Advertisement
ಸಾಹಿತ್ಯ

ಅದೊಂದು ಮರೆಯದ ದಿನ…… |

Share
ಯುವ ಬರಹಗಾರ್ತಿ ಅನನ್ಯ ಅವರು ಕಥೆ ಬರೆದಿದ್ದಾರೆ. ಅದರ ಯಥಾ ರೂಪ ಇಲ್ಲಿದೆ…

ನಾನೊಬ್ಬಳು ದ್ವಿತೀಯ ಪಿಯುಸಿ ಹುಡುಗಿ ಪರೀಕ್ಷೆಯ ದಿನದ ಸಮಯದಲ್ಲಿ ನಾನೊಬ್ಬಳೇ ಮನೆಯಲ್ಲಿ ಓದುವ ಕ್ಷಣ. ಸಂಬಂಧಿಕರ ಮನೆಯಲ್ಲಿ ವಿಜ್ರಂಭಣೆಯಿಂದ ನಡೆಯುವ ಮದುವೆ ಸಮಾರಂಭಕ್ಕೆ ಮನೆಯವರೆಲ್ಲಾ ನೀನು ಬರಬೇಡ ನಿನಗೆ ಪರೀಕ್ಷೆರಲ್ಲವೇ ಓದಿ ಎಲ್ಲಾ ಮುಗಿಸು ಯಾರು ಇರಲ್ಲ ಮನೆಯಲ್ಲಿ ಯಾರದ್ದೂ ಸಹ ಕಿರಿಕಿರಿ ಗಲಭೆಗಳಿಲ್ಲವಲ್ಲ ಎಂದು ಹೊರಟು ಹೋದರು.

Advertisement
Advertisement

ನಾನು ಕೋಪ ಬೇಜಾರವನ್ನು ಮುಂದಿಟ್ಟುಕೊಂಡು ಮನಸಿಲ್ಲದಿದ್ದರು ಓದಿ ಮುಗಿಸುವೆ ಎಂದು ಕುಳಿತುಕೊಂಡೆ. ಓದಲು ಕೂತ ಕ್ಷಣ ಒಂದು ಮಾತ್ರ ನೆನಪು ಇದೆ…. ಮತ್ತೇನಾಯಿತು ಎಂದು ಅರಿವಿಲ್ಲ. ಹೊಟ್ಟೆಗೆ ಊಟ, ನೀರು ಇಲ್ಲದೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡು ಓದಿರೋದರಲ್ಲಿ ಕಣ್ಣು ಮುಚ್ಚಿ ನಿದ್ದೆ ಹೋಗಿರುವುದು ಗೊತ್ತೇ ಇಲ್ಲ.

Advertisement

ಎಚ್ಚರವಾದಾಗ ಎದ್ದು ನೋಡಿದರೇ ಏನೂ ಗೊತ್ತಾಗುತ್ತಿಲ್ಲ ಓದಲು ಹಿಡಿದಿದ್ದ ಪುಸ್ತಕಗಳು ಎಲ್ಲಾ ಹರಿದು ನೆಲದಲ್ಲಿ ಉರುಳಿ ಬಿದ್ದಿದೆ. ಬಾಗಿಲು ಕಿಟಕಿಗಳೆಲ್ಲ ತೆರೆದು ಗಾಳಿಗೆ ಬಡಿಯುತ್ತಾ ಶಬ್ದ ಬರುತ್ತಿತ್ತು. ಗಡಿಯಾರದ ಕಡೆ ಕಣ್ಣು ಹಾಯಿಸಿದರೆ ಒಂದು ಕ್ಷಣ ಎದೆಗೆ ಬಡಿದಂತಿತ್ತು. ಹೊತ್ತು ದಾಟಿ ರಾತ್ರಿ 8 ಗಂಟೆ ಆಗಿ ಬಿಟ್ಟಿತ್ತು.

