Advertisement
MIRROR FOCUS

#Bharat | ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿರುವ ಭಾರತ | 50 ವರ್ಷದಲ್ಲಿ ಆಗೋದನ್ನು ಆರೇ ವರ್ಷದಲ್ಲಿ ಸಾಧಿಸಿದ ಭಾರತ | ವಿಶ್ವಬ್ಯಾಂಕ್‌ನಿಂದ ಶ್ಲಾಘನೆ |

Share

ಭಾರತ #Bharat (India) ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂಗಿಂತಲೂ ಭಾರತ ಹೆಚ್ಚಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತದ ಡಿಜಿಟಿಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಥವಾ ಸಾರ್ವಜನಿಕ ಡಿಜಿಟಲ್ ಸೌಕರ್ಯ ವ್ಯವಸ್ಥೆ ಬಗ್ಗೆ ವಿಶ್ವಬ್ಯಾಂಕ್ ಪ್ರಶಂಸೆ ವ್ಯಕ್ತಪಡಿಸಿದೆ. ಜಿ20 ಸಭೆಗಾಗಿ ಸಿದ್ಧಪಡಿಸಿದ ದಾಖಲೆಯೊಂದರಲ್ಲಿ ವಿಶ್ವಬ್ಯಾಂಕ್ World Bank, ಭಾರತದಲ್ಲಿ ಡಿಪಿಐಗಳ ಪಾತ್ರದ ಬಗ್ಗೆ ಪ್ರಸ್ತಾಪಿಸುತ್ತಾ ಕಳೆದ 6 ವರ್ಷದಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿದೆ.

ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ವಿಚಾರದಲ್ಲಿ ಐದು ದಶಕದಲ್ಲಿ ಆಗುವಂಥದ್ದನ್ನು ಭಾರತ ಕೇವಲ 6 ವರ್ಷದಲ್ಲಿ ಸಾಧಿಸಿದೆ ಎಂದು ಹೇಳಿದೆ. ಇನ್ನು, ಡಿಪಿಐನಲ್ಲಿ ಪ್ರಮುಖ ಭಾಗ ಎನಿಸಿರುವ ಜನ್ ಧನ್ ಯೋಜನೆ, ಆಧಾರ್ ಮತ್ತು ಮೊಬೈಲ್ ನಂಬರ್​ಗಳ ಸಂಯೋಜನೆಯ ಪಾತ್ರವನ್ನು ವಿಶ್ವಬ್ಯಾಂಕ್ ಗುರುತಿಸಿದೆ. ಹಣಕಾಸು ಒಳಗೊಳ್ಳುವಿಕೆಯ #FinancialInclusion ಪ್ರಗತಿಗೆ ಈ ಮೂರು ಅಂಶಗಳು ಬಹಳ ಮುಖ್ಯ ಎನಿಸಿವೆ. ಹಣಕಾಸು ಒಳಗೊಳ್ಳುವಿಕೆ ದರ 2008ರಲ್ಲಿ ಶೇ. 25ರಷ್ಟು ಇದ್ದದ್ದು ಕಳೆದ 6 ವರ್ಷದಲ್ಲಿ ಶೇ. 80ಕ್ಕೆ ಏರಿದೆ. ಇಷ್ಟ ಸಾಧಿಸಲು ಬೇಕಾಗಿದ್ದ ಅವಧಿ 47 ವರ್ಷಗಳಷ್ಟು ಕಡಿಮೆ ಆಗಿದೆ. ಇದಕ್ಕೆ ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಪ್ರಗತಿ ಕಾರಣ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಜಿ20 G20 ಗ್ರೋಬಲ್ ಪಾರ್ಟ್ನರ್​ಶಿಪ್ ಫಾರ್ ಫೈನಾನ್ಷಿಯಲ್ ಇನ್​ಕ್ಲೂಶನ್ ಎಂಬ ದಾಖಲೆಯಲ್ಲಿ ವಿಶ್ವಬ್ಯಾಂಕ್ ಹಲವು ಸಂಗತಿಗಳನ್ನು ಪ್ರಸ್ತಾಪಿಸಿ, ಭಾರತದ ಸಾಧನೆಯನ್ನು ಕೊಂಡಾಡಿದೆ. ‘ಕಳೆದ ದಶಕದಲ್ಲಿ ಡಿಪಿಐ ವ್ಯವಸ್ಥೆಯನ್ನು ಬಳಸಿ ವಿಶ್ವದ ಅತಿದೊಡ್ಡ ಡಿಜಿಟಲ್ ಗವರ್ನ್ಮೆಂಟ್ ಟು ಪರ್ಸನ್ (ಜಿ2ಪಿ) ಆರ್ಕಿಟೆಕ್ಚರ್ ಅನ್ನು ನಿರ್ಮಿಸಿದೆ. 53 ಕೇಂದ್ರ ಸಚಿವಾಲಯಗಳ 312 ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ 361 ಬಿಲಿಯನ್ ಡಾಲರ್​ನಷ್ಟು ಹಣವನ್ನು ವರ್ಗಾಯಿಸಲು ಇದು ಸಾಧ್ಯವಾಗಿಸಿದೆ. 2022ರ ಮಾರ್ಚ್​ವರೆಗಿನ ಅಂಕಿ ಅಂಶ ನೋಡಿದಾಗ ಈ ವ್ಯವಸ್ಥೆಯಿಂದಾಗಿ 33 ಬಿಲಿಯನ್ ಡಾಲರ್​ಷ್ಟು ಹಣದ ಉಳಿತಾಯವಾಗಿದೆ. ಇಷ್ಟು ಹಣವು ಜಿಡಿಪಿಯ ಶೇ. 1.14ರಷ್ಟಾಗುತ್ತದೆ’ ಎಂದು ವಿಶ್ವಬ್ಯಾಂಕ್ ತನ್ನ ಜಿ20 ದಾಖಲೆಯಲ್ಲಿ ಬರೆದಿದೆ.

ಈ ಬಾರಿಯ ಜಿ20 ಸಭೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಈ ವರ್ಷಾದ್ಯಂತ ವಿವಿಧೆಡೆ ಪೂರಕ ಸಭೆಗಳು ನಡೆದಿದ್ದು, ಅಂತಿಮ ಶೃಂಗಸಭೆ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ವಿಶ್ವದ 19 ಅತಿದೊಡ್ಡ ಆರ್ಥಿಕತೆಯ ದೇಶಗಳು, ಐರೋಪ್ಯ ಒಕ್ಕೂಟ ಹಾಗೂ ಆಹ್ವಾನಿ ಅತಿಥಿ ದೇಶಗಳ ನಾಯಕರು, ಹಾಗೂ 12 ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಈ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

16 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago