Advertisement
Opinion

ದಿನದಿಂದ ದಿನಕ್ಕೆ ಅತಿಯಾಗಿ ದಪ್ಪ ಆಗ್ತಿದ್ದಾರೆ ಭಾರತೀಯರು | ಸ್ಥೂಲಕಾಯತೆ ಬಗ್ಗೆ ಆತಂಕಕಾರಿ ಅಧ್ಯಯನ ವರದಿ ಬಿಡುಗಡೆ | ಮಹಿಳೆಯರು ಹಾಗು ಮಕ್ಕಳಲ್ಲಿ ಜಾಸ್ತಿ

Share
ಮನುಷ್ಯನಿಗೆ(Human) ಆರೋಗ್ಯವೇ(Health) ಅತಿ ಮುಖ್ಯ. ಆರೋಗ್ಯ ಸರಿ ಇದ್ರೆ ಹೇಗಾದ್ರು ಬದುಕಬಹುದು. ಆದರೆ ಇತ್ತೀಚೆಗೆ ಕ್ಷಣಿಕ ಆಸೆ-ಆಕಾಂಕ್ಷೆಗಳ ಬೆನ್ನು ಬಿದ್ದು, ಆರೋಗ್ಯವನ್ನ ಕಡೆಗಣಿಸಿದ್ದಾನೆ. ಈ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗುತ್ತಿರುವ ಸಂಶೋಧನಾ ವರದಿಗಳು(Research report) ನಿಜಕ್ಕೂ ಆತಂಕಕಾರಿಯಾಗಿವೆ. ಅಂತಹದ್ದೊಂದು ವರದಿ ಈಗ ಹೊರಬಂದಿದೆ. ಭಾರತವು(India) ಈಗಾಗಲೇ ಮಧುಮೇಹ(Diabetes), ಹೃದಯಾಘಾತ(Heart attack), ಪಾರ್ಶ್ವವಾಯುಗಳಂತಹ(Paralysis) ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೊರೆ ಹೊತ್ತು ನಲುಗಿದೆ. ಅಧಿಕ ತೂಕದ(Over Weight) ಲಕ್ಷಾಂತರ ಜನರು ಇಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳ ಮೂಡಿಸಿದೆ. ಮಕ್ಕಳು(Children) ಕೂಡ ಇದಕ್ಕೆ ಹೊರತಾಗಿಲ್ಲ. ಅತಿಯಾದ ಬೊಜ್ಜು(Obesity) ಹೊಂದಿದವರ ಸಂಖ್ಯೆಯಲ್ಲಿ ಅಮೆರಿಕ(America) ಮತ್ತು ಚೀನಾದ(Chaina) ನಂತರದ ಸ್ಥಾನದಲ್ಲಿ ಭಾರತ ಇದೆ.

ವೈದ್ಯಕೀಯ ಜರ್ನಲ್ ಭಾರತೀಯರಲ್ಲಿ ಸ್ಥೂಲಕಾಯದ ಅಪಾಯಕಾರಿ ದರವನ್ನು ಬಹಿರಂಗಪಡಿಸಿದೆ. ಒಟ್ಟು ಜನಸಂಖ್ಯೆಯಲ್ಲಿ 8 ಕೋಟಿ ಮಂದಿ ವಯಸ್ಕರು ಹಾಗೂ 5-19 ವಯಸ್ಸಿನ 1 ಕೋಟಿ ಮಕ್ಕಳು ಬೊಜ್ಜು ಹೊಂದಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯ ಜಾಗತಿಕ ಪ್ರವೃತ್ತಿಯನ್ನು ವರದಿ ಉಲ್ಲೇಖಿಸಿದೆ. 1990 ರಿಂದ 2022 ರ ವರೆಗೆ 188 ದೇಶಗಳ ಮಹಿಳೆಯರಲ್ಲಿ ಭಾರತದ ಬೊಜ್ಜು ದರವು 94% ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿದೆ. ದಿ ಲ್ಯಾನ್ಸೆಟ್ ಪೇಪರ್ ಪ್ರಕಾರ, ಭಾರತದಲ್ಲಿ, ಬೊಜ್ಜು ದರವು 1990 ರಲ್ಲಿ 0.1% ರಿಂದ 2022 ರಲ್ಲಿ 3.1% ಗೆ ಹುಡುಗಿಯರಿಗೆ ಮತ್ತು 0.1% ರಿಂದ 3.9% ಗೆ ಹುಡುಗರಲ್ಲಿ ಹೆಚ್ಚಾಗಿದೆ. ವಯಸ್ಕರಲ್ಲಿ, ಮಹಿಳೆಯರಿಗೆ ಬೊಜ್ಜು ದರವು 1990 ರಲ್ಲಿ 1.2% ರಿಂದ 2022 ರಲ್ಲಿ 9.8% ಕ್ಕೆ ಮತ್ತು ಪುರುಷರಲ್ಲಿ 0.5% ರಿಂದ 5.4% ಕ್ಕೆ ಏರಿತು.

