Advertisement
ಪ್ರಮುಖ

#HimachalLandslide | 55 ದಿನಗಳಲ್ಲಿ 113 ಭೂಕುಸಿತಗಳು | ಹಿಮಾಚಲ ಪ್ರದೇಶವನ್ನು ಅಸ್ಥಿರಗೊಳಿಸಲು ಕಾರಣವೇನು? | ತಜ್ಞರ ತಂಡ ಆರಂಭಿಸಿದ ಅಧ್ಯಯನ |

Share

ಪ್ರತಿ ವರ್ಷದಂತೆ ಈ ಬಾರಿಯೂ ಹಿಮಾಚಲ ಪ್ರದೇಶ #HimachalPradesh ಮತ್ತು ಉತ್ತರಾಖಂಡದಲ್ಲಿ #Uttarakhand ಭಾರೀ ಮಳೆಯಿದಾಗಿ, ಭೂಕುಸಿತದ ಘಟನೆಗಳು ಹೆಚ್ಚಾಗುತ್ತಿವೆ. ಎರಡೂ ರಾಜ್ಯಗಳಲ್ಲಿ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ದೇಶದ ಒಟ್ಟು ಭೂಕುಸಿತ ಪ್ರಕರಣಗಳಲ್ಲಿ ವಾಯುವ್ಯ ಹಿಮಾಲಯದಲ್ಲಿ ಶೇಕಡಾ 67 ರ ಸಮೀಪದಲ್ಲಿದೆ.55 ದಿನಗಳಲ್ಲಿ 113 ಭೂಕುಸಿತಗಳ ಬಗ್ಗೆ ದಾಖಲೆ  ಹೇಳುತ್ತದೆ. ಇದು ಪ್ರಮುಖ ಹೆಚ್ಚಳವಾಗಿದೆ.ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಇತ್ತೀಚೆಗೆ 74 ಮಂದಿ ಸಾವನ್ನಪ್ಪಿದ್ದಾರೆ.

Advertisement
Advertisement

ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಸಂಭವಿಸುತ್ತಿರುವ ಭೂಕುಸಿತದ #Landslide ಘಟನೆಗಳ ಬಗ್ಗೆ ತಜ್ಞರು ಚಿಂತಿತರಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಹಿಮಾಲಯದಲ್ಲಿ ಅವೈಜ್ಞಾನಿಕ ನಿರ್ಮಾಣ, ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶ ಮತ್ತು ನದಿಗಳ ಬಳಿ ನೀರಿನ ಹರಿವನ್ನು ತಡೆಯುವ ರಚನೆಗಳು ಭೂಕುಸಿತಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಜ್ಞರು ಹೇಳುತ್ತಾರೆ. ಭೂವಿಜ್ಞಾನಿ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್, ಅವರ ಪ್ರಕಾರ ರಸ್ತೆ, ಸುರಂಗಗಳ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಬೆಟ್ಟದ ಇಳಿಜಾರುಗಳನ್ನು ವ್ಯಾಪಕವಾಗಿ ಕತ್ತರಿಸುವುದು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಬ್ಲಾಸ್ಟಿಂಗ್ ಹೆಚ್ಚಳವು ಭೂಕುಸಿತಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Advertisement

