Opinion

ಹೂವುಗಳೆಂದರೆ ಅದೇನೋ ಹೃದಯ ಬಿರಿಯುವುದು : ಆದರೆ ಈ ಪುಷ್ಪ ತರಬಲ್ಲ ಪುಷ್ಪ ಹೃದಯಾಘಾತಕ್ಕೆ ಕಾರಣವಾಗಬಲ್ಲುದು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಸ್ಯಗಳು ಔಷಧೀಯ ಗುಣಗಳನ್ನು(Medicinal plants) ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ(flower) ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ( Heart attack)ಕಾರಣ ಆಗಬಹುದೆಂದು ಅಧ್ಯಯನ ‌ತಿಳಿಸಿಕೊಟ್ಟಿದೆ. ಫಾಕ್ಸ್‌ಗ್ಲೋವ್‌(Foxglove)ಹೂವಿನ ಗಿಡ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.

Advertisement

ಹೃದಯವು ಸಾವಿರಾರು ಹೃದಯ ಕೋಶಗಳ ಮೂಲಕ ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಮೇಲೆ ಬಲವಾದ ಪರಿಣಾಮ ಬೀರುವ ಡಿಗೋಕ್ಸಿನ್‌ನಂತಹ ಶಕ್ತಿಯುಕ್ತ ಸಂಯುಕ್ತಗಳನ್ನು ಫಾಕ್ಸ್‌ಗ್ಲೋವ್ ಹೊಂದಿದೆ.

ಕಾರ್ಡಿಯಾಕ್ ಗೈಕೋಸೈಡ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಗ್ಲೋವ್‌ಗಳು ಹೃದಯ ಕೋಶಗಳಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಪಂಪ್ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಇದು ಹೃದಯ ಗಟ್ಟಿಯಾಗಿ ಮತ್ತು ವೇಗವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆಗಳಿದೆ ಎಂದು ತಜ್ಞರು ತಿಳಿಸಿದ್ದಾರೆ. ಗುಲಾಬಿ, ನೇರಳೆ, ಬಿಳಿ ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಫಾಕ್ಸ್‌ ಗೋವ ಮೂಲತಃ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಈಗ ಅಮೆರಿಕದಾದ ತೋಟಗಳಲ್ಲಿ ಅರಳುವುದನ್ನು ಕಾಣಬಹುದು.

ಗಿಡಮೂಲಿಕೆ ಔಷಧದಲ್ಲಿ ಇತಿಹಾಸ ಹೊಂದಿರುವ ಪಾಕ್ಸ್ ಗ್ಲೋವ್ ಬಗ್ಗೆ ಜನಪ್ರಿಯ ಗಾದೆ ಮಾತಿದೆ. ಫಾಕ್ಸ್‌ ಗ್ಲೋವ್‌ನಿಂದ ಸತ್ತವರನ್ನು ಎಬ್ಬಿಸಬಹುದು ಮತ್ತು ಜೀವಂತವಾಗಿರುವವರನ್ನು ಕೊಲ್ಲಬಹುದು ಎಂದು ಹೇಳುತ್ತಾರೆ. ಹೃದಯಾಘಾತದ ಸಂದರ್ಭದಲ್ಲಿ ಇತರ ಔಷಧ ವಿಫಲವಾದಾಗ ಡಿಗೋಕ್ಸಿನ್ ಅನ್ನು ಪ್ರಾಯೋಗಿಕವಾಗಿ ಸೂಚಿಸಲಾಗುತ್ತದೆ ಎಂದು ಡಾ.ಝನ್ ವಾಂಗ್ ಹೇಳಿದ್ದಾರೆ.

– ಅಂತರ್ಜಾಲ ಮಾಹಿತಿ

An American scientist has warned that the foxglove flower plant can cause heart attacks. The heart pumps blood around the body through thousands of cardiac cells. Foxglove contains powerful compounds like digoxin that have a strong effect on the heart
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

7 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

8 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

17 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

18 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

20 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

21 hours ago