Advertisement
Advertisement

ವರದಿಯಲ್ಲಿ ಏನಿದೆ? : 1990 ರಲ್ಲಿ ಭಾರತದ 5-19 ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ಪ್ರಮಾಣವು 4 ಲಕ್ಷದಷ್ಟಿತ್ತು. 2022 ರ ಹೊತ್ತಿಗೆ ಅದು 1.02 ಕೋಟಿಗೆ ಏರಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ಥೂಲಕಾಯತೆಯು 1990 ರಲ್ಲಿ 20.04 ಲಕ್ಷದಷ್ಟಿತ್ತು. ಆದರೆ 2022ರ ವೇಳೆಗೆ 4.04 ಕೋಟಿಗಿಂತಲೂ ಹೆಚ್ಚಾಗಿದೆ. 1990 ರಲ್ಲಿ ಅದೇ ವಯೋಮಾನದ 2.06 ಕೋಟಿ ಪುರುಷರು ಬೊಜ್ಜು ಹೊಂದಿದ್ದರು. 2022 ರಲ್ಲಿ ಮಹಿಳೆಯರಲ್ಲಿ ಸ್ಥೂಲಕಾಯತೆಗಾಗಿ 197 ದೇಶಗಳ ಪೈಕಿ ಭಾರತವು 182 ನೇ ಸ್ಥಾನದಲ್ಲಿದೆ. ಪುರುಷರ ಅಂಕಿಅಂಶಕ್ಕೆ ಬಂದಾಗ ಜಾಗತಿಕವಾಗಿ 180ನೇ ಸ್ಥಾನದಲ್ಲಿದೆ. ಇನ್ನು ಯುವಜನರ ವರ್ಗದಲ್ಲಿ 174ನೇ ಸ್ಥಾನದಲ್ಲಿ ಭಾರತ ಇದೆ.

Advertisement

ಸ್ಥೂಲಕಾಯತೆ ಎಂದರೇನು? : ದೇಹದಲ್ಲಿನ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯೇ ಬೊಜ್ಜು. ಅದು ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ತಿಳಿಸಿದೆ. 25 ಕ್ಕಿಂತ ಹೆಚ್ಚಿನ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅನ್ನು ‘ಅಧಿಕ ತೂಕ’ ಎಂದು ಪರಿಗಣಿಸಲಾಗುತ್ತದೆ. 30 ಕ್ಕಿಂತ ಹೆಚ್ಚಿನ ಬಿಎಂಐಯನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಬಿಎಂಐ ಎಂದರೆ, ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದ ಕೊಬ್ಬಿನ ಅಂಶವನ್ನು ಅಳತೆ ಮಾಡುವುದು. ಭಾರತ ಇದೀಗ ಬೊಜ್ಜು ಎಂಬ ಟೈಂಬಾಂಬ್ ಮೇಲೆ ಕುಳಿತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪುರುಷರಿಗಿಂತ ಮಹಿಳೆಯರಲ್ಲೇ ಬೊಜ್ಜು ಜಾಸ್ತಿ ಯಾಕೆ? : ಮಹಿಳೆಯರು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ. ಹೆಚ್ಚಾಗಿ ಮನೆಗೆಲಸಕ್ಕೇ ಸೀಮಿತರಾಗಿದ್ದಾರೆ. ಭಾರತದಲ್ಲಿ ಮಹಿಳೆಯರು ಆರೋಗ್ಯ ಮತ್ತು ಶಿಕ್ಷಣ ವಿಷಯದಲ್ಲಿ ಸೀಮಿತ ತಿಳುವಳಿಕೆ ಹೊಂದಿದ್ದಾರೆ. ಪೌಷ್ಟಿಕಾಂಶದ ಅಗತ್ಯತೆಗಳಿಗಾಗಿ ಅವರ ಕುಟುಂಬದ ಇತರೆ ಸದಸ್ಯರಿಗೆ ಆದ್ಯತೆ ನೀಡುತ್ತಾರೆ ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಅಧ್ಯಯನದ ಸಹ-ಲೇಖಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರದೀಪ ಗುಹಾ ತಿಳಿಸಿದ್ದಾರೆ.

