Advertisement
ರಾಜ್ಯ

ಗೋಲ್ಡ್ ಲೋನ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ

Share

ಭಾರತೀಯ ರಿಸರ್ವ್ ಬ್ಯಾಕ್ ದೇಶಾದ್ಯಂತ ಚಿನ್ನ ಸಾಲ ನಿಯಮಗಳನ್ನು ಸಂಪೂರ್ಣವಾಗಿ ಪ್ರಮಾಣೀಕರಿಸುವ ಪ್ರಮುಖ ಆದೇಶವನ್ನು ಹೊರಡಿಸಿದೆ. ಈ ಹಿಂದೆ, ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪೆನಿಗಳ (NBFC) ನಡುವೆ ಚಿನ್ನದ ಸಾಲದ ನಿಯಮಗಳು ಭಿನ್ನವಾಗಿದ್ದವು. ಇದು ಹೆಚ್ಚಾಗಿ ಗ್ರಾಹಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಸಲು, ಆರ್ ಬಿಐ “ ಚಿನ್ನದ ಸಾಲಗಳ ಮೇಲಿನ ಮಾಸ್ಟರ್ ನಿರ್ದೇಶನ, “ ಎಂಬ ಸಮಗ್ರ ಮಾರ್ಗಸೂಚಿಯನ್ನು ಜಾರಿಗೆ ತರಲು ಆರ್ ಬಿ ಐ ಸಂಸ್ಥೆಗಳಿಗೆ ಎಪ್ರಿಲ್ 1,2026ರ ವರೆಗೆ ಸಮಯ ನೀಡಿದೆ. ಈ ನಿರ್ದೇಶನ ಅಡಿಯಲ್ಲಿ ಎಲ್ಲಾ ಬ್ಯಾಂಕುಗಳು ಮತ್ತು ಎನ್ ಬಿಎಪ್ ಸಿ ಗಳು ಒಂದೇ ರೀತಿಯ ನಿಯಮಗಳನ್ನು ಪಾಲಿಸಬೇಕು.

  • ರೂ 2.5  ಲಕ್ಷದವರೆಗೆ ಸಾಲಗಳಿಗೆ ಆದಾಯ ಪುರಾವೆ ಇಲ್ಲ: ಚಿನ್ನ ದ ಸಾಲಗಳನ್ನು ಹೆಚ್ಚು ಸುಲಭವಾಗಿ ಪಡೆಯಲು, ಆರ್ ಬಿಐ ಸಣ್ಣ ಸಾಲಗಳಿಗೆ ದಾಖಲೆಗಳ ಅವಶ್ಯಕತೆಗಳನ್ನು ಸಡಿಲಿಸಿದೆ.
  • ಚಿನ್ನವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸದಿದ್ದರೆ ದಂಡ: ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ 7 ಕೆಲಸದ ದಿನಗಳಲ್ಲಿ ಬ್ಯಾಂಕುಗಳು ಅಡವಿಟ್ಟ ಚಿನ್ನವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ನಿಮಗೆ ಪ್ರತಿದಿನ ₹5,000 ದಂಡ (Penalty) ನೀಡಬೇಕಾಗುತ್ತದೆ.
  • ಪಾರದರ್ಶಕ ಚಿನ್ನದ ತೂಕ ಮತ್ತು ಶುದ್ಧತೆಯ ಪರಿಶೀಲನೆ: ಚಿನ್ನದ ಶುದ್ಧತೆ ಮತ್ತು ತೂಕವನ್ನು ಗ್ರಾಹಕರ ಮುಂದೆಯೇ ಪರಿಶೀಲಿಸಬೇಕು. ನಿವ್ವಳ ಚಿನ್ನದ ತೂಕವನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಲ್ಲುಗಳು, ಮುತ್ತುಗಳು ಅಥವಾ ವಜ್ರಗಳನ್ನು ಎಣಿಸಲಾಗುವುದಿಲ್ಲ.
  • ಬುಲೆಟ್ ಮರುಪಾವತಿ ಸಾಲಗಳಲ್ಲಿನ ಬದಲಾವಣೆಗಳು: ಈ ಸಾಲಿನಲ್ಲಿ ಚಿನ್ನದ ಸಾಲಗಳು ಗರಿಷ್ಠ12 ತಿಂಗಳ ಅವಧಿಯನ್ನು ಹೊಂದಿರಬಹುದು. ಸಾಲದ ಅವಧಿಯ ಕೊನೆಯಲ್ಲಿ ಅಸಲು ಮತ್ತು ಬಡ್ಡಿ ಎರಡನ್ನೂ ಪಾವತಿಸಬೇಕು.
  • ಬ್ಯಾಂಕುಗಳು ಮತ್ತು NBFC ಗಳಿಗೆ ಏಕರೂಪದ ನಿಯಮಗಳು: ಎಲ್ಲಾ ಬ್ಯಾಂಕುಗಳು ಮತ್ತು NBFC ಗಳಿಗೆ ಒಂದೇ ರೀತಿಯ ಚಿನ್ನದ ಸಾಲ ನಿಯಮಗಳು ಅನ್ವಯಿಸುತ್ತದೆ. ಬಡ್ಡಿ ಲೆಕ್ಕಾಚಾರ, ಮೌಲ್ಯಮಾಪನ ವಿಧಾನಗಳು ಮತ್ತು ಗ್ರಾಹಕರ ಹಕ್ಕುಗಳನ್ನು ಪ್ರಮಾಣೀಕರಿಸಲಾಗುತ್ತದೆ.
  • ಸಣ್ಣ ಸಾಲಗಾರರಿಗೆ ಹೆಚ್ಚಿ ನ ಸಾಲದ ಮೊತ್ತ: ಸಾಲಗಾರರು ಚಿನ್ನದ ಮೌಲ್ಯದ 5% ವರೆಗೆ ಮಾತ್ರ ಪಡೆಯಬಹುದಿತ್ತು. ಈಗ ಸಣ್ಣ ಸಾಲಗಾರರು ಅದೇ ಪ್ರಮಾಣದ ಚಿನ್ನಕ್ಕೆ ಹೆಚ್ಚಿನ ಹಣವನ್ನು ಪಡೆಯಬಹುದು, ಇದು ಕಡಿಮೆ ಆದಾಯದ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಮುಖ ಪರಿಹಾರವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

3 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

5 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

6 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

9 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

10 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

13 hours ago