Advertisement
The Rural Mirror ಕಾಳಜಿ

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

Share
ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ ಪ್ರದೇಶದಲ್ಲಿ ವಾರದ ಎಲ್ಲಾ ದಿನವೂ ವಿವಿಧ ಕ್ಲಾಸ್‌ಗಳು. ಚಿತ್ರಕಲೆ, ಸಂಗೀತ, ಕರಾಟೆ, ಚೆಸ್‌, ಮ್ಯೂಸಿಕ್‌, ಯಕ್ಷಗಾನ… ಹೀಗೇ. ಕೆಲವು ಮಕ್ಕಳಂತೂ ಎಲ್ಲದರಲ್ಲೂ ಇರುತ್ತಾರೆ. ಯಾವುದರಲ್ಲೂ ವೇದಿಕೆ ಸಿಗುವುದಿಲ್ಲ..!.  ಕಾರಣ ಬೇರೆ ಬೇರೆ. ಗ್ರಾಮೀಣ ಭಾಗದ ಮಕ್ಕಳು ಕೂಡಾ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವಾರದ ಎಲ್ಲಾ ಕ್ಷೇತ್ರದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅಂತಹ ಅವಕಾಶಗಳು ಇಲ್ಲ. ಇಲ್ಲಿ ಪ್ರತಿಭೆಗಳಿದ್ದರೂ ವೇದಿಕೆಯೇ ಸಿಗುವುದಿಲ್ಲ. ಅವಕಾಶಗಳು ಇಲ್ಲ.
ಇಂದು ಎಲ್ಲಾ ಮಕ್ಕಳಿಗೂ ವೇದಿಕೆ ನೀಡುವುದಕ್ಕೆ ಕಷ್ಟ. ನಗರ ಪ್ರದೇಶದಲ್ಲಿ ಸಾಕಷ್ಟು ಅವಕಾಶಗಳು ಇರುತ್ತವೆ.ಒಂದಲ್ಲ ಒಂದು ಅವಕಾಶ. ಅದೇ ಗ್ರಾಮೀಣ ಭಾಗದಲ್ಲಿ ಅದು ಸಾಧ್ಯವಿಲ್ಲ, ಅದು ಪ್ರಾಕ್ಟಿಕಲ್‌ ಕೂಡಾ ಅಲ್ಲ. ಇಂದು ವಿವಿಧ ಮಾಧ್ಯಮಗಳು ಇವೆ, ಸೋಶಿಯಲ್‌ ಮೀಡಿಯಾ ಇದೆ. ಇದ್ದರೂ ಎಲ್ಲರಿಗೂ ಈ ವೇದಿಕೆಯಲ್ಲೂ ತೊಡಗಿಸಿಕೊಂಡು ಮಕ್ಕಳಿಗೆ ವೇದಿಕೆ ನೀಡುವುದು, ಜಗತ್ತಿನ ಮುಂದೆ ತೆರೆದಿಡುವ, Exposure ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.
ಯಾವತ್ತೂ ಚಿತ್ರಕಲೆ, ಬರಹ ಸೇರಿದಂತೆ ಸೃಜನಾತ್ಮಕ ಚಟುವಟಿಕೆ ಮಕ್ಕಳನ್ನು ಇಂದಿನ ಆಧುನಿಕವಾದ ಸೆಳೆತಗಳಿಂದ ದೂರವಿಡುವುದಕ್ಕೆ ಸಹಕಾರಿ ಎಂಬುದು ಈಗಾಗಲೇ ತಿಳಿದಿದೆ. ಅದರ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೂ ಕಾರಣವಾಗುತ್ತದೆ. ಇಂತಹದೊಂದು ವಾತಾವರಣ ಭವಿಷ್ಯದಲ್ಲಿ ನಿರ್ಮಾಣ ಆಗಲೇಬೇಕಾದ ಅನಿವಾರ್ಯತೆ ಇದೆ. ಏಕೆ ಈ ನಿರೀಕ್ಷೆ ಎಂದು ಇಂದಿನ ಪೋಷಕರಿಗೆ ಕೇಳಿದರೆ ಅವರಲ್ಲಿರುವ ಆತಂಕ ಅರಿವಾಗುತ್ತದೆ.
