Advertisement
ರಾಜ್ಯ

ಗೋಲ್ಡ್ ಲೋನ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ

Share

ಭಾರತೀಯ ರಿಸರ್ವ್ ಬ್ಯಾಕ್ ದೇಶಾದ್ಯಂತ ಚಿನ್ನ ಸಾಲ ನಿಯಮಗಳನ್ನು ಸಂಪೂರ್ಣವಾಗಿ ಪ್ರಮಾಣೀಕರಿಸುವ ಪ್ರಮುಖ ಆದೇಶವನ್ನು ಹೊರಡಿಸಿದೆ. ಈ ಹಿಂದೆ, ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪೆನಿಗಳ (NBFC) ನಡುವೆ ಚಿನ್ನದ ಸಾಲದ ನಿಯಮಗಳು ಭಿನ್ನವಾಗಿದ್ದವು. ಇದು ಹೆಚ್ಚಾಗಿ ಗ್ರಾಹಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಸಲು, ಆರ್ ಬಿಐ “ ಚಿನ್ನದ ಸಾಲಗಳ ಮೇಲಿನ ಮಾಸ್ಟರ್ ನಿರ್ದೇಶನ, “ ಎಂಬ ಸಮಗ್ರ ಮಾರ್ಗಸೂಚಿಯನ್ನು ಜಾರಿಗೆ ತರಲು ಆರ್ ಬಿ ಐ ಸಂಸ್ಥೆಗಳಿಗೆ ಎಪ್ರಿಲ್ 1,2026ರ ವರೆಗೆ ಸಮಯ ನೀಡಿದೆ. ಈ ನಿರ್ದೇಶನ ಅಡಿಯಲ್ಲಿ ಎಲ್ಲಾ ಬ್ಯಾಂಕುಗಳು ಮತ್ತು ಎನ್ ಬಿಎಪ್ ಸಿ ಗಳು ಒಂದೇ ರೀತಿಯ ನಿಯಮಗಳನ್ನು ಪಾಲಿಸಬೇಕು.

  • ರೂ 2.5  ಲಕ್ಷದವರೆಗೆ ಸಾಲಗಳಿಗೆ ಆದಾಯ ಪುರಾವೆ ಇಲ್ಲ: ಚಿನ್ನ ದ ಸಾಲಗಳನ್ನು ಹೆಚ್ಚು ಸುಲಭವಾಗಿ ಪಡೆಯಲು, ಆರ್ ಬಿಐ ಸಣ್ಣ ಸಾಲಗಳಿಗೆ ದಾಖಲೆಗಳ ಅವಶ್ಯಕತೆಗಳನ್ನು ಸಡಿಲಿಸಿದೆ.
  • ಚಿನ್ನವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸದಿದ್ದರೆ ದಂಡ: ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ 7 ಕೆಲಸದ ದಿನಗಳಲ್ಲಿ ಬ್ಯಾಂಕುಗಳು ಅಡವಿಟ್ಟ ಚಿನ್ನವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ನಿಮಗೆ ಪ್ರತಿದಿನ ₹5,000 ದಂಡ (Penalty) ನೀಡಬೇಕಾಗುತ್ತದೆ.
  • ಪಾರದರ್ಶಕ ಚಿನ್ನದ ತೂಕ ಮತ್ತು ಶುದ್ಧತೆಯ ಪರಿಶೀಲನೆ: ಚಿನ್ನದ ಶುದ್ಧತೆ ಮತ್ತು ತೂಕವನ್ನು ಗ್ರಾಹಕರ ಮುಂದೆಯೇ ಪರಿಶೀಲಿಸಬೇಕು. ನಿವ್ವಳ ಚಿನ್ನದ ತೂಕವನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಲ್ಲುಗಳು, ಮುತ್ತುಗಳು ಅಥವಾ ವಜ್ರಗಳನ್ನು ಎಣಿಸಲಾಗುವುದಿಲ್ಲ.
  • ಬುಲೆಟ್ ಮರುಪಾವತಿ ಸಾಲಗಳಲ್ಲಿನ ಬದಲಾವಣೆಗಳು: ಈ ಸಾಲಿನಲ್ಲಿ ಚಿನ್ನದ ಸಾಲಗಳು ಗರಿಷ್ಠ12 ತಿಂಗಳ ಅವಧಿಯನ್ನು ಹೊಂದಿರಬಹುದು. ಸಾಲದ ಅವಧಿಯ ಕೊನೆಯಲ್ಲಿ ಅಸಲು ಮತ್ತು ಬಡ್ಡಿ ಎರಡನ್ನೂ ಪಾವತಿಸಬೇಕು.
  • ಬ್ಯಾಂಕುಗಳು ಮತ್ತು NBFC ಗಳಿಗೆ ಏಕರೂಪದ ನಿಯಮಗಳು: ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೆ ಒಂದೇ ರೀತಿಯ ಚಿನ್ನದ ಸಾಲ ನಿಯಮಗಳು ಅನ್ವಯಿಸುತ್ತದೆ. ಬಡ್ಡಿ ಲೆಕ್ಕಾಚಾರ, ಮೌಲ್ಯಮಾಪನ ವಿಧಾನಗಳು ಮತ್ತು ಗ್ರಾಹಕರ ಹಕ್ಕುಗಳನ್ನು ಪ್ರಮಾಣೀಕರಿಸಲಾಗುತ್ತದೆ.
  • ಸಣ್ಣ ಸಾಲಗಾರರಿಗೆ ಹೆಚ್ಚಿ ನ ಸಾಲದ ಮೊತ್ತ: ಸಾಲಗಾರರು ಚಿನ್ನದ ಮೌಲ್ಯದ 5% ವರೆಗೆ ಮಾತ್ರ ಪಡೆಯಬಹುದಿತ್ತು. ಈಗ ಸಣ್ಣ ಸಾಲಗಾರರು ಅದೇ ಪ್ರಮಾಣದ ಚಿನ್ನಕ್ಕೆ ಹೆಚ್ಚಿನ ಹಣವನ್ನು ಪಡೆಯಬಹುದು, ಇದು ಕಡಿಮೆ ಆದಾಯದ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಮುಖ ಪರಿಹಾರವಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

7 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

8 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

1 day ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

2 days ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

2 days ago