ಇತ್ತೀಚೆಗಿನ ಕೆಲ ವರ್ಷಗಳಿಂದ ಹವಾಮಾನದಲ್ಲಿ ಭಾರೀ ಬದಲಾವಣೆಗಳು ಕಾಣುತ್ತಿದೆ. ಅತಿಯಾದ ತಾಪಮಾನ ಹಾಗೂ ಅತಿಯಾದ ಮಳೆಯಿಂದ ಕೃಷಿ ಹಾನಿಯಾಗುತ್ತಿದೆ. ಈಗ ಮಳೆ ಅಬ್ಬರದ ಕಾರಣದಿಂದ ಮಳೆಯಾಧಾರಿತ ಕೃಷಿಗಳಲ್ಲಿ ನಷ್ಟ ಉಂಟಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ ಇತರ ರಾಜ್ಯಗಳಲ್ಲೂ ಈ ಸಮಸ್ಯೆ ಹೆಚ್ಚಾಗಿದೆ.
ಮಹಾರಾಷ್ಟ್ರದ ಕೆಲವು ಪ್ರದೇಶದ ರೈತರು ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಿರಂತರ ಮಳೆಯಿಂದಾಗಿ ತೀವ್ರ ಹೊಡೆತವನ್ನು ಅನುಭವಿಸಿದರು. ಜುಲೈ 2022 ರಲ್ಲಿ ರೈತರು ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದರು. ಮಹಾರಾಷ್ಟ್ರದ ಔರಂಗಾಬಾದ್ನ ವಿಭಾಗೀಯ ಕಮಿಷನರೇಟ್ ಪ್ರಕಾರ, 4.48 ಮಿಲಿಯನ್ ರೈತರು ತೀವ್ರ ಬೆಳೆ ಹಾನಿಯನ್ನು ಅನುಭವಿಸಿದ್ದಾರೆ. ಇದು ಈಚೆಗೆ ಹೆಚ್ಚಾಗುತ್ತಿದೆ. ಅನಿರೀಕ್ಷಿತ ಮಳೆಯಿಂದಾಗಿ ಸುಮಾರು 36,52,872 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ, ಅದರಲ್ಲಿ 35,34,371 ಹೆಕ್ಟೇರ್ ಮಳೆಯಾಶ್ರಿತವಾಗಿದೆ. ಈ ಋತುವಿನಲ್ಲಿ ಔರಂಗಾಬಾದ್, ಬೀಡ್ ಮತ್ತು ಲಾತೂರ್ ಜಿಲ್ಲೆಗಳಲ್ಲಿ ಒಟ್ಟು ಬಿತ್ತನೆ ಪ್ರದೇಶವು ಸುಮಾರು 20,67,896 ಹೆಕ್ಟೇರ್ ಎಂದು ಇಲಾಖೆ ವರದಿ ಮಾಡಿದೆ.
ರಾಜ್ಯದಲ್ಲಿ ಕೂಡಾ ಅದೇ ಮಾದರಿಯಲ್ಲಿ ಮಳೆಯಿಂದಾಗಿ ಕೃಷಿ ಹಾನಿಯಾಗಿದೆ. ಬೀದರ ಜಿಲ್ಲೆಯ ರೈತನೊಬ್ಬ ಮಳೆಯಿಂದಾದ ಹಾನಿಯನ್ನು ವಿವರಿಸುತ್ತಾ, ಸೆಪ್ಟೆಂಬರ್ ತಿಂಗಳು ಬೆಳೆಗಳು ಕೊಯ್ಲು ಪ್ರಾರಂಭವಾಗುವ ತಿಂಗಳು. ಈ ಸಮಯದಲ್ಲಿ ಮಳೆಯಾದರೆ ವಿಪರೀತ ನಷ್ಟವಾಗುತ್ತದೆ ಎನ್ನುತ್ತಾರೆ. ಇನ್ನೊಬ್ಬ ರೈತ ಹತ್ತಿ ಬೆಳೆಯ ಸಂಕಷ್ಟದ ಬಗ್ಗೆ ಮಾತನಾಡಿ ನಾನು ಮೂರು ಎಕರೆ ಭೂಮಿಯಲ್ಲಿ ಹತ್ತಿ ಬೆಳೆದಿದ್ದೇನೆ. ಕಳೆದ ತಿಂಗಳ ಮಳೆಯಿಂದ ಬೆಳೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಕಾರಣದಿಂದ ಈಗ ಸಮಸ್ಯೆಯಾಗುವುದು ಕೃಷಿಗೆ. ಯಾವುದೇ ರೀತಿಯ ಕೀಟಬಾಧೆಯಾಗದಂತೆ ರೈತರು ಮುನ್ನೆಚ್ಚರಿಕೆ ವಹಿಸಿ ಸಾಕಷ್ಟು ಎಚ್ಚರಿಕೆಯಿಂದ ಕೃಷಿ ಮಾಡುತ್ತಾರೆ. ಸಕಾಲದಲ್ಲಿ ಗೊಬ್ಬರವ್ನನೂ ನೀಡುತ್ತಾರೆ. ಆದರೆ ಬೆಳ ಕಟಾವಿಗೆ ಬರುವಾಗ ಅಥವಾ ಹೂವು ಬಿಡಲು ಆರಂಭವಾಗುವ ವೇಳೆ ಮಳೆಯಾದರೆ ಕೃಷಿ ನಷ್ಟವಾಗುತ್ತದೆ, ಕೃಷಿಯ ಶ್ರಮ ವ್ಯರ್ಥವಾಗುತ್ತದೆ.
ಇತ್ತೀಚೆಗೆ ಅಕಾಲದಲ್ಲಿ ಮಳೆಯಾಗುವ ಕಾರಣದಿಂದ ತರಕಾರಿ, ಭತ್ತ, ಬಾಳೆ, ಸೇರಿದಂತೆ ಧಾನ್ಯಗಳಿಗೆ ಹಾನಿಯಾದರೆ ಈ ಕಡೆಗೆ ಅಡಿಕೆ ಒಣಗಿಸಲು, ಕೊಳೆರೋಗದಂತಹ ಬೆಳೆಗಳೂ ಸಂಕಷ್ಟದಲ್ಲಿವೆ. ಹೀಗಾಗಿ ಈಚೆಗೆ ಕೃಷಿಕರ ವಲಯದಲ್ಲಿಯೇ ಹವಾಮಾನ ಬದಲಾವಣೆ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…
ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…
ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ…
ಪ್ರಕೃತಿ ವಿಕೋಪದಿಂದ ಅಡಿಕೆ ತೋಟಗಳಿಗೆ ಆಗುವ ನಷ್ಟಕ್ಕೆ ಸಿಗುತ್ತಿರುವ ಎನ್ಡಿಆರ್ಎಫ್ ಪರಿಹಾರ ಮೊತ್ತ…
ತಮಿಳುನಾಡಿನ ಪನ್ರುಟಿ ಪಟ್ಟಣವನ್ನು ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿನ…
ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ…