ರಕ್ಷಾಬಂಧನ ಎನ್ನುವುದು ಪ್ರೀತಿಯ ಸಂಕೇತವೂ ಹೌದು ರಕ್ಷಣೆಯ ಸಂಕೇತವೂ ಹೌದು. ಹಿಂದೆಲ್ಲಾ ಯುದ್ಧಕ್ಕೆ ತೆರಳುವ ವೇಳೆ ರಕ್ಷಣೆ ಹಾಗೂ ಗೆಲುವಿಗಾಗಿ ರಕ್ಷೆ ತೊಟ್ಟು ಮುನ್ನುಗ್ಗಿದ ಬಗ್ಗೆಯೂ ಪುರಾಣಗಳಲ್ಲಿ ತಿಳಿದರೆ, ಈಚೆಗೆ ಪ್ರೀತಿ, ಸ್ನೇಹ, ಸಹೋದರತ್ವದ ಉದ್ದೇಶದಿಂದಲೂ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ರಕ್ಷಾ ಬಂಧನವನ್ನು ರಸ್ತೆ ದುರಸ್ತಿಯ ಜೊತೆಗೆ ಆಚರಿಸಿದರು.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು – ಬೇಂಗತ್ತಮಲೆ- ಚಾಕೊಟೆ ರಸ್ತೆಯನ್ನು ಅಲ್ಲಿನ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಆ ಪ್ರದೇಶದ ಜನರ ಮೂಲಕ ದುರಸ್ತಿ ಮಾಡಲಾಯಿತು. ಅದರ ಜೊತೆಗೆ ರಕ್ಷಾಬಂಧನವನ್ನು ರಸ್ತೆಯಲ್ಲಿಯೇ ಕುಳಿತು ಆಚರಿಸಲಾಯಿತು. ಈ ಮೂಲಕ ರಸ್ತೆಯ ರಕ್ಷಣೆಯೂ ನಮ್ಮ ಜವಾಬ್ದಾರಿ ಎಂಬುದನ್ನು ಈ ಜನರು ಸಾಬೀತು ಮಾಡಿದರು. ಇದು ನಾಡಿನೆಲ್ಲೆಡೆಗೆ ಧನಾತ್ಮಕ ಸಂದೇಶ ಬೀರಿತು.
ಅನೇಕ ಸಮಯಗಳಿಂದ ಈ ಭಾಗದ ಜನರು ಈ ಗ್ರಾಮೀಣ ರಸ್ತೆ ದುರಸ್ತಿಯ ಬೇಡಿಕೆ ಇರಿಸಿದ್ದರು. ಅನುದಾನಗಳ ಕೊರತೆಯಿಂದ ಸಂಪೂರ್ಣ ದುರಸ್ತಿ ಆಗಿರಲಿಲ್ಲ. ಸಣ್ಣಪುಟ್ಟ ಕಾಂಕ್ರೀಟ್ ಕಾಮಗಾರಿಗಳಿಂದಲೇ ತೃಪ್ತಿ ಹೊಂದಬೇಕಾಗಿತ್ತು. ಹೀಗಾಗಿ ತಮ್ಮ ರಸ್ತೆಯ ರಕ್ಷಣೆಯನ್ನು ಗ್ರಾಪಂ ಸಹಕಾರದ ಮೂಲಕ ಈ ಬಾರಿ ಅಲ್ಲಿನ ಜನರೇ ವಹಿಸಿಕೊಂಡರು.
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…