ಹಿಮಾಚಲ ಶಿಮ್ಲಾದಲ್ಲಿ ಭೂಕುಸಿತಕ್ಕೆ ಕಾರಣಗಳ ಅಧ್ಯಯನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ಹಿಮಾಚಲ ಪ್ರದೇಶ ಕೌನ್ಸಿಲ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎನ್ವಿರಾನ್ಮೆಂಟ್ ನ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ.ಎಸ್.ಎಸ್.ರಾಂಧವಾ ಅವರನ್ನು ಈ ಸಮಿತಿಯ ಸಂಯೋಜಕರನ್ನಾಗಿ ನೇಮಿಸಲಾಗಿದೆ.‌ಸಮಿತಿಯ ಇತರ ಸದಸ್ಯರಲ್ಲಿ ರಾಜ್ಯದ ಭೂವಿಜ್ಞಾನಿ ಪುನೀತ್ ಗುಲೇರಿಯಾ, ಲೋಕೋಪಯೋಗಿ, ಜಲ ಶಕ್ತಿ ಇಲಾಖೆ, ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್ ಪ್ರತಿನಿಧಿಗಳು ಮತ್ತು ಶಿಮ್ಲಾ ಜಿಲ್ಲಾಧಿಕಾರಿ ಕಚೇರಿಯ ಪ್ರತಿನಿಧಿ ಸೇರಿದ್ದಾರೆ.ಇವರ ನೇತೃತ್ವದಲ್ಲಿ ತಂಡವು ಅಧ್ಯಯನ ನಡೆಸಿದರೆ, ಇನ್ನೂ ಕೆಲವು ತಂಡ ಅಧ್ಯಯನ ಆರಂಭಿಸಿದೆ. ಸಮಿತಿಯ ಅಧ್ಯಯನವು ಈ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಅಂಶಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಅರಣ್ಯನಾಶ ಮತ್ತು ಭೂಪ್ರದೇಶದ ಅತಿಯಾದ ಕಾಮಗಾರಿಗಳು, ಮಾನವ ನಿರ್ಮಿತ ಅಂಶಗಳು ಪ್ರಮುಖ ಕಾರಣಗಳೆಂದು  ಶಂಕಿಸಲಾಗಿದೆ.ಭೂವಿಜ್ಞಾನ ತಜ್ಞ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್ ಅವರ ಪ್ರಕಾರ ನಿರ್ಮಾಣ, ರಸ್ತೆ ವಿಸ್ತರಣೆ, ಸುರಂಗಗಳನ್ನು ಸ್ಫೋಟಿಸುವ ಮತ್ತು ಜಲವಿದ್ಯುತ್ ಯೋಜನೆಗಳಿಗಾಗಿ ಬೆಟ್ಟಗಳನ್ನು ಕತ್ತರಿಸುವುದು ಭೂಕುಸಿತಕ್ಕೆ ಕಾರಣವಾಗಿದೆ.

ತಜ್ಞರ ಪ್ರಕಾರ, ತಪ್ಪಲಿನಲ್ಲಿನ ಬಂಡೆಗಳ ಸವೆತ ಮತ್ತು ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಹಿಮಾಚಲದ ಇಳಿಜಾರುಗಳು ಭೂಕುಸಿತಕ್ಕೆ ಹೆಚ್ಚು ಗುರಿಯಾಗುತ್ತವೆ ಮತ್ತು ಹೆಚ್ಚಿನ ತೀವ್ರತೆಯ ಮಳೆಯು ರಾಜ್ಯದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಇಲ್ಲಿಯವರೆಗೆ 742 ಮಿ.ಮೀ ಮಳೆಯಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಾನ್ಸೂನ್ ಪ್ರಾರಂಭವಾದ 55 ದಿನಗಳಲ್ಲಿ ಹಿಮಾಚಲದಲ್ಲಿ 113 ಭೂಕುಸಿತ ಘಟನೆಗಳು ಸಂಭವಿಸಿವೆ.

Advertisement

ಭೂಕುಸಿತದ ಘಟನೆಗಳು ವರ್ಷದಲ್ಲಿ 6 ಪಟ್ಟು ಹೆಚ್ಚಳಈ ಘಟನೆಗಳಿಂದ ಲೋಕೋಪಯೋಗಿ ಇಲಾಖೆ  2,491 ಕೋಟಿ ರೂಪಾಯಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 1,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ನಷ್ಟದ ಬಗ್ಗೆ ಹೇಳುವುದಾದರೆ, ರಾಜ್ಯದಲ್ಲಿ 10,000 ಕೋಟಿ ನಷ್ಟವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, 2022 ರಲ್ಲಿ ಪ್ರಮುಖ ಭೂಕುಸಿತಗಳ ಸಂಭವವು 6 ಪಟ್ಟು ಹೆಚ್ಚಾಗಿದೆ. 2020 ರಲ್ಲಿ 16 ಕ್ಕೆ ಹೋಲಿಸಿದರೆ 2022 ರಲ್ಲಿ 117 ಪ್ರಮುಖ ಭೂಕುಸಿತ ಘಟನೆಗಳು ಸಂಭವಿಸಿವೆ.  ಈಗಾಗಲೇ ಹಿಮಾಚಲ ರಾಜ್ಯದಲ್ಲಿ 38,000 ಚದರ ಕಿ.ಮೀ ಪ್ರದೇಶವು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು  ಬಹಿರಂಗಪಡಿಸಿದೆ. ಈ ಪ್ರದೇಶದಲ್ಲಿ, ಸುಮಾರು 7,800 ಚದರ ಕಿಮೀ ಹೆಚ್ಚಿನ ಅಪಾಯದಲ್ಲಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಶರ್ಮಾ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Source : Digital Media

Advertisement

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

6 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

7 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

7 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

8 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?

ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…

8 hours ago