲ್ಲ, ಕಾರ್ಯಗತಗೊಳಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಕಡಿಮೆ ಪದಗಳನ್ನು ಬಳಸುತ್ತೇವೆ ಮತ್ತು ಹೆಚ್ಚಿನ ಕ್ರಿಯೆಗಳನ್ನು ಮಾಡುತ್ತೇವೆ ಎನ್ನುವುದನ್ನು ಹೇಳಿದ್ದರು.

ಶೃಂಗ ಸಭೆಯಲ್ಲಿ ಕೃಷಿ ಅಭಿವೃದ್ಧಿಗೆ ಪ್ರಮುಖವಾಗಿ ರೈತರು ಕೈಗೆಟುಕುವ, ಉತ್ಪಾದಕ, ಹವಾಮಾನ/ಕೀಟ-ನಿರೋಧಕ ಬೀಜಗಳ ತಯಾರಿ ಅಗತ್ಯವಿದೆ ಎನ್ನುವುದನ್ನು ಚರ್ಚಿಸಲಾಯಿತು. ಅದರ ಜೊತೆಗೆ ಮಹಿಳಾ ನೇತೃತ್ವದ ಎಸ್‌ಎಂಇಗಳಿಗೆ 25 ಪ್ರತಿಶತದಷ್ಟು ಹಣವನ್ನು ನೀಡಬೇಕು. ಇದು ಮಹಿಳೆಯರು ಮತ್ತು ಯುವಕರಿಗೆ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎನ್ನುವುದು ಕೂಡಾ ಗಂಭೀರ ಚರ್ಚೆಯ ವಿಷಯವಾಯಿತು. ಕೃಷಿಯಲ್ಲಿ ಸುಧಾರಿತ ತಳಿಗಳು, ಸುಧಾರಿತ ಯಂತ್ರಗಳ ಬಳಕೆ, ಹೊಸ ಮಾದರಿಯ ಕೃಷಿಯನ್ನೂ ಪರಿಚಯ ಮಾಡಬೇಕು. ಒಟ್ಟಾರೆ ದೇಶದ ಆಹಾರ ಭದ್ರತೆಗೆ ದೇಶದಲ್ಲಿಯೇ ಸುದೃಢವಾಗಿ ಕೃಷಿ ಬೆಳವಣಿಗೆಯೇ ಪರಿಹಾರ ಎನ್ನುವುದನ್ನು ಈ ಶೃಂಗಸಭೆ ಕಂಡುಕೊಂಡಿತು.

 

Advertisement
Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ. 

2 hours ago

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…

6 hours ago

ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ

ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…

10 hours ago

ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |

ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್‌ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…

16 hours ago

ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…

17 hours ago