Advertisement
MIRROR FOCUS

ಭೂಮಂಡಲದಲ್ಲಿ ʻಆಮ್ಲಜನಕʼ ಕೊರತೆ | ವಿಜ್ಞಾನಿಗಳ ಹೊಸ ಸಂಶೋಧನೆಯಿಂದ ಬಹಿರಂಗ..!

Share

ಭೂಮಿ(Earth) ಮೇಲೆ ಅಮ್ಲಜನಕ(Oxygen) ಇದ್ರೆ ಮಾತ್ರ ಮನುಷ್ಯ(Human being), ಪ್ರಾಣಿ(Animals), ಮರ ಗಿಡಗಳು(Plants) ಬದುಕುಳಿಯಲು ಸಾಧ್ಯ. ಅಮ್ಲಜನಕ ಇಲ್ಲದ ಭೂಲೋಕವನ್ನು ಊಹಿಸಲು ಅಸಾಧ್ಯ.  ಭೂ ಮಂಡಲದಲ್ಲಿ ಅಮ್ಲಜನಕ ಇಲ್ಲದೆ ಹೋದರೆ ಅಸ್ತಿತ್ವವೇ ಇರೋದಿಲ್ಲ. ಭೂಮಿಯ ವಾತಾವರಣದ ಸುಮಾರು 21 ಪ್ರತಿಶತದಷ್ಟು ಆಮ್ಲಜನಕವಿದೆ. ಈ ಅನಿಲವು ಅಸಂಖ್ಯಾತ ಜೀವಿಗಳ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಗ್ರಹವು(Planet) ರೂಪುಗೊಂಡಾಗ, ಪರಿಸ್ಥಿತಿಗಳು ತುಂಬಾ ವಿಭಿನ್ನವಾಗಿದ್ದವು. ಭೂಮಿಯ ವಾತಾವರಣವು ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ನೀರಿನ ಆವಿಯ ಪ್ರಾಬಲ್ಯ ಹೊಂದಿತ್ತು. ಅದೇ ರೀತಿ ಭವಿಷ್ಯದಲ್ಲಿ ಭೂಮಿಯ ವಾತಾವರಣವು ಮತ್ತೆ ಆಮ್ಲಜನಕದ ಕೊರತೆ(oxygen deficiency) ಎದುರಿಸಲಿದೆ. ವಾತಾವರಣ ಬದಲಾಗುತ್ತದೆ(climate change) ಎಂದು ವಿಜ್ಞಾನಿಗಳು(Scientists) ಹೇಳಿದ್ದಾರೆ.

ಶೀಘ್ರದಲ್ಲೇ ಸಂಭವಿಸಲಿದೆ ದೊಡ್ಡ ಬದಲಾವಣೆ !:  ಈ ಬದಲಾವಣೆಯು ಭೂಮಿಯನ್ನು ಸುಮಾರು 2.4 ಶತಕೋಟಿ ವರ್ಷಗಳ ಹಿಂದೆ ಗ್ರೇಟ್ ಆಕ್ಸಿಡೇಶನ್ ಈವೆಂಟ್ (GOE) ಎಂದು ಕರೆಯಲಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಅಧ್ಯಯನವು ಹೇಳುತ್ತದೆ. ವಿಜ್ಞಾನಿಗಳು ಸೌರವ್ಯೂಹದ ಹೊರಗೆ ವಾಸಯೋಗ್ಯ ಗ್ರಹಗಳನ್ನು ಹುಡುಕುತ್ತಿರುವ ಸಂದರ್ಭದಲ್ಲೇ ಈ ಆಘಾತಕಾರಿ ಸಂಗತಿ ಬಯಲಾಗಿದೆ. ವಾತಾವರಣದ ಆಮ್ಲಜನಕವು ವಾಸಯೋಗ್ಯ ಪ್ರಪಂಚದ ಶಾಶ್ವತ ಲಕ್ಷಣವಾಗಿರುವುದು ಅಸಾಧ್ಯ ಎಂಬುದು ಸಂಶೋಧನೆಯ ಸಾರಾಂಶ.

ಜಾರ್ಜಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಈ ಸಂಶೋಧನೆಯ ವರದಿಯನ್ನು ಬಿಡುಗಡೆ ಮಾಡಿದೆ. ಆಮ್ಲಜನಕದ ಕುಸಿತವು ತುಂಬಾ ತೀವ್ರವಾಗಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈಗ ಇರುವುದಕ್ಕಿಂತ ಒಂದು ಮಿಲಿಯನ್ ಪಟ್ಟು ಕಡಿಮೆ ಆಮ್ಲಜನಕ ಭವಿಷ್ಯದಲ್ಲಿ ಉಳಿಯಲಿದೆಯಂತೆ. ವಿಜ್ಞಾನಿಗಳ ಪ್ರಕಾರ ವಾತಾವರಣದ ನಿರ್ಜಲೀಕರಣದ ಸೂಚನೆ ಇದು.

ಸಂಶೋಧಕರು ಭೂಮಿಯ ವಾತಾವರಣದ ವಿವರವಾದ ಮಾದರಿಗಳನ್ನು ರಚಿಸಿದ್ದಾರೆ. ಸೂರ್ಯನ ಪ್ರಕಾಶಮಾನದಲ್ಲಿನ ಬದಲಾವಣೆ ಮತ್ತು ಇಂಗಾಲದ ಡೈಆಕ್ಸೈಡ್ ಮಟ್ಟದಲ್ಲಿನ ಕುಸಿತವನ್ನು ವಿಶ್ಲೇಷಿಸಿದ್ದಾರೆ. ಅಷ್ಟೇ ಅಲ್ಲ ಸಸ್ಯಗಳ ಕೊರತೆಯಿಂದಲೇ ಆಮ್ಲಜನಕವೂ ಕುಸಿತವಾಗುತ್ತಿದೆ ಎಂದು ಹೇಳಲಾಗ್ತಿದೆ.

– ಅಂತರ್ಜಾಲ ಮಾಹಿತಿ(ದುನಿಯಾ ಕನ್ನಡ)

About 21 percent of Earth’s atmosphere is oxygen. This gas plays an important role in the survival of countless organisms. But when the planet formed about 4.5 billion years ago, conditions were very different. Earth’s atmosphere was dominated by carbon dioxide, methane, and water vapor. Similarly, in the future the earth’s atmosphere will again face oxygen deficiency. Scientists say the climate will change.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 hour ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

6 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

7 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

9 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

9 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

23 hours ago