Advertisement
ಸಾಂಸ್ಕೃತಿಕ

ಧೂಳೆಬ್ಬಿಸಲು ಬರುತ್ತಿದೆ ನವ ಪ್ರತಿಭೆಗಳ ನೂತನ ಚಿತ್ರ -ಕಪೋ ಕಲ್ಪಿತಂ

Share
ವಿಭಿನ್ನತೆ ಇರುವ ವಿಭಿನ್ನ ನಿರೂಪಣೆಯ ಹೊಸ ಪ್ರತಿಭೆಗಳ ಹಾಗು ಚಿರಪಚಿತ ಪ್ರತಿಭಾವಂತ ಕಲಾವಿದರ ಸಂಗಮವಾಗಿದೆ ಕಪೋ ಕಲ್ಪಿತಂ.
ಸವ್ಯಸಾಚಿ ಕ್ರಿಯೇಷನ್ ಚಿತ್ರ ಸಂಸ್ಥೆಯ ದ್ವಿತೀಯ ಕೊಡುಗೆಯಾಗಿರುವ ಈ ಚಿತ್ರ ಕೇವಲ 5 ದಿವಸದಲ್ಲಿ ಚಿತ್ರೀಕರಣ ಸಂಪೂರ್ಣ ಗೊಳಿಸಿದ ಚಿತ್ರವಾಗಿದೆ ಜೊತೆಗೆ ಒಂದೇ ಲೊಕೇಷನ್ ನಲ್ಲಿ 90 ಪ್ರತಿಶತ ಚಿತ್ರೀಕರಣ ಗೊಂಡ ಸಿನಿಮಾ ಹಾಗೆ ಗಿಂಬಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಗೊಂಡ ಚಿತ್ರ ಎಂಬ ಅನೇಕ ವಿಶೇಷಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.
ನವ ಪ್ರತಿಭೆ ಹಾಗು ಪ್ರಬುದ್ಧ ನಟ ನಟಿಯರ ಸಮಾಗಮ ವಾಗಲಿದೆ ಕಪೋ ಕಲ್ಪಿತಂ.. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುಮಿತ್ರ ಗೌಡ ಪ್ರೀತಂ ಹೊರನಾಡು, ರಾಜೇಶ್ ಕಣ್ಣೂರ್, ಮಜಾಭಾರತ ಕಲಾವಿದ  ಶಿವರಾಜ್ ಕರ್ಕೇರ, ಅಮೋಘ್ ಕೊಡಂಗಳ, ದೀಕ್ಷಿತ್ ಗೌಡ , ವಿನೀತ್ ಶೆಟ್ಟಿ, ಡಾ.ಕಾಸರಗೋಡು ಅಶೋಕ್ ಕುಮಾರ್,  ವಿಶಾಲ್, ಸರೋಜಾ ರಾವ್, ಮಾಸ್ಟರ್ ನಿಕ್ಷಿತ್, ವಿದ್ಯಾ ಪ್ರಶಾಂತ್,ಚೈತ್ರ  ಹಾಗು ಭಾಸ್ಕರ್ ಮಣಿಪಾಲ್ ನಟಿಸಿದ್ದಾರೆ..
ಕನ್ನಡ ಹಾಗು ಹಿಂದಿ ಭಾಷೆಯಲ್ಲಿ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಕಪೋ ಕಲ್ಪಿತಂ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನ ಚಿತ್ರವಾಗಿದ್ದು ಚಿತ್ರವನ್ನು ಸುಮಿತ್ರ ಗೌಡ ಹಾಗು ಕವಿತಾ ಕನ್ನಿಕಾ ಪೂಜಾರಿ ನಿರ್ಮಿಸಿದ್ದು, ಗಣಿ ದೇವ್ ಕಾರ್ಕಳ ಈ ಚಿತ್ರಕೆ ಕತೆ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ ಜೊತೆಗೆ ಈ ಚಿತ್ರಕೆ 2 ಹಾಡು ಬರೆದು ಸಂಗೀತ ನೀಡಿದ್ದಾರೆ.. ಬಾತು ಕುಲಾಲ್ ಚಿತ್ರೀಕರಣ ಹಾಗು ಸಂಕಲನ ಮಾಡಿದ್ದಾರೆ..
ಹರ್ಷ ಶೆಟ್ಟಿ ಅವರು ಕನ್ನಡ ವರ್ಷನ್ ನಲ್ಲಿ ಒಂದು ಹಾಡನ್ನು ಹಾಡಿ ಹಿಂದಿ ವರ್ಷನ್ ನಲ್ಲಿ ಒಂದು ಹಾಡನ್ನು ಬರೆದು ಚಿತ್ರದ ಸಂಗೀತ ಸಂಯೋಜನೆ ಮಾಡಿ ವಿಭಿನ್ನತೆಮೂಲಕ ಚಿತ್ರರಂಗ ಪ್ರವೇಶಿದರೆ ಲ್ಯಾಸ್ಟರ್ ಫೆರ್ನಾಂಡಿಸ್ ಅವರು ಮಿಕ್ಸಿಂಗ್ ಹಾಗು ಮಾಸ್ಟರಿಂಗ್ ಮುಕಾಂತರ ತಮ್ಮ ಪ್ರತಿಭೆ ತೋರಿಸಲಿದ್ದಾರೆ… ಪ್ರದೀಪ್ ಅವರು ಮೇಕಪ್  ನಲ್ಲಿ ಕೈಚಳಕ ತೋರಿಸದ್ದಾರೆ… ಕಪೋ ಕಲ್ಪಿತ ಚಿತ್ರದ ಮೊದಲ ದ್ವಿಭಾಷಾ ಚಿತ್ರದ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ..
ಚಿತ್ರ ಡಿಸೆಂಬರ್ ತಿಂಗಳಲ್ಲಿ ಮೊದಲಿಗೆ ವೋ ಟಿ ಟಿ ಪ್ಲಾಟ್ಫಾರ್ಮ್ ಗಳಲ್ಲಿ ತೆರೆಗಂಡು ನಂತರ ಸಿನಿಮಾ ರೀತಿಯಲ್ಲಿ ಬದಲಾವಣೆಗೊಳಿಸಿ ಚಿತ್ರಮಂದಿರಗಲ್ಲಿ ಫೆಬ್ರವರಿ ನಂತರ ತೆರೆಗಾಣಲಿದೆ ಎಂದು ಚಿತ್ರತಂಡ ತಿಳಿಸಿದೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

2 days ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

2 days ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

2 days ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

3 days ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

3 days ago