Advertisement
ಅನುಕ್ರಮ

ನಿತ್ಯ ಜಂಜಡದ ನಡುವೆ……… ಉಪ್ಪಿನಕಾಯಿಯ ಚಿಂತೆ..!

Share

ಸುಮಾರು ಎರಡು ತಿಂಗಳಿನಿಂದ ನಿತ್ಯ ಮುಂಜಾನೆಯ ತೋಟದ ವಾಕಿಂಗ್ ಕೊನೆಯಾಗಿದೆ…. ಎಂತ ಹೇಳುತ್ತಿದ್ದಾಳೆ ಅನ್ನಿಸಿತಾ? ಈ ವರುಷದ ಕಾಡು ಮಾವಿನ ಹಣ್ಣು ಮುಗಿಯಿತು ಎಂಬುದು ವಿಷಯ. ಎರಡು ಮೂರು ಕವರ್ ತಗೊಂಡು ಬೇರೆ ಬೇರೆ ಜಾತಿಯ ಮಾವಿನ ಹಣ್ಣು ಹೆಕ್ಕಲು ಓಡೋಡಿ ಹೋಗುತ್ತಿದ್ದ ಕೆಲಸಕ್ಕೆ ಸದ್ಯ ವಿರಾಮ. ಇನ್ನು ಮುಂದಿನ ವರ್ಷ. ಯಾವ ಮಾವಿನ ಮರ ಫಲ ಬಿಡ ಬಹುದು?

ಉಪ್ಪಿನಕಾಯಿ ಮಿಡಿ ಹಾಕುವ ಮರ ಈ ಬಾರಿ ಹೂ ಬಿಟ್ಟಿತ್ತು ಆದರೆ ಉಳಿಯಲಿಲ್ಲ. ಮುಂದಕ್ಕೆ ಆಗ ಬಹುದೋ ಇಲ್ಲವೋ ಗೊತ್ತಿಲ್ಲ. ಸ್ವಲ್ಪ ಹಾಕಿದ ಉಪ್ಪಿನಕಾಯಿ ಸಾಕಗ ಬಹುದೋ ಗೊತ್ತಿಲ್ಲ. ನೆಕ್ಕರೆ ಮಾವಿನಕಾಯಿಯ ತುಂಡು ಉಪ್ಪಿನಕಾಯಿಯೇ ಗತಿಯಾ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ಸ್ವಲ್ಪ ಬೇಯಿಸಿದ ತುಂಡು ಹಾಕಿ ಇಟ್ಟು ಕೊಂಡರೆ ಧೈರ್ಯ ಅಂತ ಮಾಡಿ ಇಟ್ಟದ್ದೂ ಆಗಿದೆ. ಮನೆ ಎಂದ ಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.

ನಿತ್ಯ ಕಾರ್ಯಕ್ರಮಕ್ಕೆ ಹೋಗಿ ಗಡದ್ದು ಊಟ ಮಾಡಿ ಬಾಯಿ ಕೆಟ್ಟಾಗ ಲಿಂಬೆಹುಳಿಯ ಚಪ್ಪೆ ಉಪ್ಪಿನಕಾಯಿ ಮಜ್ಜಿಗೆಗೆ ಸರಿಸಾಟಿಯಾದದ್ದು ಬೇರೆ ಯಾವುದೂ ಇಲ್ಲ. ಅದರಲ್ಲೂ ಈ ಉಪ್ಪಿನಕಾಯಿಗೆ ಬೇವಿನ ಸೊಪ್ಪು, ಗಾಂಧಾರಿ ಮೆಣಸು, ಶುಂಠಿಯ ಸಣ್ಣ ತುಂಡು, ಬೆಳ್ಳುಳ್ಳಿಯ ಕೊಚ್ಚಲು ತೆಂಗಿನ ಎಣ್ಣೆಯ ಒಗ್ಗರಣೆಗೆ ಲಿಂಬೆ ಹುಳಿಯ ರಸ ತೆಗೆದ ಸಿಪ್ಪೆಯ ಪುಟ್ಟ ತುಂಡುಗಳನ್ನು ಹಾಕಿ ಮಾಡಿದ ಉಪ್ಪಿನ ಕಾಯಿ ಸೂಪರ್. ಒಮ್ಮೆ ಮಾಡಿ ಹೇಳಿ ಆಯ್ತಾ!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

4 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

24 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 days ago