Advertisement
ಸುದ್ದಿಗಳು

ಹಳಸಿದ ಆಹಾರ ಕೊಟ್ರಿ ಜೋಕೆ – ಈ ಸಾಧನ ಕಂಡು ಹಿಡಿಯುತ್ತೆ ಆಹಾರ ಫ್ರೆಶ್ ಇದಿಯಾ ಇಲ್ವಾ ಅಂತ : ಭಾರತೀಯ ವಿಜ್ಞಾನಿಗಳ ಸಾಧನೆ

Share

ಹೋಟೆಲ್ ನವರು ಇನ್ನು ಮುಂದೆ ಹಳಸಿದ ಆಹಾರ ನಿಮ್ಮ ಗ್ರಾಹಕರಿಗೆ ನೀಡಿದ್ರಿ ನಿಮ್ಮ ನಸೀಬು ಕೆಟ್ಟಂಗೆ. ಇಲ್ಲೊಂದು ಸಾಧನ ನೀವು ಕೊಟ್ಟ ಆಹಾರ ಕೆಟ್ಟಿದ್ಯಾ..? ಇಲ್ಲಾ ಫ್ರೆಶ್ ಇದಿಯಾ ಅಂತ ಕಂಡು ಹಿಡಿಯುತ್ತೆ. ಅಮೇರಿಕಾದಲ್ಲಿ ಭಾರತೀಯ ಸಂಶೋಧಕರೊಬ್ಬರು ಸಣ್ಣ ಹಾಗೂ ಕಡಿಮೆ ಖರ್ಚಿನ ಅಸಿಡಿಟಿ ಸೆನ್ಸರ್ ನ್ನು ಅಭಿವೃದ್ಧಿಪಡಿಸಿದ್ದು, ಇದು ಆಹಾರ ಹಳಸಿದಾಗ ಅದರ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.

ಇದು ಹೊಟೇಲ್ ಹೋದಾಗಲು ನಮಗೆ ಸಹಾಯ ಾಗಬಹುದು. ಆದರೆ ಇದರ ುಪಯೋಗ ುನ್ನತಮಟ್ಟದ್ದಾಗಿದೆ. ಕೇವಲ 2 ಎಂಎಂ ಗಳಷ್ಟು ಉದ್ದ, 10 ಮಿಲಿಮೀಟರ್ ಅಗಲವಿರುವ ಫ್ಲೆಕ್ಸಿಬಲ್ ಪಿಹೆಚ್ ಸೆನ್ಸರ್ plastic wrapping ಸೇರಿದಂತೆ ಆಹಾರ ಪ್ಯಾಕಿಂಗ್ ವಿಧಾನಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಪಿಹೆಚ್ ಮಟ್ಟವನ್ನು ಅಳೆಯುವುದಕ್ಕೆ ಅಥವಾ ಆಹಾರ ಎಷ್ಟು ಪ್ರಮಾಣದಲ್ಲಿದೆ? ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಾಗಿ ದೊಡ್ಡ ಮೀಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಯಾವುದು ಪ್ಯಾಕೇಜ್ ಗೆ ಸೂಕ್ತವಲ್ಲ ಎಂಬುದನ್ನು ನಿರ್ಧರಿಸಲಾಗುತ್ತದೆ.

ನಾವು ಅಭಿವೃದ್ಧಿಪಡಿಸಿರುವ ಪಿಹೆಚ್ ಸೆನ್ಸರ್ ಗಳು ಸಣ್ಣ ನಿಸ್ತಂತು ರೇಡಿಯೋ-ಫ್ರೀಕ್ವೆನ್ಸಿ ಗುರುತಿನ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಇದು ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಒಳಗೆ ಏನಿದೆ ಎಂಬುದನ್ನು ಪತ್ತೆ ಮಾಡಲು ಬಳಸುವ ವಿಧಾನವನ್ನು ಹೋಲುತ್ತದೆ ಎಂದು ಸಾಧನವನ್ನು ಅಭಿವೃದ್ಧಿಪಡಿಸಿರುವ ಟೆಕ್ಸಾಸ್ ನಲ್ಲಿರುವ ಪಿಹೆಚ್ ಡಿ ವಿದ್ಯಾರ್ಥಿ ಖೆಂಗ್ಡುಲಿಯು ಚವಾಂಗ್ ಹೇಳಿದ್ದಾರೆ.

ಶಿಪ್ಪಿಂಗ್ ಲಾಜಿಸ್ಟಿಕ್ಸ್ ಕೇಂದ್ರಗಳು, ಬಂದರುಗಳು, ಗೇಟ್‌ಗಳು ಅಥವಾ ಸೂಪರ್‌ಮಾರ್ಕೆಟ್‌ಗಳ ಪ್ರವೇಶದ್ವಾರಗಳು ಫುಡ್ ಪ್ಯಾಕೇಜ್ ನಮ್ಮ ಸಾಧನದ ಮೂಲಕ ಚೆಕ್ ಪಾಯಿಂಟ್ ನ್ನು ಹಾದುಹೋದಾಗ ಸ್ಕ್ಯಾನ್ ಮಾಡಿ ಆ ಡೇಟಾವನ್ನು ಅವುಗಳ ಪಿಹೆಚ್ ಮಟ್ಟವನ್ನು ತಿಳಿಯುವುದಕ್ಕೆ ಸರ್ವರ್ ಗಳಿಗೆ ಕಳಿಸಲಾಗುತ್ತದೆ ಎಂದು ಚವಾಂಗ್ ಹೇಳಿದ್ದಾರೆ.

