Advertisement
ಸುದ್ದಿಗಳು

ಪರಿಸರೋತ್ಸವದೊಂದಿಗೆ ಬಿಡುಗಡೆಯಾದ “Echo…. The reflection of reality” ಕಿರುಚಿತ್ರ |

Share

“ಇಕೋ.. ನೈಜತೆಯ ಪ್ರತಿಫಲನ”(Echo…. The reflection of reality) ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ನಡೆಯಿತು.

ರಂಗಚೇತನ ಕಾಸರಗೋಡು ಮತ್ತು ರಿದಮ್ ಮೀಡಿಯಾ ಕ್ರೀಯೇಷನ್ ಅವರ ಗಡಿನಾಡ ಖ್ಯಾತ ಯುವ ರಂಗಕರ್ಮಿ ಸದಾಶಿವ ಬಾಲಮಿತ್ರ ಅವರ ಚಿತ್ರಕಥೆ, ನಿರ್ದೇಶನ ,  ಮೆಲ್ವಿನ್ ಮಾಸ್ಟರ್ ಪೆರ್ಮುದೆ ಹಾಗೂ  ರಂಜಿತ್ ರಮಣ ಶರ್ಮರವರ ಕ್ಯಾಮರಾ ,ಎಡಿಟಿಂಗ್, ಡಬ್ಬಿಂಗ್ ಮತ್ತು ಸಂಗೀತದೊಂದಿಗೆ , ಖ್ಯಾತ ಚಲನಚಿತ್ರ ನಟ ಬಾಲಕೃಷ್ಣ ಅಡೂರು , ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳ ಐವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳು ಹಾಗೂ ರಂಗಚೇತನ ಕಾಸರಗೋಡು ಇದರ ಸದ್ಯರು ಮನೋಜ್ಞ ಅಭಿನಯ ನೀಡಿದ ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಿತು.

ವಿಶ್ವ ಪರಿಸರ ದಿನದಂದು ” ಪರಿಸರೋತ್ಸವ ದೊಂದಿಗೆ ಪೆರ್ಮುದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ “ಶಾಲೆಗೊಂದು ವಿದ್ಯಾವನ”  ಮುರಳಿ ಮಾದವ ಪೆಲ್ತಾಜೆ ಅವರಿಂದ “ಒಂದೇ ಒಂದು ಭೂಮಿ,” ಪರಿಸರ ಜಾಗೃತಿ ಕಾರ್ಯಾಗಾರ, ಅಪೂರ್ವ ಗಿಡಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಗಳು ಗಮನಸೆಳೆಯಿತು.

ನಂತರ ನಡೆದ “ಇಕ್ಕೋ…” ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಲಿಮ್ಕಾ ವಿಶ್ವ ದಾಖಲೆಯ ಯೋಗ ರತ್ನ ಕು.ಅಭಿಜ್ಞಾನ ಹರೀಶ್ ಮತ್ತು  yoga for kid,s kasaragod ತಂಡದ ಯೋಗ ನೃತ್ಯ, ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯೆಯರಾದ ತನ್ವಿ.ಕೆ.ಟಿ.ಮತ್ತು ಇಷಿಕಾ.ಕೆ.ಟಿ, ನೃತ್ಯ ವಿದೂಷಿ ವಿದ್ಯಾಲಕ್ಷ್ಮಿ ಯವರ ಶಿಷ್ಯರಾದ ಚೇತನ್ ಎಡಕ್ಕಾನ ಮತ್ತು ನೂತನ್ ಎಡಕ್ಕಾನರವರ ಭರತನಾಟ್ಯ, ಅರಸು ಡ್ಯಾನ್ಸ್ ಅಕಾಡೆಮಿ ಮಂಜೇಶ್ವರ ತಂಡದ ನೃತ್ಯ ರೂಪಕಗಳು ಸಾಂಸ್ಕೃತಿಕ ಸಂಭ್ರಮವನ್ನು ನೀಡಿತು.

ಸಂಜೆ ಚಲನಚಿತ್ರ ನಟ  ಬಾಲಕೃಷ್ಣ ಮಾಸ್ಟರ್ ಅಡೂರು ಅವರ ಅದ್ಯಕ್ಷತೆ ಯಲ್ಲಿ ನಡೆದ ಪರಿಸರ ಕಾಳಜಿಯ ಇಕ್ಕೋ ಕಿರುಚಿತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ  ದಿನೇಶ್. ವಿ ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಶಿವ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ  ಚನಿಯಪ್ಪ ನಾಯಕ್ ,ಮಂಜೇಶ್ವರ ಬಿ.ಆರ್.ಸಿ ಯ ಬಿ ಪಿ.ಸಿ  ವಿಜಯಕುಮಾರ್ ಪಾವಳ ಮೊದಲಾದವರು ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳು ರಂಗಚೇತನ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತೆ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು.ಕಾರ್ಯದರ್ಶಿ ಅಶೋಕ ಕುಮಾರ್ ಕೊಡ್ಲಮೊಗೆರು ಸ್ವಾಗತಿಸಿ ,ಸದಾಶಿವ ಬಾಲಮಿತ್ರ ವಂದಿಸಿದರು. ಕಾರ್ಯಕ್ರಮ ದಲ್ಲಿ ಕಿರುಚಿತ್ರ ತಂಡದ ಎಲ್ಲಾ ಸದಸ್ಯರನ್ನು ರಂಗಚೇತನ ಕಾಸರಗೋಡು ವತಿಯಿಂದ ಗೌರವಿಸಲಾಯಿತು. ಬಳಿಕ ಕಿರುಚಿತ್ರದ ಪ್ರದರ್ಶನ ನಡೆಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

2 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

5 hours ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

11 hours ago

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

17 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

18 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

1 day ago