Advertisement
MIRROR FOCUS

ಅಡಿಕೆ ಬೆಳೆಗಾರರಿಗೆ ಮಾಹಿತಿ…| ಅಡಿಕೆ ಹಾಳಾಗದಂತೆ ಮಾತ್ರೆ ಹಾಕಬೇಡಿ | ಪಿಂಗಾರ ಸಂಸ್ಥೆ ಮಾಡಿರುವ ಅಧ್ಯಯನ ಇಲ್ಲಿದೆ.. |

Share

ಅಡಿಕೆ ಹಾಳಾಗದಂತೆ ದಾಸ್ತಾನು ಮಾಡುವುದು ಹೇಗೆ? ಈ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಇರುವ ಬಹುವಾದ ಚರ್ಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಪರಿಹಾರವೊಂದನ್ನು ಕಂಡುಕೊಂಡಿದೆ. ಅಡಿಕೆ ದಾಸ್ತಾನು ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. ನೈಟ್ರೋಜನ್‌ ಗ್ಯಾಸ್‌ ಬಳಕೆ ಈ ಪ್ರಯತ್ನದ ಹೆಜ್ಜೆ.

ಅಡಿಕೆ ಬೆಳೆಗಾರರ ಎಲ್ಲರಲ್ಲೂ ಇರುವ ಚರ್ಚೆ , ಅಡಿಕೆ ಹಾಳಾಗದಂತೆ ದಾಸ್ತಾನು ಇಡುವುದು  ಹೇಗೆ ?. ಎಲ್ಲರಲ್ಲೂ ಇರುವ ಸುಲಭ ವಿಧಾನ ಅಡಿಕೆಗೆ ಮಾತ್ರೆ ಹಾಕಿ ದಾಸ್ತಾನು ಇಡುವುದು. ಈಚೆಗೆ ಕೆಲವು ಸಮಯಗಳಿಂದ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಅಡಿಕೆಗೆ ಹಾಕುವ ಮಾತ್ರೆಯಿಂದಾಗಿಯೇ ಅಡಿಕೆ ಹಾನಿಕಾರಕವಾಗುತ್ತಿದೆ ಎನ್ನುವುದು ಚರ್ಚೆಯ ವಿಷಯ. ಹಾಗಿದ್ದರೆ ಏನು ಮಾಡಬಹುದು ಪರ್ಯಾಯ ಎನ್ನುವುದಕ್ಕೆ ಉತ್ತರ ಇದ್ದಿರಲಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಈ ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. (ರಾಮ್‌ ಕಿಶೋರ್‌ ಮಂಚಿ ಅವರ ಸಂದರ್ಶನದ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ…..)

ಪಿಂಗಾರ ಸಂಸ್ಥೆಯು ಕಳೆದ ವರ್ಷದಿಂದಲೇ ಈ ಅಧ್ಯಯನ ಆರಂಭ ಮಾಡಿದೆ. ಅಡಿಕೆ ದಾಸ್ತಾನು ಮಾಡಲು ಮಾತ್ರೆಯ ಬದಲಾಗಿ ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡಿದೆ. ದಾಸ್ತಾನು ಕೋಣೆಯ ಒಳಗಡೆ ಗಾಳಿಯಾಡದಂತೆ ಎಚ್ಚರಿಸಿ ವಹಿಸಿ, ದಾಸ್ತಾನು ಕೊಠಡಿಯ ಒಳಗೆ ನೈಟ್ರೋಜನ್‌ ಗ್ಯಾಸ್‌ ತುಂಬಿಸುವ ಮೂಲಕ ಯಾವುದೇ ಕೀಟಗಳು ಕ್ರಿಯಾಶೀಲವಾಗದಂತೆ ಮಾಡುವ ಕೆಲಸವನ್ನು ಮಾಡಿದೆ. ಹೀಗಾಗಿ ಅಡಿಕೆ ಯಾವುದೇ ರಾಸಾಯನಿಕ ಇಲ್ಲದೆಯೇ ಗುಣಮಟ್ಟ ಕಾಯ್ದುಕೊಂಡಿರುವುದು  ಪಿಂಗಾರ ಸಂಸ್ಥೆ ಗಮನಿಸಿದೆ. ಇದೀಗ ಬೆಳೆಗಾರರಿಗೂ ಈ ಮಾಹಿತಿ ನೀಡಿ, ಮುಂದೆ ಆಸಕ್ತ ಕೃಷಿಕರ ಅಡಿಕೆಯನ್ನೂ ದಾಸ್ತಾನು ಇರಿಸಲು ಹೆಜ್ಜೆ ಇರಿಸಿದೆ.

ರಾಮ್‌ ಕಿಶೊರ್‌ ಮಂಚಿ

ಈ ಪ್ರಯತ್ನ ಎಲ್ಲೆಡೆಯೂ ಮಾಡಬಹುದಾಗಿದೆ. ಆಹಾರ ಪದಾರ್ಥಗಳ ರಕ್ಷಣೆ, ದಾಸ್ತಾನುನಲ್ಲಿಯೂ ಬಳಕೆ ಮಾಡಬಹುದು  ಎಂದು ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಹೇಳಿದ್ದಾರೆ. ಅಡಿಕೆಯು ಯಾವುದೇ ಹಾನಿಯಾಗದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ವಿವಿಧ ಬಗೆಯ ಅಡಿಕೆಯನ್ನು ಈ ಪ್ರಯೋಗದಲ್ಲಿ ಒಳಪಡಿಸಲಾಗಿದೆ, ಎಲ್ಲಾ ಬಗೆಯ ಅಡಿಕೆಯೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು  ಹೇಳುತ್ತಾರೆ ರಾಮ್‌ ಕಿಶೋರ್‌ ಮಂಚಿ.

 

ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

6 hours ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

13 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

13 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

14 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

24 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

1 day ago