Advertisement

ಅಷ್ಟೇ ಅಲ್ಲ, ಗರ್ಭಧಾರಣೆ, ಋತುಬಂಧದಂತಹ ಜೈವಿಕ ಅಂಶಗಳು ಮಹಿಳೆಯರ ತೂಕದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಪುರುಷರಲ್ಲಿ ಸಾಮಾನ್ಯವಾಗಿ ಟ್ರಂಕಲ್ ಸ್ಥೂಲಕಾಯತೆ ಇರುತ್ತದೆ. ಅದು ಹೆಚ್ಚಾಗಿ ಗೋಚರಿಸುವುದಿಲ್ಲ. ಆದರೆ ಅಪಾಯಕಾರಿ. ಇದರಿಂದ ಕೊಬ್ಬು ಕಿಬ್ಬೊಟ್ಟೆಯ ಭಾಗದಲ್ಲಿ ಸಂಗ್ರಹವಾಗುತ್ತದೆ.

ಸ್ಥೂಲಕಾಯತೆ ನಿಯಂತ್ರಣ ಹೇಗೆ? : ಉತ್ತಮ ಆಹಾರ ಪದ್ಧತಿ, ಹೃದಯ ಮತ್ತು ದೈಹಿಕ ಶಕ್ತಿ ವ್ಯಾಯಾಮಗಳು ಸ್ಥಿರವಾದ ತೂಕ ಕಾಪಾಡಿಕೊಳ್ಳಲು, ಫಿಟ್ ಆಗಿರಲು ಸಹಾಯ ಮಾಡುತ್ತವೆ. ಧೂಮಪಾನ ಕಡಿಮೆ ಮಾಡುವುದು ಅಥವಾ ತ್ಯಜಿಸುವುದು, ಮಿತ ಆಹಾರ ಪದ್ಧತಿ, ಸೋಡಾ ಹಾಗೂ ಸಿಹಿಯಾದ ಟೀ-ಕಾಫಿ, ಪಾನೀಯಗಳ ಸೇವಿಸುವುದನ್ನು ಕಡಿಮೆ ಮಾಡಬೇಕು. ಸಕ್ಕರೆ ಇರುವ ಇಂತಹ ಪಾನೀಯಾಗಳ ಸೇವನೆ ದೇಹಕ್ಕೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.

Advertisement

ಮಕ್ಕಳಿಗೆ ಸಲಹೆ ಏನು? : ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯು ಫಿಟ್ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಅನಾರಾಗ್ಯಕರ ಆಹಾರ ಮತ್ತು ಪಾನೀಯಗಳನ್ನು ನೀಡುವುದು ಒಳಿತಲ್ಲ. ಜಂಕ್ ಫುಡ್‌ಗಳಿಂದ ಆದಷ್ಟು ಅವರನ್ನು ದೂರ ಇಡುವುದು ಸೂಕ್ತ. ಆರೋಗ್ಯಕರ ಆಹಾರ ಆಯ್ಕೆಗೆ ಆದ್ಯತೆ ನೀಡಬೇಕು. ಮಕ್ಕಳು ಹೊರಾಂಗಣ ಆಟಗಳು ಮತ್ತು ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮಕ್ಕಳ ವೈದ್ಯರು ಸಲಹೆ ನೀಡುತ್ತಾರೆ.

Source : ಅಂತರ್ಜಾಲ

Advertisement
The research reports being released regarding health are really alarming. One such report has now come out. India ranks after America and China in the number of obese people.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಬೆಳೆಯಲು ಕೃಷಿಯೂ ಪಠ್ಯದ ಭಾಗವಾಗಬೇಕು | ಪದ್ಮಶ್ರೀ ಸತ್ಯನಾರಾಯಣ ಬೆಳೆರಿ ಅಭಿಪ್ರಾಯ |

ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು ಎನ್ನುತ್ತಾರೆ…

16 mins ago

ಅಕ್ಷಯ ತೃತೀಯ | ಅನಂತ ಶುಭವನ್ನು ತರುವ ಹಬ್ಬ | ಚಿನ್ನ ಖರೀದಿಸುವುದೊಂದೇ ಅಕ್ಷಯ ತೃತೀಯ ಅಲ್ಲ..!

ಅಕ್ಷಯ ತೃತೀಯ(Akshaya Trutiya)... ಅಕ್ಷಯ ತೃತೀಯ ಮೇ.10 ಶುಕ್ರವಾರ, ಈ ದಿನದಂದು ಚಂದ್ರ…

8 hours ago

ಪಾರಂಪರಿಕ ಬೀಜೋತ್ಸವ | ದಾವಣಗೆರೆಯಲ್ಲಿ ಮೇ.12 ರಂದು ನಡೆಯಲಿದೆ ಸಂಭ್ರಮದ ಬೀಜ ವೈಭವ |

ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ…

9 hours ago

ಭಾರತದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ…!

ಭಾರತದಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ಇದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ…

9 hours ago

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಬರೋಬ್ಬರಿ 2 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ |

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ…

10 hours ago