‘ಅಪಾಯಕಾರಿ ರಾಸಾಯನಿಕಗಳ(Chemical) ಬದಲು ಹಲವು ಸಾವಯವ(Organic) ಪರ್ಯಾಯಗಳಿವೆ’ ಎಂಬ ಮಾತು ಸಾವಯವ ಚಿಂತನಗಳಲ್ಲಿ ಕೇಳುತ್ತೇವೆ. ಕೃತಕ ಅಪಾಯಕಾರಿ(Danger) ರಾಸಾಯನಿಕಗಳ ಬದಲು ಅಷ್ಟೇ ಅಪಾಯಕಾರಿಯಾಗಿರುವ ಸಾವಯವ ಪರ್ಯಾಯಗಳನ್ನು ಹುಡುಕುವುದು ಸಾವಯವದ ಮೂಲ ಆಶಯ ಅಲ್ಲ. ‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ(Natural).
‘ಸಾವಯವ’ ಅನ್ನುವುದು ಪ್ರಾಕೃತಿಕ ಸಂಬಂಧಗಳನ್ನು -ಗುಣಗಳನ್ನು ಅರಿವಿಗೆ ತರುವ-ಅವೆಲ್ಲವುಗಳ ಜೊತೆ ಅವಿನಾಭಾವತೆ ಅರಳಿಸುವ-ಉಳಿಸುವ ವಿಶಿಷ್ಠ ಜೀವಕಲೆ. – ಗೋಮೂತ್ರ-ಗೋಮಯವನ್ನೇ ಹಾಕಿ ಬೆಳೆದು ಕೊನೆಯಲ್ಲಿ ‘ನಾನೇ ಬೆಳೆದದ್ದು’, ‘ನನ್ನ ಕ್ಷೇತ್ರದ ಇಳುವರಿ ಇಷ್ಟು’ ಎಂದು ಬೀಗುವ ಮಾತು ‘ಸಾವಯವ’ ಆದೀತೆ ? – ‘ನಾವು ಬೆಳೆದೆವು-ನಮ್ಮಲ್ಲಿ ಬೆಳೆಯಿತು – ಪ್ರಕೃತಿ ಬೆಳೆಸಿತು’ ಎನ್ನುವ ಮಾತುಗಳು ‘ಸಾವಯವ’. ಉಪಕೃತಭಾವದ ಮಾತು ‘ಸಾವಯವ’. – ವಿನೀತಭಾವದಿಂದ ಬೆಳೆದ ಬೆಳೆಗೆ ಪ್ರಕೃತಿ ಕೊಡುವ ಪ್ರಮಾಣ ‘ಸಾವಯವ’. – ‘ರಾಸಾಯನಿಕ ರಹಿತ’ ಎನ್ನುವುದಷ್ಟಕ್ಕೆ ‘ಸಾವಯವ’ ಸೀಮಿತವಾದ್ದಲ್ಲ. – ‘ಸಾವಯವ’ ಎನ್ನುವುದು ನಮ್ಮನ್ನು ಹಿರಿದು ಮಾಡುವ ಮಾತು. ಎಲ್ಲದರೊಳಗೊಂದು ಮಾಡುವ ಮಾತು. ‘ನಾನು’ ಎಂಬ ಭಾವವನ್ನು ಅಳಿಸುವ ಮಾತು. ‘ನಾವು’ ಎಂಬ ಪ್ರಜ್ಞೆಯನ್ನು ಪೋಷಿಸುವ ಮಾತು. – ‘ನಾನು’ ಎನ್ನುವುದೆ ರಾಸಾಯನಿಕ. ‘ನಾವು’ ಎನ್ನುವುದು ‘ಸಾವಯವ’. ದೃಷ್ಟಿ ಸರಿಯಿರದೆ ನೋಟ ಸರಿಯಾಗುವುದೆ ? ಎಂಬ ಪ್ರಶ್ನೆ ಹಲವು ಸಾವಯವ ಗೋಷ್ಠಿಗಳಲ್ಲಿ ಕಾಡುತ್ತಿರುತ್ತದೆ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…