Advertisement
ಸುದ್ದಿಗಳು

ಪರಿಸರೋತ್ಸವದೊಂದಿಗೆ ಬಿಡುಗಡೆಯಾದ “Echo…. The reflection of reality” ಕಿರುಚಿತ್ರ |

Share

“ಇಕೋ.. ನೈಜತೆಯ ಪ್ರತಿಫಲನ”(Echo…. The reflection of reality) ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ನಡೆಯಿತು.

ರಂಗಚೇತನ ಕಾಸರಗೋಡು ಮತ್ತು ರಿದಮ್ ಮೀಡಿಯಾ ಕ್ರೀಯೇಷನ್ ಅವರ ಗಡಿನಾಡ ಖ್ಯಾತ ಯುವ ರಂಗಕರ್ಮಿ ಸದಾಶಿವ ಬಾಲಮಿತ್ರ ಅವರ ಚಿತ್ರಕಥೆ, ನಿರ್ದೇಶನ ,  ಮೆಲ್ವಿನ್ ಮಾಸ್ಟರ್ ಪೆರ್ಮುದೆ ಹಾಗೂ  ರಂಜಿತ್ ರಮಣ ಶರ್ಮರವರ ಕ್ಯಾಮರಾ ,ಎಡಿಟಿಂಗ್, ಡಬ್ಬಿಂಗ್ ಮತ್ತು ಸಂಗೀತದೊಂದಿಗೆ , ಖ್ಯಾತ ಚಲನಚಿತ್ರ ನಟ ಬಾಲಕೃಷ್ಣ ಅಡೂರು , ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳ ಐವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳು ಹಾಗೂ ರಂಗಚೇತನ ಕಾಸರಗೋಡು ಇದರ ಸದ್ಯರು ಮನೋಜ್ಞ ಅಭಿನಯ ನೀಡಿದ ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಿತು.

ವಿಶ್ವ ಪರಿಸರ ದಿನದಂದು ” ಪರಿಸರೋತ್ಸವ ದೊಂದಿಗೆ ಪೆರ್ಮುದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ “ಶಾಲೆಗೊಂದು ವಿದ್ಯಾವನ”  ಮುರಳಿ ಮಾದವ ಪೆಲ್ತಾಜೆ ಅವರಿಂದ “ಒಂದೇ ಒಂದು ಭೂಮಿ,” ಪರಿಸರ ಜಾಗೃತಿ ಕಾರ್ಯಾಗಾರ, ಅಪೂರ್ವ ಗಿಡಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಗಳು ಗಮನಸೆಳೆಯಿತು.

ನಂತರ ನಡೆದ “ಇಕ್ಕೋ…” ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಲಿಮ್ಕಾ ವಿಶ್ವ ದಾಖಲೆಯ ಯೋಗ ರತ್ನ ಕು.ಅಭಿಜ್ಞಾನ ಹರೀಶ್ ಮತ್ತು  yoga for kid,s kasaragod ತಂಡದ ಯೋಗ ನೃತ್ಯ, ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯೆಯರಾದ ತನ್ವಿ.ಕೆ.ಟಿ.ಮತ್ತು ಇಷಿಕಾ.ಕೆ.ಟಿ, ನೃತ್ಯ ವಿದೂಷಿ ವಿದ್ಯಾಲಕ್ಷ್ಮಿ ಯವರ ಶಿಷ್ಯರಾದ ಚೇತನ್ ಎಡಕ್ಕಾನ ಮತ್ತು ನೂತನ್ ಎಡಕ್ಕಾನರವರ ಭರತನಾಟ್ಯ, ಅರಸು ಡ್ಯಾನ್ಸ್ ಅಕಾಡೆಮಿ ಮಂಜೇಶ್ವರ ತಂಡದ ನೃತ್ಯ ರೂಪಕಗಳು ಸಾಂಸ್ಕೃತಿಕ ಸಂಭ್ರಮವನ್ನು ನೀಡಿತು.

ಸಂಜೆ ಚಲನಚಿತ್ರ ನಟ  ಬಾಲಕೃಷ್ಣ ಮಾಸ್ಟರ್ ಅಡೂರು ಅವರ ಅದ್ಯಕ್ಷತೆ ಯಲ್ಲಿ ನಡೆದ ಪರಿಸರ ಕಾಳಜಿಯ ಇಕ್ಕೋ ಕಿರುಚಿತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ  ದಿನೇಶ್. ವಿ ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಶಿವ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ  ಚನಿಯಪ್ಪ ನಾಯಕ್ ,ಮಂಜೇಶ್ವರ ಬಿ.ಆರ್.ಸಿ ಯ ಬಿ ಪಿ.ಸಿ  ವಿಜಯಕುಮಾರ್ ಪಾವಳ ಮೊದಲಾದವರು ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳು ರಂಗಚೇತನ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತೆ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು.ಕಾರ್ಯದರ್ಶಿ ಅಶೋಕ ಕುಮಾರ್ ಕೊಡ್ಲಮೊಗೆರು ಸ್ವಾಗತಿಸಿ ,ಸದಾಶಿವ ಬಾಲಮಿತ್ರ ವಂದಿಸಿದರು. ಕಾರ್ಯಕ್ರಮ ದಲ್ಲಿ ಕಿರುಚಿತ್ರ ತಂಡದ ಎಲ್ಲಾ ಸದಸ್ಯರನ್ನು ರಂಗಚೇತನ ಕಾಸರಗೋಡು ವತಿಯಿಂದ ಗೌರವಿಸಲಾಯಿತು. ಬಳಿಕ ಕಿರುಚಿತ್ರದ ಪ್ರದರ್ಶನ ನಡೆಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

9 hours ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

1 day ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

3 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

3 days ago