Advertisement
ರಾಜ್ಯ

ಗೋಲ್ಡ್ ಲೋನ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ

Share

ಭಾರತೀಯ ರಿಸರ್ವ್ ಬ್ಯಾಕ್ ದೇಶಾದ್ಯಂತ ಚಿನ್ನ ಸಾಲ ನಿಯಮಗಳನ್ನು ಸಂಪೂರ್ಣವಾಗಿ ಪ್ರಮಾಣೀಕರಿಸುವ ಪ್ರಮುಖ ಆದೇಶವನ್ನು ಹೊರಡಿಸಿದೆ. ಈ ಹಿಂದೆ, ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪೆನಿಗಳ (NBFC) ನಡುವೆ ಚಿನ್ನದ ಸಾಲದ ನಿಯಮಗಳು ಭಿನ್ನವಾಗಿದ್ದವು. ಇದು ಹೆಚ್ಚಾಗಿ ಗ್ರಾಹಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಸಲು, ಆರ್ ಬಿಐ “ ಚಿನ್ನದ ಸಾಲಗಳ ಮೇಲಿನ ಮಾಸ್ಟರ್ ನಿರ್ದೇಶನ, “ ಎಂಬ ಸಮಗ್ರ ಮಾರ್ಗಸೂಚಿಯನ್ನು ಜಾರಿಗೆ ತರಲು ಆರ್ ಬಿ ಐ ಸಂಸ್ಥೆಗಳಿಗೆ ಎಪ್ರಿಲ್ 1,2026ರ ವರೆಗೆ ಸಮಯ ನೀಡಿದೆ. ಈ ನಿರ್ದೇಶನ ಅಡಿಯಲ್ಲಿ ಎಲ್ಲಾ ಬ್ಯಾಂಕುಗಳು ಮತ್ತು ಎನ್ ಬಿಎಪ್ ಸಿ ಗಳು ಒಂದೇ ರೀತಿಯ ನಿಯಮಗಳನ್ನು ಪಾಲಿಸಬೇಕು.

  • ರೂ 2.5  ಲಕ್ಷದವರೆಗೆ ಸಾಲಗಳಿಗೆ ಆದಾಯ ಪುರಾವೆ ಇಲ್ಲ: ಚಿನ್ನ ದ ಸಾಲಗಳನ್ನು ಹೆಚ್ಚು ಸುಲಭವಾಗಿ ಪಡೆಯಲು, ಆರ್ ಬಿಐ ಸಣ್ಣ ಸಾಲಗಳಿಗೆ ದಾಖಲೆಗಳ ಅವಶ್ಯಕತೆಗಳನ್ನು ಸಡಿಲಿಸಿದೆ.
  • ಚಿನ್ನವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸದಿದ್ದರೆ ದಂಡ: ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ 7 ಕೆಲಸದ ದಿನಗಳಲ್ಲಿ ಬ್ಯಾಂಕುಗಳು ಅಡವಿಟ್ಟ ಚಿನ್ನವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ನಿಮಗೆ ಪ್ರತಿದಿನ ₹5,000 ದಂಡ (Penalty) ನೀಡಬೇಕಾಗುತ್ತದೆ.
  • ಪಾರದರ್ಶಕ ಚಿನ್ನದ ತೂಕ ಮತ್ತು ಶುದ್ಧತೆಯ ಪರಿಶೀಲನೆ: ಚಿನ್ನದ ಶುದ್ಧತೆ ಮತ್ತು ತೂಕವನ್ನು ಗ್ರಾಹಕರ ಮುಂದೆಯೇ ಪರಿಶೀಲಿಸಬೇಕು. ನಿವ್ವಳ ಚಿನ್ನದ ತೂಕವನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಲ್ಲುಗಳು, ಮುತ್ತುಗಳು ಅಥವಾ ವಜ್ರಗಳನ್ನು ಎಣಿಸಲಾಗುವುದಿಲ್ಲ.
  • ಬುಲೆಟ್ ಮರುಪಾವತಿ ಸಾಲಗಳಲ್ಲಿನ ಬದಲಾವಣೆಗಳು: ಈ ಸಾಲಿನಲ್ಲಿ ಚಿನ್ನದ ಸಾಲಗಳು ಗರಿಷ್ಠ12 ತಿಂಗಳ ಅವಧಿಯನ್ನು ಹೊಂದಿರಬಹುದು. ಸಾಲದ ಅವಧಿಯ ಕೊನೆಯಲ್ಲಿ ಅಸಲು ಮತ್ತು ಬಡ್ಡಿ ಎರಡನ್ನೂ ಪಾವತಿಸಬೇಕು.
  • ಬ್ಯಾಂಕುಗಳು ಮತ್ತು NBFC ಗಳಿಗೆ ಏಕರೂಪದ ನಿಯಮಗಳು: ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೆ ಒಂದೇ ರೀತಿಯ ಚಿನ್ನದ ಸಾಲ ನಿಯಮಗಳು ಅನ್ವಯಿಸುತ್ತದೆ. ಬಡ್ಡಿ ಲೆಕ್ಕಾಚಾರ, ಮೌಲ್ಯಮಾಪನ ವಿಧಾನಗಳು ಮತ್ತು ಗ್ರಾಹಕರ ಹಕ್ಕುಗಳನ್ನು ಪ್ರಮಾಣೀಕರಿಸಲಾಗುತ್ತದೆ.
  • ಸಣ್ಣ ಸಾಲಗಾರರಿಗೆ ಹೆಚ್ಚಿ ನ ಸಾಲದ ಮೊತ್ತ: ಸಾಲಗಾರರು ಚಿನ್ನದ ಮೌಲ್ಯದ 5% ವರೆಗೆ ಮಾತ್ರ ಪಡೆಯಬಹುದಿತ್ತು. ಈಗ ಸಣ್ಣ ಸಾಲಗಾರರು ಅದೇ ಪ್ರಮಾಣದ ಚಿನ್ನಕ್ಕೆ ಹೆಚ್ಚಿನ ಹಣವನ್ನು ಪಡೆಯಬಹುದು, ಇದು ಕಡಿಮೆ ಆದಾಯದ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಮುಖ ಪರಿಹಾರವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

21 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago