Advertisement
MIRROR FOCUS

ಭೂಮಂಡಲದಲ್ಲಿ ʻಆಮ್ಲಜನಕʼ ಕೊರತೆ | ವಿಜ್ಞಾನಿಗಳ ಹೊಸ ಸಂಶೋಧನೆಯಿಂದ ಬಹಿರಂಗ..!

Share

ಭೂಮಿ(Earth) ಮೇಲೆ ಅಮ್ಲಜನಕ(Oxygen) ಇದ್ರೆ ಮಾತ್ರ ಮನುಷ್ಯ(Human being), ಪ್ರಾಣಿ(Animals), ಮರ ಗಿಡಗಳು(Plants) ಬದುಕುಳಿಯಲು ಸಾಧ್ಯ. ಅಮ್ಲಜನಕ ಇಲ್ಲದ ಭೂಲೋಕವನ್ನು ಊಹಿಸಲು ಅಸಾಧ್ಯ.  ಭೂ ಮಂಡಲದಲ್ಲಿ ಅಮ್ಲಜನಕ ಇಲ್ಲದೆ ಹೋದರೆ ಅಸ್ತಿತ್ವವೇ ಇರೋದಿಲ್ಲ. ಭೂಮಿಯ ವಾತಾವರಣದ ಸುಮಾರು 21 ಪ್ರತಿಶತದಷ್ಟು ಆಮ್ಲಜನಕವಿದೆ. ಈ ಅನಿಲವು ಅಸಂಖ್ಯಾತ ಜೀವಿಗಳ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹವು(Planet) ರೂಪುಗೊಂಡಾಗ, ಪರಿಸ್ಥಿತಿಗಳು ತುಂಬಾ ವಿಭಿನ್ನವಾಗಿದ್ದವು. ಭೂಮಿಯ ವಾತಾವರಣವು ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ನೀರಿನ ಆವಿಯ ಪ್ರಾಬಲ್ಯ ಹೊಂದಿತ್ತು. ಅದೇ ರೀತಿ ಭವಿಷ್ಯದಲ್ಲಿ ಭೂಮಿಯ ವಾತಾವರಣವು ಮತ್ತೆ ಆಮ್ಲಜನಕದ ಕೊರತೆ(oxygen deficiency) ಎದುರಿಸಲಿದೆ. ವಾತಾವರಣ ಬದಲಾಗುತ್ತದೆ(climate change) ಎಂದು ವಿಜ್ಞಾನಿಗಳು(Scientists) ಹೇಳಿದ್ದಾರೆ.

ಶೀಘ್ರದಲ್ಲೇ ಸಂಭವಿಸಲಿದೆ ದೊಡ್ಡ ಬದಲಾವಣೆ !:  ಈ ಬದಲಾವಣೆಯು ಭೂಮಿಯನ್ನು ಸುಮಾರು 2.4 ಶತಕೋಟಿ ವರ್ಷಗಳ ಹಿಂದೆ ಗ್ರೇಟ್ ಆಕ್ಸಿಡೇಶನ್ ಈವೆಂಟ್ (GOE) ಎಂದು ಕರೆಯಲಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಅಧ್ಯಯನವು ಹೇಳುತ್ತದೆ. ವಿಜ್ಞಾನಿಗಳು ಸೌರವ್ಯೂಹದ ಹೊರಗೆ ವಾಸಯೋಗ್ಯ ಗ್ರಹಗಳನ್ನು ಹುಡುಕುತ್ತಿರುವ ಸಂದರ್ಭದಲ್ಲೇ ಈ ಆಘಾತಕಾರಿ ಸಂಗತಿ ಬಯಲಾಗಿದೆ. ವಾತಾವರಣದ ಆಮ್ಲಜನಕವು ವಾಸಯೋಗ್ಯ ಪ್ರಪಂಚದ ಶಾಶ್ವತ ಲಕ್ಷಣವಾಗಿರುವುದು ಅಸಾಧ್ಯ ಎಂಬುದು ಸಂಶೋಧನೆಯ ಸಾರಾಂಶ.

ಜಾರ್ಜಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಈ ಸಂಶೋಧನೆಯ ವರದಿಯನ್ನು ಬಿಡುಗಡೆ ಮಾಡಿದೆ. ಆಮ್ಲಜನಕದ ಕುಸಿತವು ತುಂಬಾ ತೀವ್ರವಾಗಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈಗ ಇರುವುದಕ್ಕಿಂತ ಒಂದು ಮಿಲಿಯನ್ ಪಟ್ಟು ಕಡಿಮೆ ಆಮ್ಲಜನಕ ಭವಿಷ್ಯದಲ್ಲಿ ಉಳಿಯಲಿದೆಯಂತೆ. ವಿಜ್ಞಾನಿಗಳ ಪ್ರಕಾರ ವಾತಾವರಣದ ನಿರ್ಜಲೀಕರಣದ ಸೂಚನೆ ಇದು.

ಸಂಶೋಧಕರು ಭೂಮಿಯ ವಾತಾವರಣದ ವಿವರವಾದ ಮಾದರಿಗಳನ್ನು ರಚಿಸಿದ್ದಾರೆ. ಸೂರ್ಯನ ಪ್ರಕಾಶಮಾನದಲ್ಲಿನ ಬದಲಾವಣೆ ಮತ್ತು ಇಂಗಾಲದ ಡೈಆಕ್ಸೈಡ್ ಮಟ್ಟದಲ್ಲಿನ ಕುಸಿತವನ್ನು ವಿಶ್ಲೇಷಿಸಿದ್ದಾರೆ. ಅಷ್ಟೇ ಅಲ್ಲ ಸಸ್ಯಗಳ ಕೊರತೆಯಿಂದಲೇ ಆಮ್ಲಜನಕವೂ ಕುಸಿತವಾಗುತ್ತಿದೆ ಎಂದು ಹೇಳಲಾಗ್ತಿದೆ.

– ಅಂತರ್ಜಾಲ ಮಾಹಿತಿ(ದುನಿಯಾ ಕನ್ನಡ)

About 21 percent of Earth’s atmosphere is oxygen. This gas plays an important role in the survival of countless organisms. But when the planet formed about 4.5 billion years ago, conditions were very different. Earth’s atmosphere was dominated by carbon dioxide, methane, and water vapor. Similarly, in the future the earth’s atmosphere will again face oxygen deficiency. Scientists say the climate will change.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

12 hours ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

19 hours ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

19 hours ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago