Advertisement

ಕನಸೆಂಬ ಪಕ್ಷಿಯ ಬೆನ್ನೇರಿ ಹೊರಟಾಗ…..!

Share
“ಕನಸು” ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಹ  ತಾನು ಮುಂದೆ ಜೀವನದಲ್ಲಿ ಹೇಗೆ ಆಗಬೇಕು ಎಂಬ ಕನಸು ಕಾಣುತ್ತಲೇ ಬರುತ್ತಾನೆ. ಆ ಕನಸು ನನಸಾಗುತ್ತದೆಯೋ? ಇಲ್ಲವೋ! ಎಂದು ತಿಳಿಯಲು ಸಾಧ್ಯವಿಲ್ಲ. ಆದರೂ ಸಹ ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗುತ್ತಾನೆ! ಒಂದಲ್ಲಾ ಒಂದು ದಿನ ತಾನು ಆ ಕನಸನ್ನು ನನಸು ಮಾಡಿಕೊಳ್ಳುವೆ ಎಂಬ ಛಲ ಆತನಲ್ಲಿ ಇರುತ್ತದೆ.
ವ್ಯಕ್ತಿ ತನ್ನ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣುವ ಬದಲು ಕೇವಲ ಒಂದು ಕನಸನ್ನು ಕಂಡು ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಡಿ ಇರಿಸಿದರೆ ಒಂದು ದಿನ ನನಸಾಗಿಯೇ ಆಗುತ್ತದೆ. ಕೇವಲ ಆ ಕನಸನ್ನು ಬೆನ್ನತ್ತಿ ಹೊರಟರೆ ಸಾಲದು,  ಕನಸನ್ನು ಬೆನ್ನತ್ತಿ ಹೋಗುವ ದಾರಿ ಹಾಗೂ ತಲುಪುವ ಗುರಿ ಎರಡೂ ಸಹ ಒಳ್ಳೆಯದಾಗಿರಬೇಕು.
ನಮ್ಮ ಗುರಿ ಸಾಧನೆಯು ಇನ್ನೊಬ್ಬರ ಜೀವನವನ್ನು ಹಾಳು ಮಾಡಬಾರದು, ನಮ್ಮ ಕನಸು ಇನ್ನೊಬ್ಬರ ಕನಸಿಗೆ ಮುಳ್ಳಾಗಬಾರದು, ನಮ್ಮ ನಿರ್ಧಾರಗಳು ಇನ್ನೊಬ್ಬರ ಬದುಕಿಗೆ ಮುಳುವಾಗಬಾರದು.
ಬದುಕಿನಲ್ಲಿ ನೂರಾರು ಕನಸುಗಳನ್ನು ಕಂಡು ಯಾವ ಕನಸನ್ನು ಈಡೇರಿಸಿಕೊಳ್ಳುವುದು ಎಂದು ಚಿಂತೆ ಮಾಡುವ ಬದಲು ಕೇವಲ ಒಂದು ಕನಸನ್ನು ಕಾಣಿ, ಹಾಗೂ ಆ ಕನಸನ್ನು ನನಸಾಗಿಸಲು ಹೋರಾಟ ಮಾಡಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಖ್ಯವಾಗಿ ಬೇಕಾಗಿರುವುದು ಏಕಾಗ್ರತೆ, ನಿಷ್ಠೆ, ಸತ್ಯ, ಅಹಿಂಸೆ, ಪ್ರೀತಿ ಹಾಗೂ ನಿರ್ದಿಷ್ಟ ಗುರಿ ಮತ್ತು ಉದ್ದೇಶ. ಈ ಅಂಶಗಳು ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಿಸಲು ಸಹಕಾರಿಯಾಗುತ್ತದೆ.
ಆದರೆ ಈ ಕನಸಿನ ಓಟದಲ್ಲಿ ಪ್ರೀತಿ, ಸ್ನೇಹ, ಸಂಬಂಧಗಳನ್ನು ಎಂದಿಗೂ ಮರೆಯದಿರಿ. ಏಕೆಂದರೆ ಒಂದು ನಿಜವಾದ ಪ್ರೀತಿ, ಒಂದು ನಿಜವಾದ ಸ್ನೇಹ, ನಿಮ್ಮ ಈ ಸಾಧನೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರಬಹುದು.
ಸಾಧನೆಯ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಏಕೆಂದರೆ ನಮ್ಮ ದೇಹಕ್ಕೆ ಬಂಧನ ಇರಬಹುದು ಆದರೆ ನಮ್ಮ ಭಾವನೆಗಳಿಗೆ ಬಂಧನವಿಲ್ಲ. ಹಾಗೂ ಆ ಭಾವನೆಗಳನ್ನು ಬಂಧಿಸಲು ಸಾಧ್ಯವೂ ಇಲ್ಲ. ಭಾವನೆಗಳು ಎಂದಿಗೂ ಸ್ವತಂತ್ರ. ಭಾವನೆಗಳೇ ಒಂದು ಪ್ರಪಂಚ.
“ಕನಸೆಂಬ ಪಕ್ಷಿಯ ಬೆನ್ನತ್ತಿ ಹೋಗು… ಆದರೆ ಎಂದಿಗೂ ಮರೆಯದಿರು ಪ್ರೀತಿ, ಸ್ನೇಹ, ಸಂಬಂಧಗಳನ್ನು…..”
# ಉಲ್ಲಾಸ್‌ ಕಜ್ಜೋಡಿ
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

10 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

11 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

15 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

15 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

16 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

17 hours ago