ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಸುಲಭ ಮಾತಲ್ಲ. ಯಾವುದೇ ದೂರು ವಿಭಾಗ ಇದ್ದರೂ ಗ್ರಾಮೀಣ ಭಾಗದಲ್ಲಿ ಯಾರಿಗೇ ಆದರೂ ಕೆಲಸ ಮಾಡಲು ಮನಸ್ಸು ಹಾಗೂ ಶಕ್ತಿ ಮತ್ತು ಯುಕ್ತಿ ಅಗತ್ಯವಿದೆ. ಅಂತಹ ಯುಕ್ತಿಯ ಹಾಗೂ ಸಾಹಸದ ತಂಡವೊಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಪ್ರದೇಶದಲ್ಲಿದೆ.
ಕಳೆದ ಬಾರಿ ಮಳೆ ಹಾಗೂ ಭಾರೀ ಪ್ರವಾಹವು ಕಲ್ಮಕಾರಿನಿಂದ ತೊಡಗಿ ಕೊಲ್ಲಮೊಗ್ರ, ಹರಿಹರ ಪ್ರದೇಶದಲ್ಲಿ ಸಂಕಷ್ಟ ತಂದಿತ್ತು. ವಿದ್ಯುತ್ ಕಂಬಗಳು ಉರುಳಿತ್ತು, ತಂತಿಗಳು ಬಿದ್ದಿದ್ದವು. ಆದರೆ ಇಲ್ಲಿನ ಮೆಸ್ಕಾಂ ತಂಡ ಹಾಗೂ ಖಾಸಗಿ ಕೆಲಸಗಾರರು ಮತ್ತು ಊರಿನ ಯುವಕರು ಹಾಗೂ ನಿತ್ಯಾನಂದ ಹರಿಹರ ಮತ್ತು ತಂಡದಿಂದ ಎರಡೇ ದಿನದಲ್ಲಿ ಇಡೀ ಊರಿಗೆ ವಿದ್ಯುತ್ ಸಂಪರ್ಕ ಒದಗುವಂತೆ ಮಾಡಿದ್ದರು. ಹೀಗಾಗಿ ಇಡೀ ಊರಿನ ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು.
ಅದೇ ತಂಡ ಎರಡು ದಿನಗಳ ಹಿಂದೆ ಹರಿಹರ ಬಳಿಯ ಗುಂಡಡ್ಕ ಹೊಳೆಯಲ್ಲಿ ವೈರ್ ತುಂಡಾಗಿ ಬಿದ್ದಿತ್ತು ಅದನ್ನು ತಕ್ಷಣವೇ ದುರಸ್ತಿ ಮಾಡಿದ್ದಾರೆ. ಹರಿಹರದ ಪವರ್ ಮ್ಯಾನ್ ಗಳಾದ ಪ್ರಶಾಂತ, ಮಾರುತಿ, ವಿಜಯ ಎಂಬ ಮೂರು ಜನರ ತಂಡ ನಿರಂತರ ಕೆಲಸ ಮಾಡಿದೆ. ಹರಿಹರ ಪಲ್ಲತ್ತಡ್ಕ ಎಂಬಲ್ಲಿ ವಯರ್ ತುಂಡಾಗಿ ಹೊಳೆಯಲ್ಲಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡಾ ಹೊಳೆಯಲ್ಲಿ ಈಜಿ ವಯರನ್ನು ಎಳೆದು ಕಟ್ಟಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇಂತಹ ಪವರ್ ಮ್ಯಾನ್ ಗಳೇ ಮೆಸ್ಕಾಂನ ನಿಜವಾದ ಆಸ್ತಿಗಳು ಎಂದು ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…