ಮನೆಯಲ್ಲಾ ಹುಡುಕಾಡಿದರೂ ಅಮ್ಮ ಸಿಗಲೇ ಇಲ್ಲ. ಅಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಮರೆತುಬಿಟ್ಟು ಹುಡುಕಾಡಿರುವೆ ಎಂದು ತಡವಾಗಿ ಅರಿವಾಯಿತು. ಕಣ್ಣೀರು ಹಾಕುತ್ತಲೇ ತಿನ್ನಲು ಏನಾರು ಮಾಡಬೇಕೆಂದು ಅಡುಗೆ ಮನೆ ಕಡೆಗೆ ಹೋಗುವೆ. ಮಾಡಲು ಏನೂ ಗೊತ್ತಿಲ್ಲದಿದ್ದರೂ, ಮಾಡಿಕೊಂಡು ತಿನ್ನುವುದು ಅನಿವಾರ್ಯವಾಗಿದ್ದರಿಂದ ಅನ್ನ ಬೇಯಿಸಿ ಹೆಂಗೋ ಒಂದು ಸಪ್ಪೆ ಸಪ್ಪೆಯಾದ ಸಾಂಬಾರು ಮಾಡಿ ಊಟ ಮಾಡಿದೆ ಅದು 10 ಗಂಟೆ ಕಳೆದ ನಂತರ.

Advertisement

ಇನ್ನೂ ಮಲಗುವುದಾ… ಅಲ್ಲಾ… ಓದುವುದಾ ಎಂದು ಅರಿತಿಲ್ಲ… ಈಚೆ ನೋಡಿದರೆ ನಾಳೆಯ ಪರೀಕ್ಷೆಗೆ ಬೇಕಾದ ಪಾಠಗಳೇ ಓದಿ ಆಗಿಲ್ಲ. ಮಲಗುದು ಎಂದರೇ ಮನೆಯಲ್ಲಿ ಯಾರಿಲ್ಲ ಎಂಬ ಭಯ. ಈ ಕರಾಳ ದಿನ ಎಂದೂ ನನಗೆ ಬರುವುದು ಬೇಡ ಎಂದೂ ದೇವರ ಮೊರೆ ಹೋದೆ.

ದೇವರನ್ನು ಪ್ರಾರ್ಥಿಸುವಾಗಲೇ ಹೊರಗಡೆಯಿಂದ ಏನೋ ವಿಚಿತ್ರ ಧ್ವನಿಯಲ್ಲಿ ನಾಯಿಗಳ ಕೂಗು. ಹೊರಗಡೆಯೂ ಹೋಗದೇ ಕುಳಿತಲ್ಲೇ ಕಣ್ಣು ಮುಚ್ಚಿ ಜೋರಾಗಿ ಅಳುತ್ತಾ ಅಲ್ಲೇ ಕುಳಿತೇ. ಭಯದಲ್ಲಿ ಅದೊಂದು ರಾತ್ರಿಯನ್ನು ಕಳೆದುಕೊಂಡಿರುವೆ.

Advertisement
ಮರುದಿನ ಕಾಲೇಜಿಗೆ ಹೋಗಿ ಗೆಳತಿಯರೊಂದಿಗೆ ನಡೆದ ಘಟನೆಯನ್ನು ಹೇಳುತ್ತಾ ದುಃಖ ಪಟ್ಟಿರುವೆ. ನಾನು ಎಷ್ಟು ದೊಡ್ಡವಳಾದರೂ, ಎಲ್ಲೇ ಹೋದರೂ ಇದೊಂದು ಕರಾಳ ಕ್ಷಣವನ್ನು ಎಂದೂ ಮರೆಯಲ್ಲ ಅಂದು ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಗೆಳತಿಯನ್ನು ಅಪ್ಪಿಕೊಂಡು ಮೌನವಾದೆ.
ಬರಹ:
# ಅನನ್ಯ ಎಚ್ ಸುಬ್ರಹ್ಮಣ್ಯ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

6 hours ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

15 hours ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

2 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

2 days ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

2 days ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

2 days ago