ರಕ್ಷಾಬಂಧನ ಎನ್ನುವುದು ಪ್ರೀತಿಯ ಸಂಕೇತವೂ ಹೌದು ರಕ್ಷಣೆಯ ಸಂಕೇತವೂ ಹೌದು. ಹಿಂದೆಲ್ಲಾ ಯುದ್ಧಕ್ಕೆ ತೆರಳುವ ವೇಳೆ ರಕ್ಷಣೆ ಹಾಗೂ ಗೆಲುವಿಗಾಗಿ ರಕ್ಷೆ ತೊಟ್ಟು ಮುನ್ನುಗ್ಗಿದ ಬಗ್ಗೆಯೂ ಪುರಾಣಗಳಲ್ಲಿ ತಿಳಿದರೆ, ಈಚೆಗೆ ಪ್ರೀತಿ, ಸ್ನೇಹ, ಸಹೋದರತ್ವದ ಉದ್ದೇಶದಿಂದಲೂ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ರಕ್ಷಾ ಬಂಧನವನ್ನು ರಸ್ತೆ ದುರಸ್ತಿಯ ಜೊತೆಗೆ ಆಚರಿಸಿದರು.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು – ಬೇಂಗತ್ತಮಲೆ- ಚಾಕೊಟೆ ರಸ್ತೆಯನ್ನು ಅಲ್ಲಿನ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಆ ಪ್ರದೇಶದ ಜನರ ಮೂಲಕ ದುರಸ್ತಿ ಮಾಡಲಾಯಿತು. ಅದರ ಜೊತೆಗೆ ರಕ್ಷಾಬಂಧನವನ್ನು ರಸ್ತೆಯಲ್ಲಿಯೇ ಕುಳಿತು ಆಚರಿಸಲಾಯಿತು. ಈ ಮೂಲಕ ರಸ್ತೆಯ ರಕ್ಷಣೆಯೂ ನಮ್ಮ ಜವಾಬ್ದಾರಿ ಎಂಬುದನ್ನು ಈ ಜನರು ಸಾಬೀತು ಮಾಡಿದರು. ಇದು ನಾಡಿನೆಲ್ಲೆಡೆಗೆ ಧನಾತ್ಮಕ ಸಂದೇಶ ಬೀರಿತು.
ಅನೇಕ ಸಮಯಗಳಿಂದ ಈ ಭಾಗದ ಜನರು ಈ ಗ್ರಾಮೀಣ ರಸ್ತೆ ದುರಸ್ತಿಯ ಬೇಡಿಕೆ ಇರಿಸಿದ್ದರು. ಅನುದಾನಗಳ ಕೊರತೆಯಿಂದ ಸಂಪೂರ್ಣ ದುರಸ್ತಿ ಆಗಿರಲಿಲ್ಲ. ಸಣ್ಣಪುಟ್ಟ ಕಾಂಕ್ರೀಟ್ ಕಾಮಗಾರಿಗಳಿಂದಲೇ ತೃಪ್ತಿ ಹೊಂದಬೇಕಾಗಿತ್ತು. ಹೀಗಾಗಿ ತಮ್ಮ ರಸ್ತೆಯ ರಕ್ಷಣೆಯನ್ನು ಗ್ರಾಪಂ ಸಹಕಾರದ ಮೂಲಕ ಈ ಬಾರಿ ಅಲ್ಲಿನ ಜನರೇ ವಹಿಸಿಕೊಂಡರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.