ಕನ್ನಡ ಸಾಹಿತ್ಯ ಪರಿಷತ್ತು 2021 ನೇ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಚಂದ್ರಶೇಖರ ದಾಮ್ಲೆ, ಡಾ.ದೀಪಾ ಫಡ್ಕೆ, ಡಾ.ಮುರಳಿಮೋಹನ ಚೂಂತಾರು, ಸ್ಮಿತಾ ಅಮೃತ್ರಾಜ್, ಡಾ.ಎಚ್ ಜಿ ಶ್ರೀಧರ್ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.
2021 ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಈ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2000 ಕ್ಕೂ ಹೆಚ್ಚು ಲೇಖಕರು ಹಾಗೂ ಪ್ರಕಾಶಕರು ಕೃತಿಗಳನ್ನು ಕಳುಹಿಸಿದ್ದರು .ಅದರಲ್ಲಿ ಈ ಆಯ್ಕೆ ನಡೆದಿದೆ. ಈ ಬಹುಮಾನಕ್ಕೆ ಆಯ್ಕೆಯಾದವರಲ್ಲಿ ಡಾ.ಮುರಳಿಮೋಹನ ಚೂಂತಾರು ಅವರ ಸಂಗಾತಿ , ಡಾ.ಎಚ್ ಜಿ ಶ್ರೀಧರ್ ಅವರ ಚಪಡ(ಕಾದಂಬರಿ), ಡಾ.ಚಂದ್ರಶೇಖರ ದಾಮ್ಲೆ ಅವರ ನನ್ನ ಮಗಳು ತುಂಟಿ ಅಲ್ಲ, ಡಾ.ದೀಪಾ ಫಡ್ಕೆ ಅವರ ಮುಂದಣ ಹೆಜ್ಜೆ , ಸ್ಮಿತಾ ಅಮೃತ್ರಾಜ್ ಅವರ ನೆಲದಾಯ ಪರಿಮಳ, ಯಶಸ್ವಿನಿ ಕದ್ರಿ ಅವರ ಊರು ಹೇಳಿದ ಕಥೆ, ಬಿ ಸತ್ಯವತಿ ಎಸ್ ಭಟ್ ಕೊಳಚಿಪ್ಪು ಅವರ ನವಿಲಗರಿ ಕೃತಿ, ನಿರ್ಮಲ ಸುರತ್ಕಲ್ ಅವರ ನಿತ್ಯಪುಷ್ಪ ಮತ್ತು ಗೂಗಲ್ ಗುರು ಎಂಬ ಕೃತಿಗಳು ಆಯ್ಕೆಯಾಗಿದೆ.ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…
ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…