‘ಅಪಾಯಕಾರಿ ರಾಸಾಯನಿಕಗಳ(Chemical) ಬದಲು ಹಲವು ಸಾವಯವ(Organic) ಪರ್ಯಾಯಗಳಿವೆ’ ಎಂಬ ಮಾತು ಸಾವಯವ ಚಿಂತನಗಳಲ್ಲಿ ಕೇಳುತ್ತೇವೆ. ಕೃತಕ ಅಪಾಯಕಾರಿ(Danger) ರಾಸಾಯನಿಕಗಳ ಬದಲು ಅಷ್ಟೇ ಅಪಾಯಕಾರಿಯಾಗಿರುವ ಸಾವಯವ ಪರ್ಯಾಯಗಳನ್ನು ಹುಡುಕುವುದು ಸಾವಯವದ ಮೂಲ ಆಶಯ ಅಲ್ಲ. ‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ(Natural).
‘ಸಾವಯವ’ ಅನ್ನುವುದು ಪ್ರಾಕೃತಿಕ ಸಂಬಂಧಗಳನ್ನು -ಗುಣಗಳನ್ನು ಅರಿವಿಗೆ ತರುವ-ಅವೆಲ್ಲವುಗಳ ಜೊತೆ ಅವಿನಾಭಾವತೆ ಅರಳಿಸುವ-ಉಳಿಸುವ ವಿಶಿಷ್ಠ ಜೀವಕಲೆ. – ಗೋಮೂತ್ರ-ಗೋಮಯವನ್ನೇ ಹಾಕಿ ಬೆಳೆದು ಕೊನೆಯಲ್ಲಿ ‘ನಾನೇ ಬೆಳೆದದ್ದು’, ‘ನನ್ನ ಕ್ಷೇತ್ರದ ಇಳುವರಿ ಇಷ್ಟು’ ಎಂದು ಬೀಗುವ ಮಾತು ‘ಸಾವಯವ’ ಆದೀತೆ ? – ‘ನಾವು ಬೆಳೆದೆವು-ನಮ್ಮಲ್ಲಿ ಬೆಳೆಯಿತು – ಪ್ರಕೃತಿ ಬೆಳೆಸಿತು’ ಎನ್ನುವ ಮಾತುಗಳು ‘ಸಾವಯವ’. ಉಪಕೃತಭಾವದ ಮಾತು ‘ಸಾವಯವ’. – ವಿನೀತಭಾವದಿಂದ ಬೆಳೆದ ಬೆಳೆಗೆ ಪ್ರಕೃತಿ ಕೊಡುವ ಪ್ರಮಾಣ ‘ಸಾವಯವ’. – ‘ರಾಸಾಯನಿಕ ರಹಿತ’ ಎನ್ನುವುದಷ್ಟಕ್ಕೆ ‘ಸಾವಯವ’ ಸೀಮಿತವಾದ್ದಲ್ಲ. – ‘ಸಾವಯವ’ ಎನ್ನುವುದು ನಮ್ಮನ್ನು ಹಿರಿದು ಮಾಡುವ ಮಾತು. ಎಲ್ಲದರೊಳಗೊಂದು ಮಾಡುವ ಮಾತು. ‘ನಾನು’ ಎಂಬ ಭಾವವನ್ನು ಅಳಿಸುವ ಮಾತು. ‘ನಾವು’ ಎಂಬ ಪ್ರಜ್ಞೆಯನ್ನು ಪೋಷಿಸುವ ಮಾತು. – ‘ನಾನು’ ಎನ್ನುವುದೆ ರಾಸಾಯನಿಕ. ‘ನಾವು’ ಎನ್ನುವುದು ‘ಸಾವಯವ’. ದೃಷ್ಟಿ ಸರಿಯಿರದೆ ನೋಟ ಸರಿಯಾಗುವುದೆ ? ಎಂಬ ಪ್ರಶ್ನೆ ಹಲವು ಸಾವಯವ ಗೋಷ್ಠಿಗಳಲ್ಲಿ ಕಾಡುತ್ತಿರುತ್ತದೆ…
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…