Advertisement

ಕನಸೆಂಬ ಪಕ್ಷಿಯ ಬೆನ್ನೇರಿ ಹೊರಟಾಗ…..!

Share
“ಕನಸು” ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ  ತಾನು ಮುಂದೆ ಜೀವನದಲ್ಲಿ ಹೇಗೆ ಆಗಬೇಕು ಎಂಬ ಕನಸು ಕಾಣುತ್ತಲೇ ಬರುತ್ತಾನೆ. ಆ ಕನಸು ನನಸಾಗುತ್ತದೆಯೋ? ಇಲ್ಲವೋ! ಎಂದು ತಿಳಿಯಲು ಸಾಧ್ಯವಿಲ್ಲ. ಆದರೂ ಸಹ ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗುತ್ತಾನೆ! ಒಂದಲ್ಲಾ ಒಂದು ದಿನ ತಾನು ಆ ಕನಸನ್ನು ನನಸು ಮಾಡಿಕೊಳ್ಳುವೆ ಎಂಬ ಛಲ ಆತನಲ್ಲಿ ಇರುತ್ತದೆ.
ವ್ಯಕ್ತಿ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣುವ ಬದಲು ಕೇವಲ ಒಂದು ಕನಸನ್ನು ಕಂಡು ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಡಿ ಇರಿಸಿದರೆ ಒಂದು ದಿನ ನನಸಾಗಿಯೇ ಆಗುತ್ತದೆ. ಕೇವಲ ಆ ಕನಸನ್ನು ಬೆನ್ನತ್ತಿ ಹೊರಟರೆ ಸಾಲದು,  ಕನಸನ್ನು ಬೆನ್ನತ್ತಿ ಹೋಗುವ ದಾರಿ ಹಾಗೂ ತಲುಪುವ ಗುರಿ ಎರಡೂ ಸಹ ಒಳ್ಳೆಯದಾಗಿರಬೇಕು.
ನಮ್ಮ ಗುರಿ ಸಾಧನೆಯು ಇನ್ನೊಬ್ಬರ ಜೀವನವನ್ನು ಹಾಳು ಮಾಡಬಾರದು, ನಮ್ಮ ಕನಸು ಇನ್ನೊಬ್ಬರ ಕನಸಿಗೆ ಮುಳ್ಳಾಗಬಾರದು, ನಮ್ಮ ನಿರ್ಧಾರಗಳು ಇನ್ನೊಬ್ಬರ ಬದುಕಿಗೆ ಮುಳುವಾಗಬಾರದು.
ಬದುಕಿನಲ್ಲಿ ನೂರಾರು ಕನಸುಗಳನ್ನು ಕಂಡು ಯಾವ ಕನಸನ್ನು ಈಡೇರಿಸಿಕೊಳ್ಳುವುದು ಎಂದು ಚಿಂತೆ ಮಾಡುವ ಬದಲು ಕೇವಲ ಒಂದು ಕನಸನ್ನು ಕಾಣಿ, ಹಾಗೂ ಆ ಕನಸನ್ನು ನನಸಾಗಿಸಲು ಹೋರಾಟ ಮಾಡಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ, ನಿಷ್ಠೆ, ಸತ್ಯ, ಅಹಿಂಸೆ, ಪ್ರೀತಿ ಹಾಗೂ ನಿರ್ದಿಷ್ಟ ಗುರಿ ಮತ್ತು ಉದ್ದೇಶ. ಈ ಅಂಶಗಳು ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಿಸಲು ಸಹಕಾರಿಯಾಗುತ್ತದೆ.
ಆದರೆ ಈ ಕನಸಿನ ಓಟದಲ್ಲಿ ಪ್ರೀತಿ, ಸ್ನೇಹ, ಸಂಬಂಧಗಳನ್ನು ಎಂದಿಗೂ ಮರೆಯದಿರಿ. ಏಕೆಂದರೆ ಒಂದು ನಿಜವಾದ ಪ್ರೀತಿ, ಒಂದು ನಿಜವಾದ ಸ್ನೇಹ, ನಿಮ್ಮ ಈ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರಬಹುದು.
ಸಾಧನೆಯ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಏಕೆಂದರೆ ನಮ್ಮ ದೇಹಕ್ಕೆ ಬಂಧನ ಇರಬಹುದು ಆದರೆ ನಮ್ಮ ಭಾವನೆಗಳಿಗೆ ಬಂಧನವಿಲ್ಲ. ಹಾಗೂ ಆ ಭಾವನೆಗಳನ್ನು ಬಂಧಿಸಲು ಸಾಧ್ಯವೂ ಇಲ್ಲ. ಭಾವನೆಗಳು ಎಂದಿಗೂ ಸ್ವತಂತ್ರ. ಭಾವನೆಗಳೇ ಒಂದು ಪ್ರಪಂಚ.
“ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗು… ಆದರೆ ಎಂದಿಗೂ ಮರೆಯದಿರು ಪ್ರೀತಿ, ಸ್ನೇಹ, ಸಂಬಂಧಗಳನ್ನು…..”
# ಉಲ್ಲಾಸ್‌ ಕಜ್ಜೋಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

14 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

21 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

3 days ago