ಇದಕ್ಕಾಗಿ ಮಕ್ಕಳಿಗೆ ಒಂದು ಪುಟ್ಟ ವೇದಿಕೆ ನೀಡುವುದು, ಈ ಮೂಲಕ ಅವರ ಆಸಕ್ತಿಗೆ ಬೆಳಕು ನೀಡುವ ಪ್ರಯತ್ನ ನಮ್ಮ ದ ರೂರಲ್‌ ಮಿರರ್.ಕಾಂ ಮೂಲಕ ಮಾಡಲು ಉತ್ಸಾಹಿತರಾಗಿದ್ದೇವೆ. ಅಂದರೆ ಸದ್ಯ ಚಿತ್ರಕಲೆ ಹಾಗೂ ಬರಹವನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದೇವೆ. ಯಾವುದೇ ಚಿತ್ರ ಆಗಿರಲಿ, ಚಿತ್ರ ಹೇಗೇ ಇರಲಿ, ಬರಹ ಯಾವುದೇ ಇರಲಿ, ಹೇಗೇ ಇರಲಿ. ಮಗುವಿನ ಕಲ್ಪನೆಯ ಚಿತ್ರ, ಬರಹವೇ ಇರಲಿ. ಅದರ ಯೋಚನೆ ಬೇಡ. ಆಸಕ್ತಿ ಮೂಡಿಸುವುದು ಮೊದಲ ಕೆಲಸ, ಒಂದಷ್ಟು ಜನರಿಗೆ ಇದೇನು ಅಂತ ಅನಿಸಬಹುದು, ಬೇಗನೆ Exposure ನೀಡಿದರೆ ಕಷ್ಟ ಎನ್ನುವ ಭಾವನೆಯೂ ಇರುತ್ತದೆ. ಆದರೆ ಮಗುವಿಗೆ ಆಸಕ್ತಿ ಬೆಳೆಯುವುದಕ್ಕೆ ಬೆನ್ನು ತಟ್ಟಬೇಕು, ಚೆನ್ನಾಗಿದೆ… ಸೂಪರ್‌ ಎಂದು ಹೇಳಬೇಕು, ಒಂಚೂರು ಹೀಗಾಗಬೇಕು ಎನ್ನಬೇಕು,ಆಸಕ್ತಿ ಬೆಳೆಯುತ್ತದೆ. ಚಿತ್ರ ಪೇಪರಲ್ಲಿ ಬರುತ್ತದೆ ಎನ್ನುವ ಆಸಕ್ತಿ ಮುಂದೆ ಕುತೂಹಲವಾಗಿ ಬೆಳೆದು ಒಂದು ಕಲೆ ಕರಗತವಾಗಬಹುದು. ಸಮಾಜಕ್ಕೆ ಒಬ್ಬ ಕಲಾವಿದನ ಕೊಡುಗೆ, ಆತಂಕದ ವಾತಾವರಣದ ನಡುವೆ ಉತ್ತಮ ಚಿಂತನೆಯ ವ್ಯಕ್ತಿಯೊಬ್ಬ ಬೆಳೆಯುವಂತಾಗುತ್ತದೆ. ಹೀಗಾಗಿ ಸೀಮಿತ ಶಕ್ತಿಯ, ಸೀಮಿತ ವ್ಯಾಪ್ತಿಯ ಪುಟ್ಟ ಪ್ರಯತ್ನ ಇದು. ಗೆಲ್ಲಲೇ ಬೇಕು ಅಂತೇನೂ ಇಲ್ಲ. ಅಥವಾ ಇದುವೇ ಬೇರೆಯವರಿಗೂ ಸ್ಫೂರ್ತಿಯಾಗಲೂ ಬಹುದು. ಆದರೆ ದ್ವೇಷದ, ಕಾಲೆಳೆಯುವ ಸಮಾಜದ ನಡುವೆ ಮೇಲೆತ್ತುವ, ಪ್ರೀತಿಸುವ, ಬೆಳಕು ನೀಡುವ, ಹೆಜ್ಜೆಯೊಂದನ್ನು ಇರಿಸಿದ್ದೇವೆ… ಬೆಂಬಲಿಸಿ.. ಬೇರೆಯವರಿಗೂ ಹೇಳಿ… ಇನ್ನೊಬ್ಬರೂ ಬೆಳೆಯಲಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

5 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

22 hours ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

1 day ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

1 day ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

1 day ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago