ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಈಚೆಗೆ ‘ಪುಸ್ತಕ ಸಂತೆ’ ಸಂಪನ್ನಗೊಂಡಿತು. ಇದರ ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ ಸಾಹಿತ್ಯ ಪರಿಚಾರಕ ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರನ್ನು ಸಂಮಾನಿಸಲಾಯಿತು.
ಈ ಸಂದರ್ಭದಲ್ಲಿ “ಜೀವನದಲ್ಲಿ ಆಸಕ್ತಿಗಳನ್ನು ಸಕ್ರಿಯಗೊಳಿಸಿದಾಗ ಅದು ಇತರರಿಗೆ ‘ಹುಚ್ಚು’ ಎಂದೆನಿಸಿಕೊಳ್ಳುತ್ತದೆ. ಇಂತಹ ಹುಚ್ಚುಗಳೇ ಬದುಕಿಗೆ ಸುಭಗತನವಾಗುತ್ತದೆ. ಓದುವ ಆಸಕ್ತಿ ಬೆಳೆಯುತ್ತದೆ” ಎಂದು ತನ್ನ ಅನುಭವವನ್ನು ಪ್ರಸ್ತುತ ಪಡಿಸಿದ ಪ್ರಕಾಶರನ್ನು ಶಾಲು, ಹಾರ, ಸ್ಮರಣಿಕೆ, ಪುಸ್ತಕಗಳು ಮತ್ತು ನಗದು ಮೊತ್ತದೊಂದಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್, ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಉಪಸ್ಥಿತರಿದ್ದು ಸಂಮಾನಿತರ ಸದ್ದಿಲ್ಲದ ಸಾಹಿತ್ಯ ಕೈಂಕರ್ಯಗಳನ್ನು ನೆನಪಿಸಿಕೊಂಡರು. ಪುಸ್ತಕ ಪ್ರಕಾಶನ, ಸಂಚಾರಿ ಪುಸ್ತಕ ಮಳಿಗೆ, ಸದಭಿರುಚಿಯ ಪುಸ್ತಕಗಳ ಪ್ರಕಟಣೆ, ಸಾಹಿತಿಗಳ ಸಂಪರ್ಕ ಜತೆಗೆ ನಿರಂತರ ಓದು. ಪ್ರಕಾಶ್ ಕೊಡೆಂಕಿರಿಯವರ ಸದ್ದಿಲ್ಲದ ಕಾಯಕಗಳು. 2004ರಲ್ಲಿ ‘ಪ್ರಥಮ ಗೃಹ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ತನ್ನ ಮನೆಯಲ್ಲೇ, ಸ್ವ-ವೆಚ್ಚದಲ್ಲಿ ಏರ್ಪಡಿಸಿರುವುದು ಮೇಲ್ಪಂಕ್ತಿ.
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…
ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…