ಮುಳಿಯ ಕೇಶವ ಭಟ್
ಭಾರತೀಯ ರಬ್ಬರ್ ಮಂಡಳಿ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಮುಳಿಯ ಕೇಶವ ಭಟ್ ಭಾರತ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ರಾಜ್ಯದಿಂದ ಇಬ್ಬರು ಈ ಮಂಡಳಿಯಲ್ಲಿ ಇದ್ದಾರೆ. ಸಂಸದ ನಳಿನ್ ಕುಮಾರ್ ಕೂಡಾ ಈ ಮಂಡಳಿ ಸದಸ್ಯರಾಗಿದ್ದಾರೆ.
ಭಾರತೀಯ ರಬ್ಬರ್ ಮಂಡಳಿಯು ರಬ್ಬರ್ ಬೆಳೆಗಾರರ ಹಿತ ಹಾಗೂ ರಬ್ಬರ್ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ಪ್ರತಿಷ್ಠಿತ ಮಂಡಳಿಗಳಲ್ಲಿ ಒಂದಾಗಿರುವ ರಬ್ಬರ್ ಮಂಡಳಿಯು, ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಹಾಗೂ ರಬ್ಬರ್ ಸಂಸ್ಥೆಗಳು ಮತ್ತು ರಬ್ಬರ್ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತದೆ. ವಾಣಿಜ್ಯ ಇಲಾಖೆಯ ಅಡಿಯಲ್ಲಿ ಬರುವ ಈ ಮಂಡಳಿಯು ರಬ್ಬರ್ ಉದ್ಯಮಗಳಿಗೆ ರಬ್ಬರ್ ಪೂರೈಕೆ ಹಾಗೂ ರಬ್ಬರ್ ಬಳಕೆಯ ಕಡೆಗೂ ಆದ್ಯತೆ ನೀಡುತ್ತದೆ. ಈ ಸಂಸ್ಥೆಗೆ ರಬ್ಬರ್ ಬೆಳೆಗಾರರ ಪರವಾಗಿ ಮುಳಿಯ ಕೇಶವ ಭಟ್ ಅವರನ್ನು ಭಾರತ ಸರ್ಕಾರವು ಮುಂದಿನ ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿದೆ. ಮುಳಿಯ ಕೇಶವ ಭಟ್ ಅವರು 10 ವರ್ಷಗಳಿಂದ ಗುತ್ತಿಗಾರು ರಬ್ಬರ್ ಸಹಕಾರಿ ಸಂಘದ ನಿರ್ದೇಶಕರಾಗಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
ಈ ಮಂಡಳಿಯಲ್ಲಿ 16 ಜನ ಸದಸ್ಯರು ಇದ್ದಾರೆ. ವಿವಿಧ ರಾಜ್ಯಗಳ ಐಎಎಸ್ ಅಧಿಕಾರಿಗಳು, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಇತರ ರಾಜ್ಯದ ಸಂಸದರು ಹಾಗೂ ತೋಟಗಾರಿಕಾ ಕಮಿಶನರ್, ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖರು ಇದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…