ವಿಜ್ಞಾನ ಅನ್ನೋದು ಮೊಗೆದಷ್ಟು, ಬಗೆದಷ್ಟು ನಾವು ಮತ್ತಷ್ಟು ಕಂಡುಕೊಳ್ಳುವ ವಿಸ್ಮಯ ಪ್ರಕ್ರಿಯೆ. ಒಂದು ಸಾಹಸ ಮಾಡಿ ಆದ ಮೇಲೆ ಅಲ್ಲಿಗೆ ಮುಗಿಯಿತು ಅನ್ನೋದು ವಿಜ್ಞಾನದಲ್ಲಿ ಇಲ್ಲ. ಹಾಗೆ ಈಗ ಭಾರತೀಯ ಬಾಹ್ಯಾಕಾಶ ಸಂಸ್ಥೆ#ISRO ಚಂದ್ರನತ್ತ ಕಳುಹಿಸಿರುವ ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ ಅನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಲ್ಯಾಂಡರ್ ಮತ್ತು ರೋವರ್ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋಗೆ ಸ್ವಲ್ಪ ಭರವಸೆ ಇದೆ. ಸದ್ಯ ಲ್ಯಾಂಡರ್ ಮತ್ತು ರೋವರ್ ಸ್ಲೀಪ್ ಮೋಡ್ಗೆ ಹೋಗಿವೆ. ಸ್ಲೀಪ್ ಮೋಡ್ನಿಂದ ಎಚ್ಚೆತ್ತುಕೊಂಡು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರೆ ಅದು ಇಸ್ರೋಗೆ ನಿಜಕ್ಕೂ ಸಂತಸ ತರಲಿದೆ. ಬುಧವಾರ ಚಂದ್ರನ ಮೇಲೆ ತುಂಬಾ ಚಳಿಯ ದಿನವಾಗಿದೆ. ಆದ್ದರಿಂದ, ಈಗ ದಿನ ಬೆಳಗಾದರೆ ಮತ್ತು ಸೂರ್ಯನ ಬೆಳಕು ಪ್ರಖರವಾದ ನಂತರ ಲ್ಯಾಂಡರ್ ಮತ್ತು ರೋವರ್ ಅನ್ನು ಎಚ್ಚರಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಂಡರೆ ಮುಂದಿನ 14 ದಿನಗಳವರೆಗೆ ಕೆಲಸ ಮಾಡಬಹುದು. ಸೌರಶಕ್ತಿ ಚಾಲಿತ ಚಂದ್ರಯಾನ-3 ಮಾಡ್ಯೂಲ್ ಮಿಷನ್ನ ವ್ಯಾಲಿಡಿಟಿ ಕೇವಲ ಒಂದು ಚಂದ್ರನ ದಿನವಾಗಿತ್ತು, ಅಂದರೆ ಭೂಮಿಯ ಮೇಲೆ ಸುಮಾರು 14 ದಿನಗಳಾಗಿತ್ತು. ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳಲ್ಲಿನ ಎಲೆಕ್ಟ್ರಾನಿಕ್ಸ್ ಚಂದ್ರನ ಮೇಲಿನ ಅತ್ಯಂತ ಶೀತ ರಾತ್ರಿ ತಾಪಮಾನವನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿಲ್ಲ. ಒಂದು ವೇಳೆ ಸ್ಲೀಪ್ ಮೋಡ್ನಿಂದ ಇಬ್ಬರೂ ಎಚ್ಚರಗೊಂಡರೆ, ಲ್ಯಾಂಡರ್ ಮತ್ತು ರೋವರ್ ಕನಿಷ್ಠ ಮುಂದಿನ 14 ಭೂಮಿಯ ದಿನಗಳವರೆಗೆ ಕೆಲಸ ಮಾಡುವುದನ್ನು ಮುಂದುವರಿಸಬಹುದು.
ಸದ್ಯ ರೋವರ್ 100 ಮೀಟರ್ ದೂರವನ್ನು ಕ್ರಮಿಸಿದೆ. ಚಂದ್ರನನ್ನು ತಲುಪಿದ ನಂತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಭೂಮಿಯ ಮೇಲಿನ ವಿಜ್ಞಾನಿಗಳಿಗೆ ಅನೇಕ ಪ್ರಮುಖ ಡೇಟಾವನ್ನು ಕಳುಹಿಸಿವೆ. ಈ ಮಾಹಿತಿಯ ಆಧಾರದ ಮೇಲೆ ಚಂದ್ರನಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಹಿಂದೆ ಪ್ರಗ್ಯಾನ್ ರೋವರ್ 100 ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ತಿಳಿಸಿತ್ತು. ಈ ದೂರವನ್ನು ಕ್ರಮಿಸಲು ರೋವರ್ ಸುಮಾರು 10 ದಿನಗಳನ್ನು ತೆಗೆದುಕೊಂಡಿತ್ತು. ಲ್ಯಾಂಡರ್ ಮತ್ತು ರೋವರ್ ನಡುವಿನ ಅಂತರದ ಗ್ರಾಫ್ ಅನ್ನು ಇಸ್ರೋ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ರೋವರ್ನ 6 ಚಕ್ರಗಳ ತೂಕ 26 ಕೆ.ಜಿ. ಇದೆ.
Source : Digital Media
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಕೆಲವು ದಿನಗಳು ಬಿಟ್ಟು ಬಿಟ್ಟು ಸಾಧಾರಣ ಮಳೆ…
ಜೀವನೋಪಾಯದ ಒತ್ತಡದಿಂದ ಗ್ರಾಮಸಭೆಗೆ 55.5% ಗ್ರಾಮೀಣರು ಹಾಜರಾಗುತ್ತಿಲ್ಲ ಎಂದು ರಾಷ್ಟ್ರೀಯ ಅಧ್ಯಯನ ತಿಳಿಸಿದೆ.…
ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…