ಮರಳಿನ ಮೇಲೆ ಬರೆದೆಯೊಂದು ಓಲೆ
ಅಳಿಸಿಬಿಟ್ಟಿತು ಅಪ್ಪಳಿಸಿದ ಅಲೆ
ಅಳಿಯದೇ ಉಳಿಯಿತು,ನೆನಪಿನ ಕಲೆ
ನಿನ್ನ ಜೊತೆ ಕಟ್ಟಿದೆ ನೂರಾರು ಕನಸು
ಇಂದೇಕೋ ಮುಳುವಾಯ್ತು ನನ್ನ ವಯಸ್ಸು
ಕ್ಷಣ ಮಾತ್ರದಲ್ಲಿ ಮುರಿದು ಬಿಟ್ಟೆ ನನ್ನ ಮನಸ್ಸು
ಕಾಲ ಸಾಗಿದೆ,ನೆನಪುಗಳು ಕಾಡುತಿದೆ
ಮನಸ್ಸು ಮರಳಿ ಸಾಮಿಪ್ಯ ಬೇಡುತಿದೆ
ಕಣ್ಣ ರೆಪ್ಪೆಗಳು ಮುಚ್ಚದೇ ಕಾಯುತಿದೆ
ನೀನಾಗಿದ್ದೆ ನನಗೆ ಸಂಗೀತ ರಾಗ
ಕೊಟ್ಟುಬಿಟ್ಟಿದ್ದೆ ನಿನಗೆ ನನ್ನೆದೆಯ ಜಾಗ
ಇಂದು ಭಾದಿಸುತಿದೆ ನಿನ್ನ ನೆನಪಿನ ರೋಗ
ಕಳೆದು ಹೋದೆ ನಾನು ನಿನ್ನೊಳಗೆ
ತಿಳಿಯದೇ ಮರೆಯಾದೆ ನಾ ನನ್ನೊಳಗೆ
ಮರೆಯಾಗಿದೆ ನಿನ್ನನಗಲಿ ನನ್ನ ಮುಗುಳ್ನಗೆ
ಸಾಕಾಯ್ತು ನನಗೆ ನೆನಪುಗಳೊಡನೆ ಹೋರಾಟ
ಮುಗಿಯುವುದೆಂದೋ ನಾ ಕಾಣೆ ಈ ಸಂಕಟ
ಆದಷ್ಟು ಬೇಗ ಕೊನೆಗಾಣಬೇಕಿದೆ ಈ ಪರದಾಟ
# ಅಪೂರ್ವ ಚೇತನ್ ಪೆರಂದೋಡಿ
ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಗಳ ಅತಿವೇಗ ಹಾಗೂ ಅತಿಯಾದ LED ಲೈಟುಗಳ ವಿರುದ್ಧ…
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಕಾರದಿಂದ ಹವಾಮಾನ ಸ್ನೇಹಿ ಕೃಷಿ, ಡ್ರೋನ್, AI ಹಾಗೂ ಸ್ಮಾರ್ಟ್…
ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ವಿಜಯಪುರದಲ್ಲಿ ಈ ವರ್ಷ ತಾಪಮಾನ 40 ಡಿಗ್ರಿ…
ಉತ್ತರ ಪ್ರದೇಶದಲ್ಲಿ ಭಾರೀ ಧೂಳುಗಾಳಿ, ಮಳೆ ಹಾಗೂ ಮಿಂಚಿನಿಂದ 140ಕ್ಕೂ ಹೆಚ್ಚು ಮಂದಿ…
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಧ್ಯಾಹ್ನ ನಂತರ ಗುಡುಗು-ಮಿಂಚು ಸಹಿತ ಸಾಧಾರಣ…
ಕರ್ನಾಟಕದ ಹಲವೆಡೆ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಕರಾವಳಿಯಲ್ಲಿ ಮೇ 20ರಿಂದ ಮುಂಗಾರು…