ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ(Health) ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಜೀವನ ಶೈಲಿ( Life style), ಆಹಾರ ಪದ್ಧತಿ(food habit), ವಿಷಕಾರಿ ತರಕಾರಿ(poisoned vegetables), ಕಲಬೆರಕೆ ಆಹಾರಗಳು.. ಯಾವುದನ್ನು ತಿಂದರು ಆರೋಗದ ಮೇಲೆ ಪರಿಣಾಮ ಬೀರೋದು ಗ್ಯಾರಂಟಿ. ಇವುಗಳಿಂದ ಹೊರಬರಲು ಖ್ಯಾತ ವಿಜ್ಞಾನಿ(scientist), ಕೃಷಿಕ(agriculturist), ವೈದ್ಯರೂ(doctor) ಆದ ಡಾ. ಖಾದರ್(Dr Khadar) ಅವರು ಒಂದಷ್ಟು ಸಲಹೆ ಹಾಗೂ ಕಷಾಯಗಳನ್ನು ಹೇಳಿದ್ದಾರೆ. ಈ ಕಷಾಯಗಳನ್ನು ಒಂದು ತಿಂಗಳು ಕುಡಿದರೆ 12 ತಿಂಗಳು ನಿಮಗೆ ಯಾವ ಕಾಯಿಲೆಯು ಬರುವುದಿಲ್ಲ..!
ಇದು ಸತ್ಯ… ಬನ್ನಿ, ಹಾಗಾದರೆ ಅದು ಯಾವುದರ ಕಷಾಯ ಎನ್ನುವುದನ್ನು ತಿಳಿಯೋಣ:
1. ಗರಿಕೆ ಹುಲ್ಲು ಕಷಾಯ.
2. ತುಳಸಿ ಎಲೆಕಷಾಯ.
3. ಅಮೃತ ಬಳ್ಳಿ ಕಷಾಯ.
4. ಬಿಲ್ವ ಪತ್ರೆ ಕಷಾಯ.
5. ಹೊಂಗೆ ಎಲೆ ಕಷಾಯ.
6. ಬೇವಿನ ಎಲೆ ಕಷಾಯ.
7. ಅರಳಿ ಎಲೆ ಕಷಾಯ. ಈ ಏಳು ಕಷಾಯಗಳನ್ನು ಮಾಡಲು, ಅರ್ಧ ಹಿಡಿ ಯಾವುದೇ ಎಲೆಗಳನ್ನು ತೆಗೆದುಕೊಳ್ಳಿ, ಚೆನ್ನಾಗಿ ತೊಳೆಯಿರಿ. ನಂತರ ಒಂದು ಲೋಟ (ಕಾಲು ಲೀಟರ್) ನೀರನ್ನು, ತೊಳೆದ ಎಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ (4 ನಿಮಿಷ) ನಂತರ ಉರಿ ನಿಲ್ಲಿಸಿ. ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿಕೊಂಡು, ಬಿಸಿ ಇರುವಾಗ ಸ್ವಲ್ಪ ಸ್ವಲ್ಪ ವಾಗಿ ಕುಡಿಯಿರಿ. ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿದರೆ ಉತ್ತಮ. ಚಹಾ, ಕಾಫಿ, ಹಾಲು ಕುಡಿಯುವುದನ್ನು ಬಿಟ್ಟುಬಿಡಲು ಪ್ರಯತ್ನಪಡಿ. ಒಂದೊಂದು ಕಷಾಯವನ್ನು ನಾಲ್ಕು ದಿನದಂತೆ ಒಂದು ತಿಂಗಳು ಕುಡಿಯಿರಿ. (ಪ್ರತಿದಿನ ಕುಡಿದರೆ ಒಳ್ಳೆಯದು)
ಇದರ ಜೊತೆಗೆ ಸಿರಿಧಾನ್ಯಗಳನ್ನು ತಿನ್ನಿರಿ. ಅವುಗಳೆಂದರೆ, “ಸಾಮೆ / ಸಾವೆ, ನವಣೆ, ಕೊರಲೆ, ಹಾರಕ / ಆರ್ಕ, ಉದಲು, ರಾಗಿ, ಜೋಳ, ಕಮ್ಮು / ಸಜ್ಜೆ”
ಈ ಸಿರಿಧಾನ್ಯಗಳಲ್ಲಿ ನೀವು ಅಕ್ಕಿಯಲ್ಲಿ ಏನೆಲ್ಲ ತಿಂಡಿ ಮಾಡುತ್ತಿರೋ ಅವೆಲ್ಲ ತಿಂಡಿಗಳನ್ನು ಮಾಡಬಹುದು. ಇಂತಹ ಆರೋಗ್ಯಕರವಾದ ತಿಂಡಿಗಳನ್ನು ನಿಮ್ಮ ಮನೆಯವರಿಗೆ ಮಾಡಿ ಕೊಡಿ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿ.
ಇದಕ್ಕಿಂತ ಮುಖ್ಯವಾಗಿ ನೀವು ಬಿಡಬೇಕಾಗಿರುವುದು:
1. ಮೊಟ್ಟೆ ಮತ್ತು ದಾಲ್ಡ ತುಪ್ಪ
2. ಗೋದಿ / ಮೈದಾ ಹಿಟ್ಟು
3. ಹಾಲು
4. ಸಕ್ಕರೆ
5. ರಿಫೈನ್ಡ್ ಎಣ್ಣೆ
6. ಪಾಲಿಷ್ ಅಕ್ಕಿ
7. ಬ್ಲೀಚ್ ಮಾಡಿದ ಉಪ್ಪು
ಇದನ್ನು 25 ವರ್ಷದಿಂದ ಸಂಶೋಧನೆ ಮಾಡಿರುವ, ಕೃಷಿಕರು, ವಿಜ್ಞಾನಿಗಳು ಮತ್ತು ಸ್ವಯಂ ಹೋಮಿಯೋಪತಿ ವೈದ್ಯರು ಆದ ಖಾದರ್ ಅವರು ಹೇಳುತ್ತಲೇ ಬಂದಿದ್ದಾರೆ.
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…
ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…
ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…