ಈ ರೀತಿಯ ಸಂರಚನೆ ನಿರಂತರ pH ಮಟ್ಟವನ್ನು ತಿಳಿಯುವುದಕ್ಕೆ ಅವಕಾಶ ನೀಡುತ್ತದೆ ಮತ್ತು ತೋಟಗಳಿಂದ ಗ್ರಾಹಕರ ಮನೆಗಳವರೆಗೆ ತಾಜಾತನದ ಮಟ್ಟವನ್ನು ನಿಖರವಾಗಿ ಪತ್ತೆ ಮಾಡುತ್ತದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಸುಮಾರು 1.3 ಶತಕೋಟಿ ಮೆಟ್ರಿಕ್ ಟನ್ ಆಹಾರವು ಪ್ರತಿ ವರ್ಷ ವ್ಯರ್ಥವಾಗುತ್ತದೆ. ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ನಾಗಾಲ್ಯಾಂಡ್ ಮೂಲದವರಾದ ಚವಾಂಗ್ ಅವರು ವೈಯಕ್ತಿಕ ಆಸಕ್ತಿ ವಹಿಸಿ ಈ ಸಾಧನ ಅಭಿವೃದ್ಧಿಪಡಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (IEEE) ಬಿಗ್ ಐಡಿಯಾಸ್ ಸ್ಪರ್ಧೆಯಲ್ಲಿ 2022 IEEE ಸಂವೇದಕಗಳ ಸಮ್ಮೇಳನದಲ್ಲಿ ಚಾವಾಂಗ್ ಅವರನ್ನು ಈ  ಆವಿಷ್ಕಾರಕ್ಕಾಗಿ ಗೌರವಿಸಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಗೆ ಹೊಸ ದಿಕ್ಕು – ICAR ಟಾಸ್ಕ್ ಫೋರ್ಸ್ ಘೋಷಣೆ – ರೈತರ ಆದಾಯ ಹೆಚ್ಚಳಕ್ಕೆ ಪ್ಲಾನ್

ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…

6 hours ago

ಮಲೆನಾಡು ಅಡಿಕೆ ತೋಟಗಳಲ್ಲಿ ಕ್ಯಾಲ್ಸಿಯಂ-ಮೆಗ್ನೀಷಿಯಂ ಕೊರತೆ

ಮಲೆನಾಡಿನ ಅಡಿಕೆ ತೋಟ ಮಣ್ಣಿನಲ್ಲಿ ಕ್ಯಾಲ್ಸಿಯಂ-ಮೆಗ್ನೀಷಿಯಂ ಕೊರತೆ ಪತ್ತೆ. ತೀರ್ಥಹಳ್ಳಿ ಪ್ರದೇಶದಲ್ಲಿ ಪೋಷಕಾಂಶ…

6 hours ago

ಕೊಬ್ಬರಿ ಮಾರುಕಟ್ಟೆ ಕುಸಿತ…! ರೈತರಿಗೆ ಮತ್ತೆ ಸಂಕಷ್ಟ

ಕೊಬ್ಬರಿ ಎಣ್ಣೆ ಮತ್ತು ಕೋಪರಾ ಬೆಲೆಗಳು ಹೆಚ್ಚಿದ ಉತ್ಪಾದನೆ, ಕಡಿಮೆಯಾದ ಬೇಡಿಕೆ ಮತ್ತು…

7 hours ago

ಬಿಸಿಗಾಳಿಯ ಹೊಡೆತಕ್ಕೆ ತರಕಾರಿ ಬೆಳೆ ನಾಶ – ತರಕಾರಿ ಬೆಲೆ 50% ಏರಿಕೆ – ಮನೆ ಬಜೆಟ್ ತತ್ತರ..!

ಬಿಸಿಗಾಳಿಯಿಂದ ಬೆಳೆ ಹಾನಿಯಾಗಿದ್ದು, ಆಂಧ್ರಪ್ರದೇಶದಲ್ಲಿ ತರಕಾರಿ ಬೆಲೆಗಳು 50% ಏರಿಕೆಯಾಗಿವೆ. ಇದರ ಪರಿಣಾಮವಾಗಿ…

11 hours ago

ಅಸ್ಸಾಂ ರೈತರು ಕಾಳುಮೆಣಸು ಬೆಳೆ ಕಡೆ ಮುಖ – ಆದಾಯ ಹೆಚ್ಚಿಸುವ ಪ್ರಯೋಗ

ಅಸ್ಸಾಂ ರಾಜ್ಯದಲ್ಲಿ ಚಹಾ ರೈತರು ಹೆಚ್ಚುವರಿ ಆದಾಯಕ್ಕಾಗಿ ಕಪ್ಪು ಮೆಣಸು ಬೆಳೆ ಬೆಳೆಸಲು…

11 hours ago

ಸುಂಕರಹಿತ ಅಡಿಕೆ ಆಮದು ದಂಧೆಗೆ ಹೈಕೋರ್ಟ್ ಹೊಡೆತ – ₹20 ಕೋಟಿ ಸುಂಕ ವಿವಾದದಲ್ಲಿ ಮೇಲ್ಮನವಿಗಳು ವಜಾ

ಅಡಿಕೆ ಸುಂಕ ರಹಿತ ಆಮದು ದುರುಪಯೋಗ ಪ್ರಕರಣದಲ್ಲಿ ಹೈಕೋರ್ಟ್ ಮೇಲ್ಮನವಿಗಳನ್ನು ವಜಾಗೊಳಿಸಿದೆ. ₹20…

11 hours ago